Thursday, May 12, 2011

ದೇವಿ - ಆಶಾ ಜ್ಞಾನ ಸರ್ಜಾ ಹುಟ್ಟು ಹಬ್ಬ

ಕವಿರತ್ನ ಕಾಳಿದಾಸ ಚಿತ್ರೀಕರಣ ನಡಿತ ಇತ್ತು.  
ಕಾಳಿದಾಸ (ಬೀರ) ಕಾಳಿ ಮಾತೆಯಾ ಆಶೀರ್ವಾದ ಪಡೆಯುವ 
ದೃಶ್ಯ ಆಗಬೇಕಿತ್ತು. ಆಗ ನಡೆದ ಒಂದು ಸಂಭಾಷಣೆ 


ಬೀರ : ಮಾತೆ ನಿನ್ನ ಕಣ್ಣುಗಳನ್ನು ನೋಡ್ತಾ ಇದ್ದಾರೆ ಭಕ್ತಿ ಭಾವ
ತುಂಬಿ ಬರುತ್ತೆ


ಕಾಳಿ ಮಾತೆ : ವತ್ಸ, ಹಾಗೇನು ಇಲ್ಲ, ಆದರೆ ಹೊರಗೆ ಯಾಕೆ 
ಅಷ್ಟೊಂದು ಬೆಳಕು


ಬೀರ : ಅಲ್ಲಿ ದೇವಿ ನಿಂತಿದ್ದರೆ, ನಾನು ಅವರಿಗೆ ಕೈ ಮುಗಿಯಲೋ
ಅಥವಾ ನಿನಗೆ ಕೈ ಮುಗಿಯಲೋ ಗೊತ್ತಾಗ್ತಾ ಇಲ್ಲ..
ಅವರ ಕಣ್ಣುಗಳಲ್ಲಿ ಇರುವ ಕಾಂತಿ ಅವರ ಬಗ್ಗೆ ಭಕ್ತಿ ಬರುತ್ತದೆ 
ಕಾಳಿ ಮಾತೆ: ಮೊದಲು, ನಿನಗೆ ವರ ಕೊಡುತ್ತೇನೆ.
ನಂತರ ದೇವಿಯನ್ನ ಮಾತಡಿಸ್ತಿನಿ. 
ಕಾಳಿ ಮಾತೆ: ಮಗು ನೀನು ಯಾರು


ದೇವಿ : ಮಾತೆ ನನ್ನ ದೇವಿ ಅಂತ ಗುರುತಿಸುತ್ತಾರೆ, ನನ್ನ ಹೆಸರು 
ಆಶಾ ಜ್ಞಾನ ಸರ್ಜಾ ಅಂತ. 


ಕಾಳಿ ಮಾತೆ: ಓಹ್ ತಿಳಿಯಿತು, ನಿನ್ನ ಕಣ್ಣುಗಳಲ್ಲಿ ಇರುವ 
ಕಾಂತಿ ಎಂತವರನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತದೆ, ಪಾಪ 
ಕಾಳಿದಾಸನದು ಏನು ತಪ್ಪಿಲ್ಲ..ನಿನ್ನ ಹುಟ್ಟು ಹಬ್ಬಕ್ಕೆ ಆಶಾಭಾವ,
ಜ್ಞಾನದಾಹ, ಸಂತೋಷ, ಸುಖ ಎಲ್ಲವು ಸರಯು ನದಿ ತರಹ 
ಹರಿಯುತ್ತಾ ಇರಲಿ ಇದು ನನ್ನ ಆಶಿರ್ವಾದ, ಹಾಗು ಮಮತೆಯ ನುಡಿ.

No comments:

Post a Comment