Thursday, May 12, 2011

ವಿಷ್ಣು"ದೇವರಾಯ" ಹುಟ್ಟಿದ ಹಬ್ಬ


ರಾಜಾಧಿರಾಜ, ರಾಜ ಮಾರ್ತಂಡ, ರಾಜ ಕುಲೋತ್ತುಂಗ,
ಶ್ರೀ ಶ್ರೀ ಶ್ರೀ ಕೃಷ್ಣದೇವರಾಯ ಪ್ರಭುಗಳಿಗೆ 
ಬೋಪರಾಕ್, ಬೋಪರಾಕ್


ಮಂತ್ರಿ: ಮಹಾರಾಜ, ಇಂದೇಕೆ ನಿಮ್ಮ ಮುಖದಲ್ಲಿ ಮಂದಹಾಸ, 
ತೃಪ್ತಿ ತುಂಬಿ ತುಳುಕುತ್ತ ಇದೆ


ಕೃಷ್ಣದೇವರಾಯ : ಮಂತ್ರಿಗಳೇ , ಇಂದು ಒಂದು ಅದ್ಭುತ 
ವರ್ತಮಾನ ತಿಳಿಯಿತು, ನಮ್ಮ ಸಾಮ್ರಾಜ್ಯ ಸ್ಥಾಪನೆಯದ 
ಸಂಧರ್ಭದಲ್ಲಿ ವಿರೂಪಾಕ್ಷನು ಒಂದು ವರ ನೀಡಿದ್ದಾನೆ.  
ನಮ್ಮ ಸಾಮ್ರಾಜ್ಯದ ಹೆಸರಿನಲ್ಲೇ ಇರುವ ಬೆಂಗಳೂರಿನ ಒಂದು ಬಡಾವಣೆಯಲ್ಲಿರುವ ಒಂದು ಮನೆಯಲ್ಲಿ ಒಂದು ಮಗು 
ಮೇ ೧೩ ನೆ ತಾರೀಕು ಹುಟ್ಟಿ  ಚಿತ್ರಜಗತ್ತಿನಲ್ಲಿ ಅದ್ಭುತ ಸಾಧನೆ
ಮಾಡುತ್ತೆ...
ಅದರ ಹೆಸರು ವಿಷ್ಣುದೇವರಾಯ ಎಂದು.  
ಆ ಮಗುವು ಬರೆಯಬಹುದಾದ ಒಂದು ಚಿತ್ರ ನೋಡಿ 
ಮಂತ್ರಿಗಳೇ....ನನಗೊಂತು ಆ ಮಗುವನ್ನು ಬಾಚಿ 
ತಬ್ಬಿಕೊಳ್ಳುವ ಆಸೆಯಾಗುತ್ತಿದೆ.  
ಮಂತ್ರಿ: ಅದಕ್ಕೇನು ಮಹಾರಾಜ, ವಿದ್ಯಾರಣ್ಯರ ಹತ್ತಿರ ಬೇಡಿಕೊಳ್ಳಿ,
ಮುಂದಿನ ಲೆಮಾರಿನಲ್ಲಿ ಆ ಮಗುವಿನ ಅಪ್ಪನಾಗಿ ಜನ್ಮ ತಾಳಿ 
ನಿಮ್ಮ ಆಸೆಯನ್ನ ಈಡೆರಿಸಿಕೊಳ್ಳಿ


ವಿರೂಪಾಕ್ಷನ ದಯೆ ಇಂದ, ಹಾಗು ವಿದ್ಯಾರಣ್ಯರ ಆಶಿರ್ವಾದದಿಂದ ಕೃಷ್ಣದೇವರಾಯ ವಿಜಯ"ಕೃಷ್ಣದೇವರಾಯ"ನಾಗಿ, ಆತನ 
ಮಗನಾಗಿ ವಿಷ್ಣು"ದೇವರಾಯ" ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತ 
ಸಂತಸದಿಂದ ಇದ್ದಾನೆ

ದೇವಿ - ಆಶಾ ಜ್ಞಾನ ಸರ್ಜಾ ಹುಟ್ಟು ಹಬ್ಬ

ಕವಿರತ್ನ ಕಾಳಿದಾಸ ಚಿತ್ರೀಕರಣ ನಡಿತ ಇತ್ತು.  
ಕಾಳಿದಾಸ (ಬೀರ) ಕಾಳಿ ಮಾತೆಯಾ ಆಶೀರ್ವಾದ ಪಡೆಯುವ 
ದೃಶ್ಯ ಆಗಬೇಕಿತ್ತು. ಆಗ ನಡೆದ ಒಂದು ಸಂಭಾಷಣೆ 


ಬೀರ : ಮಾತೆ ನಿನ್ನ ಕಣ್ಣುಗಳನ್ನು ನೋಡ್ತಾ ಇದ್ದಾರೆ ಭಕ್ತಿ ಭಾವ
ತುಂಬಿ ಬರುತ್ತೆ


ಕಾಳಿ ಮಾತೆ : ವತ್ಸ, ಹಾಗೇನು ಇಲ್ಲ, ಆದರೆ ಹೊರಗೆ ಯಾಕೆ 
ಅಷ್ಟೊಂದು ಬೆಳಕು


ಬೀರ : ಅಲ್ಲಿ ದೇವಿ ನಿಂತಿದ್ದರೆ, ನಾನು ಅವರಿಗೆ ಕೈ ಮುಗಿಯಲೋ
ಅಥವಾ ನಿನಗೆ ಕೈ ಮುಗಿಯಲೋ ಗೊತ್ತಾಗ್ತಾ ಇಲ್ಲ..
ಅವರ ಕಣ್ಣುಗಳಲ್ಲಿ ಇರುವ ಕಾಂತಿ ಅವರ ಬಗ್ಗೆ ಭಕ್ತಿ ಬರುತ್ತದೆ 
ಕಾಳಿ ಮಾತೆ: ಮೊದಲು, ನಿನಗೆ ವರ ಕೊಡುತ್ತೇನೆ.
ನಂತರ ದೇವಿಯನ್ನ ಮಾತಡಿಸ್ತಿನಿ. 
ಕಾಳಿ ಮಾತೆ: ಮಗು ನೀನು ಯಾರು


ದೇವಿ : ಮಾತೆ ನನ್ನ ದೇವಿ ಅಂತ ಗುರುತಿಸುತ್ತಾರೆ, ನನ್ನ ಹೆಸರು 
ಆಶಾ ಜ್ಞಾನ ಸರ್ಜಾ ಅಂತ. 


ಕಾಳಿ ಮಾತೆ: ಓಹ್ ತಿಳಿಯಿತು, ನಿನ್ನ ಕಣ್ಣುಗಳಲ್ಲಿ ಇರುವ 
ಕಾಂತಿ ಎಂತವರನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತದೆ, ಪಾಪ 
ಕಾಳಿದಾಸನದು ಏನು ತಪ್ಪಿಲ್ಲ..ನಿನ್ನ ಹುಟ್ಟು ಹಬ್ಬಕ್ಕೆ ಆಶಾಭಾವ,
ಜ್ಞಾನದಾಹ, ಸಂತೋಷ, ಸುಖ ಎಲ್ಲವು ಸರಯು ನದಿ ತರಹ 
ಹರಿಯುತ್ತಾ ಇರಲಿ ಇದು ನನ್ನ ಆಶಿರ್ವಾದ, ಹಾಗು ಮಮತೆಯ ನುಡಿ.

Sunday, May 8, 2011

Happy Birthday Soumya


ವೆಂಕಿ : ಸೌಮ್ಯನಿನ್ನ ಹುಟ್ಟುಹಬ್ಬಕ್ಕೆ ಏನು ಕೊಡಲಿ
Venki: Soumya, what shall i give you for your birthday
ಸೌಮ್ಯಎರಡು ಕೈ-ಗಡಿಯಾರ ಕೊಡಿಸಿ...
Soumya: Two watches 
ವೆಂಕಿ : ಯಾಕಪ್ಪಒಂದು ಸಾಲದೇನಿನಗೆ ಆಗಲೇ ಒಂದು ಒಳ್ಳೆಗಡಿಯಾರ ಕೊಡಿಸಿದ್ದೆನೆಲ್ಲ...ಮತ್ತೆ ಯಾತಕ್ಕೆ
Venki: why, i already gave you one know..why do you need again
ಸೌಮ್ಯ : ಇದು ಕೈ ಗಡಿಯಾರ ಅಲ್ಲ..ಗೋಡೆ ಗಡಿಯಾರ..ಒಂದುನಿಮ್ಮ ಬ್ಯಾಗ್ ನಲ್ಲಿಇನ್ನೊಂದು ನಿಮ್ಮ ಆಫೀಸ್ ನಲ್ಲಿ ಹಾಕೋಕೆ
Soumya : This is not hand watch, i need wall clock...one for your bad, and one in your office.
ವೆಂಕಿಹಹಹಹ
Venki: hahahahah
ಸೌಮ್ಯನಗಬೇಡಿ..ನಿಮ್ಮ ಸಮಯ ನನಗೆಬೇಕು...ಇವತ್ತಾದರೂ ಮನೆನಲ್ಲಿ ಇರಿ..ಪ್ಲೀಸ್ ..
Soumya: dont laugh...i need your time..please be there in the house today atleast
ವೆಂಕಿಇಲ್ಲ ಚಿನ್ನಿಇವತ್ತು ಶ್ರೀಕಿ ಸಿಗ್ತಾನೆ...ಚುಂಚನಗಿರಿ ಹತ್ತಿರಇಡ್ಲಿ ತಿನ್ನೋಕೆ ಹೋಗ್ಬೇಕು...
Venki: no chinni, today would want to meet sriki...and want to eat idli near chunchunagiri..
ಸೌಮ್ಯನೀವು ಬದಲಾಗಲ್ಲ....ಹೋಗಲಿ ಏನಾದ್ರು ಗಿಫ್ಟ್ ಕೊಟ್ಟುಹೋಗಿ..ಸಂಜೆ ಎಲ್ಲಿಗಾದರೂ ಹೊರಗೆ ಹೋಗೋಣ.
Soumya : You wont change...ok..atleast give me some gift..and evening will go out.
ವೆಂಕಿನಿನ್ನ ಬರ್ತ್-ಡೇ ಮರಿತೀನ...ಸೋಫಾ ಮೇಲೆಇದೆ...ನಾನು ಹೋಗಿ ಬರ್ತೀನಿ..ಸಂಜೆ ಹೋಗೋಣ... (ವೆಂಕಿಶ್ರೀಕಿನ ನೋಡಲು ಹೋಗುತ್ತಾನೆ)
Venki: do you think i will forget your birthday...there is one on the sofa..ok..i will take leave..evening will go out.. (venki leaves to meet sriki)
ಸೌಮ್ಯ ಬಂದು ಸೋಫಾ ಮೇಲೆ ನೋಡ್ತಾರೆ...ಸುಖಿ ಹಾಯಾಗಿಆಟ ಆಡ್ತ ಕೂತಿದೆ...ಆಗ ಗೊತ್ತಾಯ್ತು ಸುಖಿನೆ ಗಿಫ್ಟ್ ಅಂತ....
Soumya comes and see Sukhi playing happily on sofaset...then she realises..how smart my hubby is...
ರೇಡಿಯೋದಲ್ಲೀ ಹಾಡು ಬರ್ತಾ ಇದೆ..ಶಬ್ದವೇದಿ ಚಿತ್ರದ "ನಮ್ಯಜಮಾನರು ಯಾರಿಗೇನು ಕಮ್ಮಿ ಇಲ್ಲ"....
in radio song is playing from Shabdhavedi : "Nam yajamanru yarigenu kammi illa"
ಸೌಮ್ಯ ಮನಸಲ್ಲೇ ನಗುತ್ತ...ನಮ್ ಯಜಮಾನರು ತುಂಬಾಬುದ್ದಿವಂತರು...
Soumya smiles at herself..and saying venki is not only hand-some..but he is sm-art also..

Friday, May 6, 2011

Narendra - Suma - Wedding Anniversar​y (Cousin Brother)

ರಾಮ: ಪ್ರಿಯಸಖಿ, ಶಿವ ಧನುಸ್ಸನ್ನು ಮುರಿದು, ನಿನ್ನ ವರಿಸಿದಾಗ ಆದ ಸಂತೋಷ 
ಹೇಳ ತೀರದು

ಸೀತೆ: ಹೌದು ಪ್ರಾಣಕಾಂತ, ನನಗು ತುಂಬಾ ಖುಷಿಯಾಯಿತು, ನಿಮ್ಮ ಜೊತೆ, 
ನಿಮ್ಮ ಅನುಜರ ಜೊತೆ, ಅತ್ತೆ ಮಾವಂದಿರ ಜೊತೆ ಜೀವನ ಎಷ್ಟು ಸುಂದರ.

ರಾಮ: ನಮ್ಮ ಎರಡು ಮುತ್ತು ರತ್ನಗಳು ಎಲ್ಲಿ?

ಸೀತೆ: ಪ್ರಿಯ ಸಖ ಒಂದು ವಿಜಯಭಾರತಿ ಶಾಲೆಗೆ   ಮುಂದಿನ ತರಗತಿಗೆ ಸೇರಿಕೊಳ್ಳಲು ಮಾವನ ಜೊತೆ      ಹೋಗಿದೆ, ಇನ್ನೊಂದು ಸ್ನಾನ ಮಾಡಿಸಲು ಅತ್ತೆಯವರು ಕರೆದುಕೊಂಡು
ಹೋಗಿದ್ದಾರೆ

ರಾಮ: ಹೌದ, ನಮ್ಮ ರತ್ನಗಳು ಬರಲಿ, ಬಂದ ಮೇಲೆ, ಅಪ್ಪ, ಅಮ್ಮ, ನಮ್ಮ
ಕೋರವಂಗಲದ ಸದಸ್ಯರೆಲ್ಲರ ಬಳಿ ಹಾರೈಕೆಗಳನ್ನು ಪಡೆಯೋಣ....
ನೋಡು ನೋಡು ಆಗಲೇ ನನ್ನ ಲ್ಯಾಪ್- ಟಾಪ್ ನಲ್ಲಿ ಒಂದು ಮೇಲ್ ಬರ್ತಾ ಇದೆ.

ಸೀತೆ: ಹೌದುಸ್ವಾಮಿ, ಎಂಟು ವರ್ಷಗಳು ಹೆಂಗೆ ಕಳೆದು ಹೋದವು...
ತಿಳಿಯಲೇ ಇಲ್ಲ...ನಿಮ್ಮ ಕುಟುಂಬದ ಸದಸ್ಯಳಾಗಿರೋಕೆ ಹೆಮ್ಮೆ ಅನ್ನಿಸುತ್ತಿದೆ.

ಅಷ್ಟರಲ್ಲೇ ಬಾಗಿಲಿನ ಕರೆ ಘಂಟೆ  ಕೂಗತೊಡಗಿತು!!!!!!

ಸೀತೆ ಬಾಗಿಲು ತೆರೆದಾಗ...ಸಮಸ್ತ ಕೋರವಂಗಲದ ಬಂಧು-ಭಾಂದವರು
ನೆರೆದಿದ್ದರು ವಿವಾಹ ಮಹೋತ್ಸವದ ಶುಭಾಶಯ ತಿಳಿಸೋಕೆ...