Thursday, August 23, 2012

ಕನ್ನಡನಾಡಿನ ರನ್ನದ ರತುನ-ಶತಮಾನದ ಅಜ್ಜಯ್ಯ ಪ್ರೊ.ಜಿ.ವಿ


"ಶತಮಾನಂ ಭವತಿ  
ಶತಾಯುಹ್  ಪುರುಷಃ  ಶತೇಂದ್ರಿಯಃ  
ಆಯುಶ್ಯೇವೆಂದ್ರಿಯೇ  ಪ್ರತಿತಿಷ್ಠತಿ"

ಚಿಕ್ಕ ವಯಸ್ಸಿನಿಂದಲೂ ಈ  ಶ್ಲೋಕ ಮಾತಾ-ಪಿತೃ, ಗುರುಹಿರಿಯರಿಗೆ ನಮಸ್ಕರಿಸಿದಾಗೆಲ್ಲ ಕಿವಿಯ ಮೇಲೆ ಬೀಳುತ್ತಿತ್ತು..

ಯಾರಾದರು ನೂರು ವಸಂತಗಳನ್ನು ಹೇಗೆ ಜೀವನ ಮಾಡಿ ಸುಖಿಸುತ್ತಾರೆ...ಇದೆಲ್ಲ ಸಾಧ್ಯವೇ....ಯಾರಾದರು ಕಣ್ಣಿಗೆ ಕಾಣುವ ಉದಾಹರಣೆಗಳು ಇದೆಯಾ ಎಂದು ಕೊಳ್ಳುತಿದ್ದಾಗ ತಟ್ಟನೆ ನೆನಪಿಗೆ ಬರುತಿದ್ದುದು ನಮ್ಮ ಕರುನಾಡಿನ ಮಾಂತ್ರಿಕ ತಾಂತ್ರಿಕ ಮೇಧಾವಿ ಸರ್. ಎಂ.ವಿ...ಅವರ ನಂತರ ಶ್ರೀ ಶಿವಕುಮಾರ ಸ್ವಾಮಿಗಳು ...ಕಾಯಕವೇ ಕೈಲಾಸ ಎಂಬುದನ್ನು ಅಚ್ಚುಕಟ್ಟಾಗಿ ಪಾಲಿಸಿಕೊಂಡು ಬಂದಿದ್ದ ಈ ಮಹನೀಯರು ಸದಾ ಸ್ಮರಣೀಯರು..

ಸರಿ ನೂರು ಯುಗಾದಿ ಹಬ್ಬವನ್ನು ನೋಡಲು ಹೇಗಿರಬೇಕು..ಎನ್ನುವ ಪ್ರಶ್ನೆ ಬಂದಾಗ...

೧. ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ ಸಾಕು
೨. ಆಟದಲ್ಲಿ, ಪಾಠದಲ್ಲಿ, ಜೀವನದಲ್ಲಿ ಕ್ರಮ ಬದ್ಧವಾಗಿದ್ದರೆ ಸಾಕು..
೩. ಇಷ್ಟವಾದ ಕೆಲಸವನ್ನು ಕಷ್ಟವಾದರೂ ಸರಿ ಮಾಡಬೇಕು
೪. ಅಡ-ತಡೆಗಳು ದಾಟಿದರೆ ಅಲ್ಲವೇ ಮನುಜನ ಜನುಮದ ಗುರಿ ಸಾಧ್ಯ..
೫. ಇವಕ್ಕೆಲ್ಲ ಸಾಥ್ ನೀಡುವುದು ನಮ್ಮ ದೇಹ..ಅದನ್ನೇ ಶಿಸ್ತಿನಲ್ಲಿ ಇಟ್ಟರೆ..ಮೇಲೆ ಹೇಳಿದ ಎಲ್ಲವು ಸಾಧ್ಯ..

ಅಲ್ಲವೇ ಎಂದು ನನಗೆ ನಾನೇ ಕೇಳಿದಾಗ...ಹೌದು ಹೌದು ಎಂದಿತು ನನ್ನ ಮನಸು...ಯಾಕೆಂದರೆ...ಕಳೆದ ವರುಷ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ನಡೆದಾಗ ಶತಕದ ಸಮೀಪದ ಪ್ರಾಯದ ಯುವ ಮನಸನ್ನು ನೋಡಿದ ತಣ್ಣನೆ ಅನುಭವವಾಯಿತು...
ಚಿತ್ರ ಕೃಪೆ - ಅಂತರ್ಜಾಲ
 ಕನ್ನಡಾಂಬೆಯ ಹೆಮ್ಮೆಯ ಪುತ್ರ..ಪ್ರೊ.ಜಿ.ವೆಂಕಟಸುಬ್ಬಯ್ಯ..ಸರಿ ಸುಮಾರು ೪-೫ ತಲೆಮಾರಿನ ಜನತೆಯನ್ನು ನೋಡಿರುವವರು..ತಮ್ಮೆಲ್ಲ ಸಮಯವನ್ನು ಕನ್ನಡದ ಪದಗಳ ಅಮೃತ ಕಡಲಲ್ಲಿ ಮುಳುಗಿ ಕನ್ನಡಾಭಿಮಾನಿಗಳನ್ನು ದಡಕ್ಕೆ ಸೇರಿಸುತ್ತಿರುವ ಈ ಮಹಾನ್ ಚೇತನ..ಇಂದು ನಮ್ಮ ಭೂರಮೆಯನ್ನು ಅಲಂಕರಿಸಿ ಒಂದು ಶತಮಾನ ಆಯಿತು..
ಚಿತ್ರ ಕೃಪೆ - ಅಂತರ್ಜಾಲ -  ಸತೀಶ್ ಶೃಂಗೇರಿ 
ಮೇಲೆ ಹೇಳಿದ ಆ ಶ್ಲೋಕಕ್ಕೆ ಇನ್ನೊಂದು ಪರ್ಯಾಯ ಸೂಚಿಸಲು ಬಹುಶಃ ಬ್ರಹ್ಮರ್ಷಿ ವಿಶ್ವಾಮಿತ್ರರೆ ಬರಬೇಕೇನೋ!!!...
ಯಾಕೆಂದರೆ..ಆ ಶ್ಲೋಕದಲ್ಲಿರುವ ಪ್ರತಿಯೊಂದು ಪದಕ್ಕೆ ಅರ್ಥಸಹಿತ ಸಾಕ್ಷ್ಯವಾಗಿರುವ ನಮ್ಮ ನೆಚ್ಚಿನ ಅಜ್ಜಯ್ಯ ಜಿ.ವಿ. ಆ ಶ್ಲೋಕವನ್ನು ಅಮರಗೊಳಿಸಿದ್ದಾರೆ...
ಅವರ ಪೀಳಿಗೆಯಲ್ಲೇ ಹುಟ್ಟಿರುವ ನಮಗೆ,  ಅವರ ಜೀವನಶೈಲಿ ಮಾದರಿಯಾಗಿರಲಿ...

ಅಜ್ಜಯ್ಯನ ಬಗ್ಗೆ ಬರೆಯೋಣ ಅಂದಾಗ..ನನ್ನ ಮನಸಾಕ್ಷಿ ನನ್ನ ದೇಹದಿಂದ ಹೊರಗೆ ಬಂದು ನಿಂತು...ಕಿರುಚಿತು..

"ಆನೆಯ ಎತ್ತರಕ್ಕೆ ಹೊಗಳಲು ಪದಗಳು ತಲುಪಲು ಸಾಧ್ಯವೇ...
ಮಿಂಚಿನ ಕಣ್ಣು ಕೋರೈಸುವ ಕಾಂತಿಯ ಮುಂದೆ ಮಿನುಗುವ ದೀಪವೆ...
ಲಕ್ಷಾಧೀಶ ಆಗಿದ್ದರೆನಂತೆ ಮಾತಾಡುವಾಗ ಪದಗಳಿಗೆ ತಿಣುಕಾಡಿದಂತೆ 
ಆಗುತ್ತದೆ..ಸುಮ್ಮನೆ ಶುಭಾಶಯಗಳನ್ನು ಕೋರಿಬಿಡು.." ಅಂದಿತು..

ಅಲ್ಲವೇ ಎಷ್ಟು ನಿಜ..ಮನಸಾಕ್ಷಿ ಮಾತು..!

ಅಜ್ಜಯ್ಯ ನಿಮಗೆ ಶತಮಾನದ ಸಹಸ್ರ ನಮಸ್ಕಾರಗಳು, ಅಭಿನಂದನೆಗಳು...ಹಾಗೂ ಹುಟ್ಟು ಹಬ್ಬದ ಶುಭಾಶಯಗಳು 

ಕನ್ನಡದನಾಡಿನ ರನ್ನದ ರತುನ...ಇವರ ಬಗ್ಗೆ ಲೇಖನ..ನನ್ನ ಪಾಯಿಂಟ್ ಪಂಚರಂಗಿ ಬ್ಲಾಗಿನ ಸುವರ್ಣ ಕಾಣಿಕೆ..ವಾಹ್...ನನ್ನ ಬ್ಲಾಗ್ ಜೀವನ ಧನ್ಯವಾಯಿತು...!!!!