ಬೆಲ್ಲಕ್ಕೆ ನೊಣ ಮುತ್ತಿದ ಹಾಗೆ ಎಲ್ಲರೂ ನನ್ನ ಲ್ಯಾಪ್ಟಾಪ್ ಸುತ್ತಾ ಕೂತು ನೋಡುತ್ತಿದ್ದರು..
"ನೋಡ್ರಪ್ಪಾ ದೇವರಿಗೆ ನೈವೈದ್ಯ ಇಟ್ಟು ಅದರ ಕಡೆ ನೋಡುತ್ತಲೇ ಇದ್ದರೇ ದೇವರಿಗೂ ಸಂಕೋಚವಲ್ಲವೇ.. ಜೊತೆಗೆ ದೇವರಿಗೆ ಹೇಗೆ ಬಂದು ನೈವೇದ್ಯ ಸ್ವೀಕರಿಸಬೇಕು.. ಎನ್ನುವ ಗೊಂದಲವೂ ಕಾಡುತ್ತದೆ.. ಹಾಡುವ ಕೋಗಿಲೆಗೆ ಸ್ವತಂತ್ರ ಕೊಟ್ಟಾಗ ಮಾತ್ರವೇ ಹಾಡೋದು ಅಲ್ಲವೇ.. "
ಕಲಿತ ಬುದ್ದಿಯನ್ನೆಲ್ಲಾ ಉಪಯೋಗಿಸಿ ಒಂದಷ್ಟು ಹೇಳಿದ ಮೇಲೆ, ಪ್ರಸಾದ ಸ್ವೀಕರಿಸಿದ ಮೇಲೆ ಭಕ್ತರು ದೇವಸ್ಥಾನದಿಂದ ಹೊರಗೆ ಹೋಗುವಂತೆ.. ಜಾಗ ಖಾಲಿಯಾಯಿತು..
ಬರಹಕ್ಕೆ ೧೯೪೭ ಆಗಸ್ಟ್ ೧೫ ಸಿಕ್ಕಿತು ..
ಅದೊಂದು ಸುಂದರ ಮುಂಜಾವು..
ಬಿಳಿ ಧಿರಿಸಿನಲ್ಲಿ ಮೈಸೂರು ರಸ್ತೆಯ ನಾಯಂಡಹಳ್ಳಿಯ ಬಳಿ ಬಸ್ಸು ಹತ್ತಿದ್ದು ನೋಡಿದ್ದು..
ಡಿವೈನ್ ಫೀಲಿಂಗ್ ಬಂದದ್ದು ಮೊದಲ ನೋಟದಲ್ಲಿಯೇ..
ಹೌದು ಕೆಲವು ಬಂಧಗಳಿಗೆ ಯಾವುದೇ ಬಂಧವಿರೋಲ್ಲ ಅಂತಾರೆ.. ಇವರು ಹಾಗೆ..
ನೀರು ಯಾವುದೇ ಪಾತ್ರೆಗೆ ಹಾಕಿದಾಗ ಆ ಪಾತ್ರಕ್ಕೆ ಹೊಂದುವಂತೆ..ಇವರ ವ್ಯಕ್ತಿತ್ವ..
ಸಮಾಜಮುಖಿ ಕೆಲಸ ಮಾಡಿದರೂ ಇವರು ಅನ್ಮೋಲ್ ರತ್ನ ಆಗೋಕೆ ಇಷ್ಟ ಪಡಲ್ಲ
ತಿರುಗಾಲ ತಿಪ್ಪಿ ಅಂದರೆ ವಾರಾಂತ್ಯಕ್ಕೆ ಪ್ರವಾಸ ಹೊರಟರೂ ಇವರು ತನ್ನನ್ನು ತಾನು ಅಲೆಮಾರಿ ಅಂದುಕೊಳ್ಳೋಲ್ಲ
ವಿದ್ಯೆ ಕಲಿಸುವ ಶಾಲೆಯಲ್ಲಿ ತೊಡಗಿಕೊಂಡಿದ್ದರೂ ತನ್ನನ್ನು ಶಿಕ್ಷಕಿ ಎಂದುಕೊಳ್ಳೋಲ್ಲ
ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಗುಂಪಿನಲ್ಲಿ ತಾನು ಸಕ್ರಿಯವಾಗಿದ್ದರೂ ತಾನು ಸಮಾಜ ಸೇವಕಿ ಎಂದು ಗುರುತಿಸಿಕೊಳ್ಳೋಕೆ ಇಷ್ಟ ಪಡಲ್ಲ
ಬದುಕಿನಲ್ಲಿ ಹೆಜ್ಜೆಯನ್ನು ಭಾರವಾಗಿಟ್ಟುಕೊಂಡು ಬಂದಿದ್ದರೂ ಬದುಕು ಹೂವಿನ ಹಾಸಿಗೆ ಎಂದೇ ನಂಬಿ..ಅದನ್ನು ಸಮಾಜಕ್ಕೂ ತೋರಿಸುವ ಗುಣವಿದ್ದರೂ ತಾನು ಸವಾಲುಗಳನ್ನು ಮೆಟ್ಟಿ ನಿಂತ ಈ ಶತಮಾನದ ಮಾದರಿ ಹೆಣ್ಣು ಎಂದು ಕರೆಸಿಕೊಳ್ಳೋದು ಇಷ್ಟವಿಲ್ಲ
ಗೌರೀಶಂಕರಾದ ತಪ್ಪಲಿಗೆ ಹೋಗಿ ಕರುನಾಡ ಬಾವುಟದಲ್ಲಿ ರಾರಾಜಿಸಿದರೂ ತಾನು ಹೆಮ್ಮೆಯ ಕನ್ನಡತಿ ಎಂದು ಹೇಳಿಕೊಳ್ಳುತ್ತಾರೆ ವಿನಹ ಅಸಾಮಾನ್ಯ ಚಾರಣಗಿತ್ತಿ ಎಂದು ಪೋಸ್ಟ್ ಹಾಕೋಲ್ಲ
ಕಾಡುಮೃಗಗಳ ದಟ್ಟ ಕಾಡಿನೊಳಗೆ ಸುತ್ತಾಡಿದರೂ ಪೇಟೆ ಮಂದಿ ಕಾಡಿಗೆ ಬಂದ್ರೂ ಅಂತ ಹೇಳಿಕೊಳ್ಳೋಲ್ಲ
ಸಂತ್ರಸ್ತರಿಗೆ ಆಸರೆ ನೀಡುತ್ತಾರೆ ಸಮಾಜ ಸುಧಾರಕಿಯಲ್ಲ ಮನೋಶಾಸ್ತ್ರಜ್ಞೆ ಅಲ್ಲ
ನೊಂದಿರುವವರಿಗೆ ಸಾಂತ್ವನ ಹೇಳುತ್ತಾರೆ..
ಕವನ ಬರೆಯುತ್ತಾರೆ ಕವಿಯತ್ರಿಯಲ್ಲ
ಲೇಖನ ಬರೆಯುತ್ತಾರೆ ಸಾಹಿತಿಯಲ್ಲ
ತಂಡ ಕಟ್ಟಿ ನೆಡೆಸುತ್ತಾರೆ ನಾಯಕಿಯಲ್ಲ
ಹಾಡುತ್ತಾರೆ ಗಾಯಕಿಯಲ್ಲ
ನರ್ತಿಸುತ್ತಾರೆ ಆದರೆ ನರ್ತಕಿಯಲ್ಲ
ಫೋಟೋ ತೆಗೆಯುತ್ತಾರೆ ಛಾಯಾಗ್ರಾಹಕಿಯಲ್ಲ
ತಾವು ಎಲ್ಲರ ತರಹ ಅನ್ನುತ್ತಾರೆ ಆದರೆ ಮಾನವರಲ್ಲ
ಇವರು ಅಸಾಧಾರಣ ಗುಣವುಳ್ಳ ಭಗವಂತನ ಅದ್ಭುತ ಸೃಷ್ಟಿ ಡಿವೈನ್ ವುಮನ್
DFR DFR ಜನುಮದಿನದಂದು ಇಲ್ಲ ಇಲ್ಲ ಎಂದು ಬರೆದು ನಿಮ್ಮ ಅಗಾಧ ಗುಣಗಳ ಖಜಾನೆಯನ್ನು ತೆರೆದಿಡಲು ಪ್ರಯತ್ನ ಪಟ್ಟಿದ್ದೇನೆ.. ನೀವೊಂದು ಸಾಗರ ಹೇಳಿದಷ್ಟು ಹೇಳುವಂತೆ ಮಾಡುವ ಅಪೂರ್ವ ಗುಣಸಾಗರಿ ನೀವು
ನಿಮ್ಮ ಬ್ಲಾಗ್ ಹೆಸರು ಹೇಳುವಂತೆ.. ಬಿಳಿಮುಗಿಲು ಅದಕ್ಕೆ ಕೊನೆಯೇ ಇಲ್ಲ.. ಆ ಬಿಳುಪಿನ ಹೊಳಪಿಗೆ ಮಾರು ಹೋಗುವವರೇ ಎಲ್ಲಾ... !
ಶುಭವಾಗಲಿ..ಜನುಮದಿನದಂದು ಪ್ರತಿದಿನವೂ .. ಅನುಕ್ಷಣವೂ .. ಸಂತಸ ನಿಮ್ಮ ಸ್ವತ್ತಾಗಿರಲಿ!
No comments:
Post a Comment