Sunday, March 25, 2018

ಮೈತ್ರಿ ಪ್ರಕಾಶನದ ನಾಲ್ಕು ರತ್ನಗಳು ಹೊಳಪು ಕಂಡ ಕ್ಷಣ

"ಕೊಂಡು ತಂದು ಹೊತ್ತು ಮಾರಿ ಲಾಭಗಳಿಸಲು ವಿದ್ಯೆಯೇನೂ ಬಲೆಯ ಮಲಾರವೇ" ನಾಲ್ಕನೇ ತರಗತಿಯಲ್ಲಿ ರನ್ನನ ಊರುಭಂಗ ಪಾಠದಲ್ಲಿ ಅಜಿತಸೇನಾಚಾರ್ಯರು ವಿದ್ಯಾಕಾಂಕ್ಷಿ ರನ್ನನಿಗೆ ಹೇಳುವ ಮಾತಿದು..

ಇಂದಿನ ಸಮಾರಂಭ ಕಂಡಾಗ ಇದರ ಇನ್ನೊಂದು ಮಗ್ಗುಲು ನೋಡುವ ಹಾಗೆ ಆಯಿತು.. ಶ್ರೀಯುತ ಜೋಗಿಯವರು ಪುಸ್ತಕ ಬಿಡುಗಡೆ ಮಾಡಿ ಅದನ್ನು ಜಗತ್ತಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಹೇಳುತ್ತಾ ಕೆಲವು ಪ್ರಕಾಶಕರು ಅನುಸರಿಸುತ್ತಿದ್ದ ಮಾರ್ಗವನ್ನು ಹೇಳುತ್ತಾ ಹೋದಾಗ ನನಗೆ ಈ ಮೇಲಿನ ಮಾತು ನೆನಪಿಗೆ ಬಂತು. .

ಪುಸ್ತಕ ಬಿಡುಗಡೆ ಎಂದಾಗ  ಒಂದಷ್ಟು ಮಂದಿ ಬಂದು ಶುಭ ಹಾರೈಸಿ ಹೋಗುತ್ತಾರೆ ಎನ್ನುವ ವಾಡಿಕೆಯ ಮಾತಿಗೆ ವಾಡಿಯಾ ಸಭಾಂಗಣ ವಿರುದ್ಧವಾಗಿ ನಿಂತಿತ್ತು..

ಪ್ರಾರ್ಥನಾ ಗೀತೆಗಳನ್ನು ಹಾಡಿದ ಇಬ್ಬರೂ ಗಾಯಕರಿಂದ ಶುರುವಾದ ಕಾರ್ಯಕ್ರಮ.. ದೀಪ ಬೆಳಗಿ ನಂತರ ಸ್ವಾಗತ ಭಾಷಣ.. ನಂತರ ಬಂದ ಅತಿಥಿಗಳನ್ನು ಪರಿಚಯ ಮಾಡಿಸಿದ್ದು.. ಪುಸ್ತಕ  ಬಿಡುಗಡೆ ಎಲ್ಲವೂ ಸುಂದರವಾಗಿತ್ತು..

ಇಡೀ ಸಭಾಂಗಣ ತುಂಬಿ ತುಳುಕುತ್ತಿತ್ತು.. ಎಲ್ಲರ ಮೊಗದಲ್ಲಿಯೂ ಹಬ್ಬದ ಸಡಗರ ತುಂಬಿತ್ತು.. ಮೈತ್ರಿ ಪ್ರಕಾಶನ ತನ್ನ ಮಡಿಲಿನಿಂದ ನಾಲ್ಕು ಪುಸ್ತಕಗಳನ್ನು ಓದುಗರಿಗೆ ಒದಗಿಸಿದ್ದು.. ಮತ್ತೆ ಅದರ ವಿಶೇಷತೆ ನಾಲ್ಕು ಪುಸ್ತಕಗಳು ವಿಭಿನ್ನ ಮುಖ ಹೊತ್ತು ಮೂಡಿ ಬಂದವು..

ಭಿನ್ನ ಭಿನ್ನ ವಿಷಯ.. ಅದನ್ನು ಪ್ರಸ್ತುತ ಪಡಿಸಿದ ರೀತಿ ಎಲ್ಲವೂ ವಿಭಿನ್ನ ಹಾದಿಯನ್ನುತೋರಿಸುತ್ತಿತ್ತು.. ಈ ಎಲ್ಲಾ ಪುಸ್ತಕಗಳನ್ನು ಓದಿ ಮುಂದೆ ನನ್ನ ಮಸ್ತಕಕ್ಕೆ ಅರಿವಾದ ವಿಷಯಗಳನ್ನು ಹಂಚಿಕೊಳ್ಳುವ ತವಕ ಇದೆ.. ನೋಡೋಣ ಕಾಲಾಯ ತಸ್ಮೈ ನಮಃ..

ಶ್ರೀಯುತ ಜೋಗಿಯವರ ನೇರ ಮಾತುಗಳು ಸೊಗಸಾಗಿದ್ದವು.. ಶ್ರೀಮತಿ ಶೈಲಜಾ ನಾಗರಾಜ ಅವರ ಮಾತುಗಳು.. ಮುಂದೆ ತುರ್ತು ಕೆಲಸ ಇದ್ದ ಕಾರಣ ಶ್ರೀಯುತ ಸೇತುರಾಂ ಅವರ ಮಾತುಗಳನ್ನು ಕೇಳಲಾಗಲಿಲ್ಲ.. ಅದರ ವಿಡಿಯೋ ತುಣುಕು ಸಿಗಬಹುದೇನೋ ನೋಡೋಣ..

ಅನೇಕ ದಿನಗಳಾದ ಮೇಲೆ ಸಿಕ್ಕ ಸ್ನೇಹಿತರು.. ಮಾತುಗಳು.. ನಗು.. ಜೊತೆಯಲ್ಲಿ ಗೆಳೆಯರ ಮಿಲನ.. ಖುಷಿ ಕೊಟ್ಟಿತು..

ಇನ್ನೊಂದು ವಿಶೇಷ ಕಾದಿತ್ತು.. ಬಿಪಿ ವಾಡಿಯ ಸಭಾಂಗಣವನ್ನು ಸುಮಾರು ಮೂವತ್ತೈದು ವರ್ಷಗಳಿಂದ ನೋಡುತ್ತಿದ್ದೇನೆ.. ನನ್ನ ಬಾಲ್ಯದಲ್ಲಿ ವಾಡಿಯಾ ಪಕ್ಕದಲ್ಲಿದ್ದ ಲೈಬ್ರರಿಯಲ್ಲಿ ಕಾಮಿಕ್ ಪುಸ್ತಕಗಳನ್ನು ಓದಲು ಹೋಗುತ್ತಿದ್ದೆ.. ಈ ನಾಲ್ಕೈದು ವರ್ಷಗಳಲ್ಲಿ ಬ್ಲಾಗ್ ಗೆಳೆಯರ ಅನೇಕ ಪುಸ್ತಕಗಳ ಬಿಡುಗಡೆ ಮತ್ತು ಪದಕಮ್ಮಟ ಕಾರ್ಯಕ್ರಮ.. ಒಂದೆರಡು ಸಂಗೀತ ಸಂಜೆ ಕಾರ್ಯಕ್ರಮಗಳನ್ನು ನೋಡಿದ್ದೇ.. ಆದರೆ ಈ ಸಭಾಂಗಣವನ್ನು ನವೀಕರಿಸಿ.. ಹೊಸ ಹೊಸ ದೀಪಗಳನ್ನು ಹಾಕಿ ಚೊಕ್ಕವಾಗಿ ಮಾಡಿದ್ದಾರೆ.. ಸೊಗಸಾಗಿದೆ..

ಸುಂದರ ಕಾರ್ಯಕ್ರಮವನ್ನು ನೋಡಿ ಬಂದ ಖುಷಿಯಾಗಿದ್ದ ಮನಸ್ಸು.. ಹೇಳಿದ್ದು ಸರಸ್ವತಿ ನೆಲೆಸಿರುವ ತಾಣವೇ ಇದು.. ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಮೈತ್ರಿ ಪ್ರಕಾಶನದ ಶ್ರೀ ಉಮೇಶ್ ದೇಸಾಯಿ ದಂಪತಿಗಳು.. ಅಪ್ಪ ಎನ್ನುವ ಅದ್ಭುತ ಶಕ್ತಿಯನ್ನು ಕುರಿತು ತಮ್ಮ ಅನುಭವಗಳನ್ನು ಲೇಖನವನ್ನಾಗಿಸಿ ಸಂಪಾದಕತ್ವ ವಹಿಸಿದ್ದ ಶ್ರೀ ಗುರುಪ್ರಸಾದ್ ಕುರ್ತುಕೋಟಿ ಅವರಿಗೆ ಧನ್ಯವಾದಗಳು.. ಮತ್ತು ಮೊದಲ ಪ್ರಯತ್ನದಲ್ಲಿಯೇ ಶಭಾಷ್ ಗಿರಿ ಗಿಟ್ಟಿಸಿದ ಶ್ರೀ ಲಕ್ಷ್ಮಣ್ ಅವರಿಗೆ ಅಭಿನಂದನೆಗಳು ..

ಪುಟ ಪುಟವೂ ಹೊಸ ಜಗತ್ತನ್ನು ಪರಿಚಯಿಸುವ ಈ ರೀತಿಯ ಪುಸ್ತಕದ ಸಮಾರಂಭವನ್ನು ಅಚ್ಚುಕಟ್ಟಾಗಿ ಏರ್ಪಡಿಸಿದ ಪ್ರಕಾಶಕರಿಗೂ ಸಂಪಾದಕರಿಗೂ ಸಭೆಯಲ್ಲಿ ಸೇರಿದ್ದ ಎಲ್ಲಾ ಶ್ರೀ ಉಮೇಶ್ ದೇಸಾಯಿಯವರ ಮಾತಿನಲ್ಲಿ ಹೇಳುವುದಾದರೆ ಓದುಗ ದೊರೆಗಳಿಗೆ ಧನ್ಯವಾದಗಳು ಶುಭ ಹಾರೈಕೆಗಳು..

ನನ್ನ  ಕಣ್ಣಿಗೆ ಕಂಡ ಕೆಲವು ಚಿತ್ರಗಳು ನಿಮಗಾಗಿ.. !!!










No comments:

Post a Comment