Friday, March 21, 2014

ಗೀತೆ ಗೀತಾ ಗೀತೆಗಳು.... ಮತ್ತು ಬಡವನ ಗೀತೆಗಳು....

ಗೀತೋಪದೇಶ ಮುಗಿದಿತ್ತು ... ಆದರೂ ಪಾರ್ಥ ಮುಖದಲ್ಲಿ ಚಿಂತೆಯ ಕಾರ್ಮೋಡ... ಕೃಷ್ಣ ನಗುಮೊಗದಿಂದ ಹುಬ್ಬನ್ನು ಮೇಲೇರಿಸಿ ಪಾರ್ಥನತ್ತ ದೃಷ್ಟಿ ಹರಿಸಿದ!!!

ಪರಮಾತ್ಮ ನನ್ನ ಅನುಮಾನವನ್ನು ಪರಿಹರಿಸು!!!

ಪಾರ್ಥ : ಕೃಷ್ಣ.. ವಾಸುದೇವ.. ಕುರುಕ್ಷೇತ್ರದಲ್ಲಿ ನನಗೆ ಬಂದ ಅನುಮಾನ ಕಲಿಯುಗದಲ್ಲಿ ಬಂದರೆ ಏನು ಮಾಡುವುದು..

ಕೃಷ್ಣ : ದ್ವಾಪರದಲ್ಲಿ ನಾ ಉಲಿದ ಭಗವದ್ಗೀತೆ ಕಲಿಯುಗದಲ್ಲಿ ಕಗ್ಗವಾಗಿ ಅರಳಿದೆ..

ಪಾರ್ಥ : ಹೌದೆ ಅದರ ಬಗ್ಗೆ ಇನ್ನಷ್ಟು ಹೇಳು ಕೃಷ್ಣ

ಕೃಷ್ಣ : ಕಳೆದ ವಾರ ತಾನೇ ಅದರ ಕತೃ ನೂರ ಇಪ್ಪತೇಳನೆಯ ಜನುಮದಿನೋತ್ಸವ ಜರುಗಿತು..

ಪಾರ್ಥ : ಅವರ ಹೆಸರೇನು ವಾಸುದೇವ?

ಕೃಷ್ಣ : ಅವರು ಡಿ ವಿ ಜಿ ಅಂತ.. ನಮ್ಮ ಪಿತಾಮಹ ಭೀಷ್ಮ ಇಲ್ಲವೇ ಹಾಗೆಯೇ ಕರುನಾಡಿಗೆ ಅವರು ಕೂಡ ಹಾಗೆಯೆ.. ಅವರು ರಚಿಸಿದ ಮಂಕುತಿಮ್ಮನ ಕಗ್ಗ ಬಡವನ್ಗೀತೆ ಎಂಬ ಹೆಸರಿಂದಲೇ ಹೆಸರುವಾಸಿ..

ಕಗ್ಗ ಪಿತಾಮಹ - ಶ್ರೀ ಡಿ ವಿ ಜಿ (ಚಿತ್ರಕೃಪೆ - ತಿರುಮಲೈ ರವಿ ಸರ್

ಪಾರ್ಥ : ನನಗೆ ಸಿಗಬಹುದೇ ಒಂದು ಪ್ರತಿ

ಕೃಷ್ಣ : ಅದು ಸಿಗುತ್ತದೆ.. ಅದರ ಜೊತೆಯಲ್ಲಿಯೇ.. ಅದನ್ನು ಇನ್ನಷ್ಟು ಸರಳಗೊಳಿಸಿ. ಅದಕ್ಕೆ ಪ್ರಸ್ತಾರ ಹಾಕಿ.. ಅದರ ಅರ್ಥವನ್ನು ವಿವರಿಸಿ.. ತನ್ನ ಜೀವನದಲ್ಲಿ ಕಂಡು ಓದಿ ತಿಳಿದು ನಲಿದು ಇತರರಿಗೂ ಹಂಚುವ ಸುಂದರ ಮನಸ್ಸಿನ ಶ್ರೀ ರವಿ ತಿರುಮಲೈ.. "ಕಗ್ಗ ರಸಧಾರೆ" ಎನ್ನುವ ಅಮೃತವನ್ನು ಹಂಚುತ್ತಿದ್ದಾರೆ.. ಪಾರ್ಥ.. ನಿನ್ನ ಪ್ರಶ್ನೆ ಎಂಥಹ ದಿನ ಬಂದಿದೆ ಗೊತ್ತೇ

ಪಾರ್ಥ : ಏನು ವಾಸುದೇವ?

ಕೃಷ್ಣ : ಇಂದು ಶ್ರೀ ರವಿ ತಿರುಮಲೈ ಅವರ ಜನುಮ ದಿನ.. ಅವರ ಬಂಧು ಬಳಗ.. ಸ್ನೇಹಿತರು ನಿನ್ನೆಯಿಂದಲೇ ಕಾಯುತ್ತಿದ್ದಾರೆ.. ಅವರಿಗೆ ಶುಭ ಕೋರುವುದಕ್ಕಾಗಿ.. ನಡಿ ನಡಿ ನಾವು ಅವರಿಗೆ ಶುಭ ಕೋರೋಣ..

ಪಾರ್ಥ : ನನಗೆ ದಾರಿ ತೋರಿದ ನೀನು.. ಇಂದು ರಥವನ್ನು ನಾ ಓಡಿಸುತ್ತೇನೆ.. ಅವರ ದರುಶನ ಭಾಗ್ಯ ನನಗೂ ಆಗಲಿ..

ಕೃಷ್ಣ : ಆದರೆ ನಿನಗೆ ಅವರ ಮನೆಯ ಹಾದಿ ಗೊತ್ತೇ ಪಾರ್ಥ?

ಪಾರ್ಥ : ಇದೋ ಈ ಬಾಣಕ್ಕೆ.. "ಕಗ್ಗ ರಸಧಾರೆ.. ಕಗ್ಗ ರಸಧಾರೆ" ಎಂದು ಮಂತ್ರವನ್ನು ಉಪದೇಶಿಸಿ ಬಿಡುತ್ತೇನೆ.. ಅದು ಅಲ್ಲಿಗೆ ಕರೆದೊಯ್ಯುತ್ತದೆ...

ಕೃಷ್ಣ : ಆಹಾ ಎಂಥಹ ಸುಂದರ ಆಲೋಚನೆ.. ಭಗವದ್ಗೀತೆ ಉಲಿದ ನಾನು.. ಪಾರ್ಥಸಾರಥಿ ಆಗುವ ಬದಲು ಪಾರ್ಥನೆ ಸಾರಥಿಯಾಗಿದ್ದಾನೆ.. ತುಂಬಾ ಸಂತಸದಾಯಕ ವಿಷಯ.. ನಡೆ ಪಾರ್ಥ..

ಪಾರ್ಥ ಮತ್ತು ಪಾರ್ಥಸಾರಥಿ ಇಬ್ಬರೂ ಬರುತ್ತಾರೆ.. ಬಾಣ ನಿಂತ ಕಡೆ ಅವರು ನಿಲ್ಲುತ್ತಾರೆ..

ಅಲ್ಲಿ ನೋಡಿದರೆ..

ದೇವಸ್ಥಾನದ ಗೋಪುರವೇ ನಾಚುವಂಥ ಪ್ರಶಾಂತತೆ ಮುಖದಲ್ಲಿ..

ನಾಚಿ ಬಾಡಿದ ಗೋಪುರ.. ಅದರ ಮುಂದೆ ನಮ್ಮ ರವಿ ಸರ್ (ಚಿತ್ರಕೃಪೆ - ರವಿ ಸರ್)

ಸಾಧನೆ ಎನ್ನಿಸಿದರೂ ಧೈನ್ಯತಾ ಭಾವ ಮನದಲ್ಲಿ..

ಏನಿಲ್ಲ ಸರ್ ನನ್ನ ಸಾಧನೆ ಎನ್ನುವ ರವಿ ಸರ್ (ಚಿತ್ರ ಕೃಪೆ - ರವಿ ಸರ್)

ಇನ್ನಷ್ಟು ಸಾಧಿಸಬೇಕು ಎನ್ನುವ ಹಸಿವು ಕಂಗಳಲ್ಲಿ..

ಸಾಧನೆಗೆ ಕೊನೆಯಿಲ್ಲ ಎನ್ನುವ ರವಿ ಸರ್ (ಚಿತ್ರ ಕೃಪೆ - ರವಿ ಸರ್)

ಮುಂದಿನ ಕಗ್ಗ ರಸಧಾರೆಯ ಬಿಡುಗಡೆಗೆ ತಹ ತಹಸುತ್ತಿರುವ ಅಭಿಮಾನಿ ಬಳಗ..

ಇರಮ್ಮ.. ಕಗ್ಗ ಧಾರೆ ಪುಸ್ತಕ ತಗೊಂಡು ಬರ್ತೀನಿ ಇರಮ್ಮ  - (ಚಿತ್ರಕೃಪೆ - ಅಂತರ್ಜಾಲ)

ಆಹಾ ಇಂಥ ಸ್ನೇಹಮಯಿ ಹುಟ್ಟು ಹಬ್ಬಕ್ಕೆ ನಾವಿಂದು ಬಂದದ್ದು
. ................................
. ................................
. ................................
. ................................
. ................................

ಬಿಡು ಪಾರ್ಥ ಅದನ್ನು ಹೇಳೋದೇ ಬೇಡ..

ನೋಡು ಅಶ್ವಗಳು ಕೂಡ ಕಿವಿ ನಿಮಿರಿಸಿಕೊಂಡು.. ಕಗ್ಗ ರಸಧಾರೆಯನ್ನು ಸವಿಯಲು ಕಾಯುತ್ತಿವೆ..

ಪಾರ್ಥಸಾರಥಿ ಮತ್ತು ಪಾರ್ಥಸಾರಥಿಯ ಸಾರಥಿ ಇಬ್ಬರೂ ರಥದಿಂದ ಇಳಿದು..

"ನಿಮ್ಮ ಕಗ್ಗ ರಸಧಾರೆ ಗಂಗಾವತರಣದ ಹಾಗೆ ಸದಾ ಹರಿಯುತ್ತಿರಲಿ.. ಜಗತ್ತಿನ ಮೂಲೆ ಮೂಲೆಗೂ ನಿಮ್ಮ ಬರಹ ತಲುಪಲಿ.. ಯಶಸ್ಸು.. ಅಭಿಮಾನದ ಹೊಳೆಯಲ್ಲಿ ಸದಾ ಮೀಯುತ್ತಿರಲಿ ನಿಮ್ಮ ಮನಸ್ಸು.. ಶುಭವಾಗಲಿ ಶ್ರೀ ರವಿ ತಿರುಮಲೈ ಅವರೇ"

ಅಶ್ವಗಳಿಗೆ ಇನ್ನಷ್ಟು ಹೊತ್ತು ಅಲ್ಲಿರಲು ಆಸೆಯಾಗಿತ್ತು.. ಆದರೆ ಮತ್ತೆ ಕಾಯಕಕ್ಕೆ ಹೋಗಬೇಕಾಗಿದ್ದರಿಂದ ಒಲ್ಲದ ಮನಸ್ಸಿನಿಂದ ಹೊರಟವು..

ರವಿ ಅವರಿಗೆ ಸಂತಸದಿಂದ.. ಇಂಥ ಆನಂದ ನಾ ತಾಳಲಾರೆ.. ಇನ್ನು ಮಾತಲ್ಲಿ ನಾ ಹೇಳಲಾರೆ... ಎಂದು ಹಾಡಿತು.. 

ಕಗ್ಗ ರಾಸಧಾರೆಯನ್ನು ಹರಿಸುತ್ತಾ ಎಲ್ಲರ ಪ್ರೀತಿ ಅಭಿಮಾನವನ್ನು ಕೈ ಕಟ್ಟಿ ಸ್ವೀಕರಿಸುತ್ತಾ.. ತಮ್ಮ ಅಭಿಮಾನಿ ಬಳಗದಲ್ಲಿ ರವಿ ಸರ್.. ರವಿಯಣ್ಣ.. ರವಿ ಗುರುಗಳೇ ಎಂದೇ ಬಿರುದಾಂಕಿತರಾದ ರವಿ ತಿರುಮಲೈ ಸರ್ ನಿಮಗೆ ಜನುಮದದಿನದ ಶುಭಾಶಯಗಳು..

ಶುಭವಾಗಲಿ ಎಂಬ ಹಾರೈಕೆ ನಮ್ಮದು.. ಶುಭವಾಗಲಿ ಎಂಬ ಹಾರೈಕೆ ನಿಮ್ಮಿಂದ ನಮಗೆ ಸಿಕ್ಕಾಗ ನಮ್ಮ ಜನುಮ ಪಾವನ..

ಆದಷ್ಟು ಬೇಗ ಕಗ್ಗ ರಸಧಾರೆ ಹರಿಯಲಿ.. ಕಾಯುತ್ತಿರುವ ನಿಮ್ಮವ ಹರಿ ಹರ (ಶ್ರೀಕಾಂತ್ ಮಂಜುನಾಥ್...)
.
ಹುಟ್ಟು ಹಬ್ಬದ ಶುಭಾಶಯಗಳು ಗುರುಗಳೇ.... !!!!

6 comments:

  1. ರವಿ ತಿರುಮಲೈ ಸಾರ್ ಅವರಿಗೆ ನಿಜವಾಗಿಯೂ ಇಂತಹ ಧನ್ಯವಾದದ ಶುಭಾಷಯ ಅರ್ಪಿಸ ಬೇಕು ಬ್ಲಾಗ್ ಲೋಕ, ಮಂಕು ತಿಮ್ಮನ ಕಗ್ಗದ ಅರ್ಥವನ್ನು ರಸವತ್ತಾಗಿ ಬ್ಲಾಗಿಗರಿಗೆ ಬಡಿಸುವ ಅವರ ಜ್ಞಾನಕ್ಕೆ ನಮ್ಮೆಲ್ಲರ ಸಲಾಂ, ಅನ್ನೊಣ . ಬ್ಲಾಗ್ ಗಳಲ್ಲಿ ಏನೋ ಬರೆದು ಕಾಲ ಹರಣ ಮಾಡುತ್ತಿರುವ ನಾವುಗಳು ಇವರಿಂದ ಕಲಿಯ ಬೇಕಾದದ್ದು ಬಹಳ ಇದೆ . ನಮ್ಮೆಲ್ಲರ ಪ್ರೀತಿಯ ಹಾರ್ದಿಕ ಶುಭಾಶಯಗಳು ನಿಮಗೆ ರವಿ ತಿರುಮಲೈ ಸಾರ್. ನಿಮ್ಮ ಜ್ಞಾನದ ಬೆಳಕು ಮತ್ತಷ್ಟು ನಮ್ಮೆಲ್ಲರ ಮೇಲೆ ಬೀಳಲಿ , ಬ್ಲಾಗ್ ಲೋಕದ ಅಪರೂಪದ ಪ್ರತಿಭೆಗೆ ಜೈ ಎನ್ನೋಣ , ನಾವೆಲ್ಲಾ . ಶ್ರೀಯುತರ ಜನುಮದಿನಕ್ಕೆ ಒಂದು ಒಳ್ಳೆಯ ಶುಭ ಹಾರೈಕೆ ನೀಡುವ ಶ್ರೀಕಾಂತ್ ನಿಮಗೆ ಜೈ ಹೊ .

    ReplyDelete
  2. ಪ್ರಾರ್ಥನೆ ಸಾರಥಿ ಸರಿಯಾದ ಹೆಸರು.
    ಕಗ್ಗ ರಸಧಾರೆ, ಚೆನ್ನುಡಿ, ರಸಿಕ ಸಹಿತ್ಯಗಳ ಮೂಲಕ ನಮ್ಮ ಮಮ ಗೆದ್ನದವರು ಪೂಜ್ಯ ತಿರುಮಲೈ ರವಿ ಅವರು.
    ಅವರ ಜನುಮ ದಿನಕ್ಕ ತಮ್ಮೀ ಬ್ಲಾಗ್ ಬರಹ ಒಳ್ಳೆಯ ಕೊಡುಗೆ.

    ಅವರ ಬ್ಲಾಗ್ ಲೋಕ:
    http://kaggarasadhaare.wordpress.com
    http://daasaanudaasa.blogspot.in

    ReplyDelete
  3. ಏನು ಹೇಳಲಿ ನಿಮ್ಮ ಪ್ರೀತಿ ವಿಶ್ವಾಸಗಳಿಗೆ!!! ನಿಮ್ಮ ಹೊಗಳಿಕೆಯಿಂದ ನನ್ನನ್ನು ಬಂಧಿಸಿದ್ದೀರಿ. ನಾ ಹುಷಾರಾಗಿರಬೇಕು. ಅಪ್ಪೀ ತಪ್ಪಿಯಾದರೂ ತಪ್ಪು ಹೆಜ್ಜೆ ಇಡುವ ಹಾಗೇ ಇಲ್ಲ. ನಿಮ್ಮ ಪ್ರೀತಿ ವಿಶ್ವಾಸಗಳಿಗೆ ಹೃತ್ಪೂರ್ವಕ ನಮನಗಳು. ನಿಮ್ಮ ಅಪೇಕ್ಷೆಗೆ ಒಪ್ಪುವಂತೆ ನಡೆದುಕೊಳ್ಳಲು ಪ್ರಯತ್ನಿಸುತ್ತೇನೆ. ನಮಸ್ಕಾರ.

    ReplyDelete
  4. ರವಿ ಸರ್ ಸ್ವಲ್ಪ ತಡವಾಗಿ ಜನುಮ ದಿನದ ಶುಭಾಷಯಗಳು ನಿಮಗೆ ...ಬದುಕ ತುಂಬಾ ಖುಷಿಗಳಿರಲಿ

    ಶ್ರೀಕಾಂತಣ್ಣಾ...
    ತುಂಬಾ ದಿನಗಳ ಹಿಂದೆ ಪಾಯಿಂಟ್ ಪಂಚರಂಗಿಗೆ ಬಂದ ನೆನಪು ನಂಗೆ...ಪರಿಚಿತರೇ ಅಲ್ಲದವರನ್ನೂ ತೀರಾ ಪರಿಚಿತರನ್ನಾಗಿ ಮಾಡಿಬಿಡ್ತೀರ ನೀವು ಭಾವವೊಂದ ಓದಿದ ಮೇಲೆ...
    ಎಲ್ಲರ ಜನುಮ ದಿನಕ್ಕೂ ಬೇರೆ ಬೇರೆಯದೇ ರೀತಿಯಲ್ಲಿ ಪ್ರೀತಿಯಿಂದ ಶುಭಾಷಯ ಹೇಳೋ ನಿಮ್ಮೆಲ್ಲಾ ಪ್ರೀತಿಯ ಆತ್ಮೀಯ ಭಾವಗಳೂ ನಂಗಿಷ್ಟ
    ಹಾಗೇ ಈ ಭಾವವೂ ಇಷ್ಟವಾಗಿ ರವಿ ಸರ್ ಆತ್ಮೀಯರು ಅನಿಸಿಬಿಟ್ಟಿದ್ದೂ ಸುಳ್ಳಲ್ಲ..
    ಚಂದದ ಶುಭಾಷಯಕ್ಕೆ ನಂದೊಂದು ನಮನ

    ReplyDelete
  5. ಶ್ರೀ ರವಿ ತಿರುಮಲೈ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು! ಎಂದಿನಂತೆ ಅದ್ಭುತ ನಿರೂಪಣೆ! ತುಂಬಾ ಚೆನ್ನಾಗಿದೆ!

    ReplyDelete
  6. ರವಿ ತಿರುಮಲೈ ಅವರು ಬಹುಶ: ನನಗೆ ನಿಮ್ಮ ಮಾತು ಮತ್ತು ಬರಹಗಳಲ್ಲೇ ಹೆಚ್ಚು ಆತ್ಮೀಯರು.. ಅವರ ಹುಟ್ಟುಹಬ್ಬಕ್ಕೆ ಚಂದದ ಬರಹ ಕೊಡುಗೆ :)

    ReplyDelete