Tuesday, June 21, 2016

ಬಾಲೂ ಸರ್.. ಹಹಹಹ..

"ನಾರಾಯಣ ನಾರಾಯಣ... "

ಅರೆ ಏನಿದು..  ದೇವಲೋಕದಲ್ಲಿ ಯಾರೂ ಇಲ್ಲ.. ಇರಿ ಬ್ರಹ್ಮ ದೇವನ ಹತ್ತಿರ  ಹೋಗಿ ಬರ್ತೀನಿ.. ಅಲ್ಲೂ ಖಾಲಿ ಖಾಲಿ.. ವೈಕುಂಠ  ಸಪ್ತ ದ್ವಾರವನ್ನು ದಾಟಿ ಒಳಗೆ ಹೋಗಿ ನೋಡಿದರೆ.. ಆದಿಶೇಷನೂ ಇಲ್ಲ, ರಮಾ ಮತ್ತು ಆಕೆಯ ಕಾಂತನೂ ಇಲ್ಲ.. ನಡುಗುತ್ತಲೇ ಮಂಜಿನ ಕೈಲಾಸಕ್ಕೆ ಹೊಕ್ಕರೆ.. ನಂದಿ ಒಂದೇ ಬೇಜಾರಲ್ಲಿ ಕೂತಿತ್ತು.

"ಓಹ್ ಏನಪ್ಪಾ ಇದು.. ಏನಾಯಿತು.. " ಏನೋ ಸಮಸ್ಯೆ ಇದೆ ಏನಾಯಿತು ಎಂದು ಕೈಲಾಸದ ಮಂಜಿನ ಒಂದು ಮಂಜಿನ ಗೆಡ್ದೆಗೆ ಒಂದು ದಿನಸೂಚಿ ತಗಲಾಕಿತ್ತು..

ನಾರದರ ಕಣ್ಣು ಅಂದಿನ ದಿನಾಂಕ ನೋಡಿದಾಗ.. ಮೊಗದಲ್ಲಿ ಸಣ್ಣ ನಗು .. ಹಾಗೆ ಎರಡು ಹಾಳೆಗಳನ್ನು ಹರಿದರು.. ದಿನಾಂಕ ೨೧ ಎಂದು ತೋರುತ್ತಿತ್ತು..

ನಂದಿ ಕಿವಿಯಲ್ಲಿ ಹೋಗಿ ಮೆಲ್ಲಗೆ ಹೇಳಿದರು.. ನಂದಿ ಇಂದು ತಾರೀಕು ೨೧ ಎಂದು ಜೋರಾಗಿ ಹೇಳು..

ದೇವಲೋಕದ ಬಂಧುಗಳೇ.. ಸ್ವರ್ಗಲೋಕದ ನಿವಾಸಿಗಳೇ.. ಆ ದಿನ ದಾಟಿಯಾಗಿದೆ.. ಇಂದು ತಾರೀಕು ೨೧  ಜೂನ್ ೨೦೧೬.. ನೀವೆಲ್ಲಾ ಹೊರಗೆ ಬರಬಹುದು.. ಬೇಗನೆ ಬನ್ನಿ..


ಉಫ಼್ಫ಼್ ಉಫ಼್ಫ಼್ಫ಼್ ಎಂದು ನಿಧಾನವಾಗಿ ಉಸಿರು ಬಿಟ್ಟು.. ಎಲ್ಲರೂ ನಗೊಮೊಗ ಹೊತ್ತು ತಾವಿದ್ದ ತಾಣದಿಂದ ಹೊರಗೆ ಬಂದರು.

ಫಳ್ ಅಂತ ಒಂದು ಬೆಳಕು ತೂರಿ ಬಂತು..

ಅಯ್ಯೋ ಇಷ್ಟು ದಿನ ನಾವು ಮರೆಯಲ್ಲಿ ಇವರಿಗೆ ಕಾಣದೆ ಇದ್ದದ್ದು ವ್ಯರ್ಥವಾಯಿತು.. .. ಇವರು ಅಹಲ್ಯೆ ಶ್ರೀ ರಾಮನಿಗೆ ಕಾದ ಹಾಗೆ, ಶಬರಿ ರಘುರಾಮನಿಗೆ ಕಾದು ಕುಳಿತಿದ್ದ ಹಾಗೆ.. ಕ್ಯಾಮೆರ ಹಿಡಿದು ಕೊಂಡು ನಮಗಾಗಿ ಕಾಯುತ್ತಲೇ ಇದ್ದಾರೆ.. ಇವರ ತಾಳ್ಮೆಗೆ ಒಂದು ಶಭಾಶ್ ಹೇಳಲೇ ಬೇಕು. ಜ಼ೊತೆಯಲ್ಲಿ ಇವರಿಗೆ ಸುಂದರವಾದ ಶುಭಾಶಯಗಳನ್ನು ಕೋರುತ್ತಿದ್ದೇವೆ..

ಬಾಲಸುಬ್ರಮಣ್ಯ ಅವರೇ.. ನಿಮ್ಮ ತಾಳ್ಮೆಗೆ ಒಂದು ಜೈ.. ನಾವು ನೆಲೆನಿಂತ ತಾಣದ ಬಗ್ಗೆ ನಮಗಿಂತ ಚೆನ್ನಾಗಿಯೇ ತಿಳಿದು, ಗ್ರಂಥಗಳನ್ನು, ಗೆಜೆಟ್ ಗಳನ್ನೂ ಓದಿ, ಬಲ್ಲವರಿಂದ ಮಾಹಿತಿ ಕಲೆಹಾಕಿ.. ಜೇನುನೊಣ ಊರಲ್ಲಿರುವ ಎಲ್ಲಾ ಹೂಗಳ ಮಕರಂದವನ್ನು ಕಲೆಹಾಕಿ, ಅದ್ಭುತವಾದ ರಸವತ್ತಾದ ಜೇನುಗೂಡನ್ನು ಕಟ್ಟುವ ಹಾಗೆ, ನೀವು ಆ ಮಾಹಿತಿಯನ್ನು ನಿಮ್ಮ "ನಿಮ್ಮೊಳಗೊಬ್ಬ ಬಾಲು" ಎನ್ನುವ ಸುಂದರ ಅಂಕಣದಲ್ಲಿ ಮನಮುಟ್ಟುವಂತೆ ವಿವರಿಸುವ ನಿಮ್ಮ ಪರಿಗೆ ನಾವೆಲ್ಲಾರೂ ಬಹುಪರಾಕ್ ಹೇಳುತ್ತೇವೆ..

ನಿಮ್ಮ ಜನುಮದಿನ ಸುಂದರವಾಗಿದ್ದು ಗೊತ್ತಾಯಿತು.. ಎಲ್ಲರೂ ನಿಮ್ಮ ಆರೋಗ್ಯಕ್ಕೆ, ಉತ್ಸಾಹಕ್ಕೆ, ನಿಮ್ಮ ಗೆಳೆತನಕ್ಕೆ ಶುಭ ಕೋರಿದ್ದಾರೆ.. ಈಗ ನಮ್ಮಸರದಿ .

ನಿಮ್ಮ ಪ್ರತಿದಿನದ ಶುಭ ಮುಂಜಾನೆ ಶುಭಾಷಯ ಪತ್ರ ಫೇಸ್ಬುಕ್ ನಲ್ಲಿ ಮತ್ತೆ ಶುರುವಾಗಬೇಕು .. ಈ ಪತ್ರ ನಿಮ್ಮ ಸ್ನೇಹಲೋಕದ ವಲಯದಲ್ಲಿ ಉತ್ಸಾಹ ತುಂಬುತ್ತದೆ, ಚೈತನ್ಯ ನೀಡುತ್ತದೆ .. ಮತ್ತೆ ನೀವು ಶುರುಮಾಡಲೇ ಬೇಕು..  ಇದು ನಮ್ಮೆಲ್ಲರ ಆಜ್ಞೆ ಮತ್ತು ಶುಭ ಆಶೀರ್ವಾದ..

ಮತ್ತೆ ನೀವು ಮೊದಲಿನಂತೆಯೇ ಬೇಗ ಆಗುತ್ತೀರಿ ಮತ್ತು ಅದಕ್ಕೆ ಈ ನಿಮ್ಮ ಬೆಳಗಿನ ಶುಭಪತ್ರ ನಿಮಗೆ ಸಹಾಯ ಮಾಡುತ್ತದೆ ..

ಮುಂದಿನ  ಜನುಮದಿನದ ಹೊತ್ತಿಗೆ ನೀವು ನಿಮ್ಮ ಆರೋಗ್ಯ, ಉದ್ಯೋಗ, ನಿಮ್ಮ ಬರಹಗಳ ಅಂಕಣ, ಶ್ರೀ ರಂಗಪಟ್ಟಣದ ಬಗ್ಗೆ ಹೊತ್ತಿಗೆ.. ಎಲ್ಲವೂ ಸಮಾಗಮಿಸುತ್ತದೆ..


ಮತ್ತೊಮ್ಮೆ ಜನುಮದಿನಕ್ಕೆ ಶುಭಾಶಯಗಳು.. !!!

2 comments:

  1. ನಮ್ಮ ಬಾಲಣ್ಣಂಗೆ ಇದಕಿಂತ ತಕ್ಕುದಾದ ಹುಟ್ಟಿದ ಹಬ್ಬದ ಹಾರೈಕೆ ಯಾರು ಮಾಡಿರಲಾರರು ಶ್ರೀಮಾನ್.. ಉಘೇ ಉಘೇ..

    ReplyDelete
  2. ನಿಮ್ಮ ಪ್ರೀತಿಯ ಹಾರೈಕೆಗಳಿಗೆ ನನ್ನ ನಮನಗಳು ಶ್ರೀಕಾಂತ್

    ReplyDelete