Friday, October 31, 2025

ಸಿಂಗಾಸನ್ ಬತ್ತೀಸ್

 ಅದೊಂದು  ಪುಟ್ಟ ಹಳ್ಳಿ ಅಲ್ಲಿನ ಗ್ರಾಮಸ್ಥರು ಮುಗ್ಧರು.. ಆ ಊರಿನ ವ್ಯಾಜ್ಯ ಏನೇ ಇದ್ದರೂ ಅವರೇ ಪರಿಹರಿಸಿ ಕೊಳ್ಳುತ್ತಿದ್ದರು.. ಆ ಪ್ರದೇಶದ ರಾಜ ನ್ಯಾಯ ತೀರ್ಮಾನಕ್ಕೆ ಹೆಸರಾಗಿದ್ದ ವಿಕ್ರಮಾದಿತ್ಯ.. ಅವನ ಸಿಂಹಾಸನದಲ್ಲಿ ೩೨ ಬೊಂಬೆಗಳಿದ್ದವು.. ರಾಜನಿಗೆ ನ್ಯಾಯ ನಿರ್ಣಯಿಸಲು ಆ ಗೊಂಬೆಗಳು ಸಹಾಯ

 ಸುತ್ತಮುತ್ತಲ ಹಳ್ಳಿಗಳ ಮಂದಿ ನ್ಯಾಯ ತೀರ್ಮಾನಕ್ಕೆ ಆ ರಾಜನ ಬಳಿ ಬರುತ್ತಿದ್ದದ್ದು ವಾಡಿಕೆ.. ಈ ಹಳ್ಳಿಯ ಮಂದಿ ಮಾತ್ರ ಒಮ್ಮೆಯೂ ಆ ರಾಜನ ಬಳಿ ತಮ್ಮ ಅಹವಾಲು ತೆಗೆದುಕೊಂಡು ಹೋದ ಉದಾಹರಣೆಗಳೇ ಇರಲಿಲ್ಲ ಅಂತ ಆ ಊರಿನ ಪ್ರಮುಖರೆಲ್ಲ ಮಾತಾಡಿಕೊಳ್ಳುತ್ತಿದ್ದರು.. 

ಇದು ಹೇಗೋ ಆ ಕಿವಿ ಈ ಕಿವಿ ಕಿವಿಗೆ ಅಂತ ಸಾಗಿ ಕಡೆಗೆ ಮಂತ್ರಿಯ ಕಿವಿಗೆ ಬಿತ್ತು.. ಇದೊಂದು ರೀತಿಯ ಅಹಂಗೆ ಪೆಟ್ಟು ಬಿದ್ದ ಹಾಗಿತ್ತು.. ಕಾರಣ ನ್ಯಾಯ ಅಂದರೆ ವಿಕ್ರಮಾದಿತ್ಯ ಅನ್ನೋವಷ್ಟು ಖ್ಯಾತಿಯಿದ್ದ ಆ ರಾಜ್ಯದಲ್ಲಿ ಈ ರೀತಿ ಆಗಲು ಸಾಧ್ಯವೇ ಎನ್ನುವ ಕುತೂಹಲ ಕೂಡ ಸೇರಿದ್ದು ವಿಶೇಷ.. 

ಇದನ್ನು ಸೂಕ್ಷ್ಮವಾಗಿ ರಾಜನ ಕಿವಿಗೆ ಸಾಗಿಸಿಸಿದರು ಮಂತ್ರಿಗಳು.. 

ರಾಜನಿಗೆ  ಕೋಪದ ಬದಲು ಕುತೂಹಲ ಹೆಚ್ಚಾಯಿತು.. ಸರಿ ತನ್ನ ಮಂತ್ರಿಗಳ ಜೊತೆಯಲ್ಲಿ ಮಾರುವೇಷ ಧರಿಸಿ ಆ  ಹಳ್ಳಿಯ ಕಡೆಗೆ ಹೊರಟರು.. 

ಮಾರ್ಗ ಮಧ್ಯೆ ಹಲವಾರು ಜನ ಮಾತಾಡುತ್ತ "ವಿಕ್ರಮಾದಿತ್ಯರಂಥಹ ಅರಸರ ಕಾಲದಲ್ಲಿ ನಾವಿರೋದು ಪುಣ್ಯ.. ಅವರ ನ್ಯಾಯ ತೀರ್ಮಾನದ ಬಗ್ಗೆ ಎರಡನೇ ಮಾತುಗಳೇ ಇಲ್ಲ.. ಸರಿಯಾದ ತೀರ್ಪು ಕೊಡೊದರಲ್ಲಿಎತ್ತಿದ ಕೈ.. ಆ ಗೊಂಬೆಗಳು ಸರಿಯಾದ ಮಾರ್ಗದರ್ಶನ ನೀಡುತ್ತವೆ.. ಹಾಗೆಯೇ ಈ ಹಳ್ಳಿಯಲ್ಲಿಯೂ ಎಷ್ಟು ಚೆನ್ನಾದ ಹಾಗೂ ಸರಿಯಾದ ತೀರ್ಮಾನ ಕೊಡುತ್ತಾರೆ.. 

ವ್ಯಾಜ್ಯ ೧ : ಅಣ್ಣ ತಮ್ಮಂದಿರ ಮಧ್ಯೆ ಭೂಮಿ ಪಾಲು ಮಾಡುವ ವಿಷಯದಲ್ಲಿ ತಕರಾರು ಬಂದಿತ್ತು.. ಆದರೆ ಅವರಿಬ್ಬರೂ ಜಗಳವಾಡದೆ ಆ ಹಳ್ಳಿಯ ಪ್ರಮುಖರ ಬಳಿ ಬಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.. ಸಮಸ್ಯೆ ಇದ್ದದ್ದು ಅವರ ಹೊಲ ಗದ್ದೆಗಳ ಆಕಾರದಲ್ಲಿ ಸರಿಯಾಗಿ ಭಾಗ ಮಾಡಲು ಸಾಧ್ಯವಿರಲಿಲ್ಲ.. ಆಗ ಅಲ್ಲಿನ ಪ್ರಮುಖರು ಮುಖ್ಯ ಭೂಮಿಯನ್ನು ಭಾಗ ಮಾಡಿ ಉಳಿದ ಭಾಗಮಾಡಲು ಆಗದ ಭೂಮಿಯನ್ನು ಒಂದು ವರ್ಷ ಒಬ್ಬನಿಗೆ ಇನ್ನೊಂದು ವರ್ಷ ಇನ್ನೊಬ್ಬನಿಗೆ ಉಳುಮೆ ಮಾಡಲು ಹೇಳಿದರು.. ಒಪ್ಪುವಂತಹ ನಿರ್ಣಯವೇ ಹೌದು.. ಕಾರಣ ಭೂಮಿಯೂ ಫಲವತ್ತಾಗಿರುತ್ತದೆ.. ಬೆಲೆಯೂ ಚೆನ್ನಾಗಿ ಬರುತ್ತದೆ.. ವಾಹ್ ವಾಹ್.. 

ವ್ಯಾಜ್ಯ ೨ - ಅದ್ಭುತ ಗೆಳೆತನದ ಇಬ್ಬರೂ ಕಾರಣಾಂತರಗಳಿಂದ ಕೆಲಸದ ಒತ್ತಡ.. ಉದ್ಯೋಗದಲ್ಲಿ ಬೆಳೆಯಲೇ ಬೇಕಾದ ಅನಿವಾರ್ಯತೆ, ಬೆಳೆಯುತ್ತಿರುವ ಬದುಕು ಇವುಗಳಿಂದ ಮೊದಲಿನ ಹಾಗೆ ಮಾತಾಡಲು ಪುರುಸೊತ್ತು ಸಿಗುತ್ತಿರಲಿಲ್ಲ ಆದರೂ ಪ್ರತಿದಿನದ ಶುಭಾಶಯಗಳೊಂದಿಗೆ ದಿನ ಆರಂಭವಾಗುತ್ತಿತ್ತು..ಆದರೆ ಜನುಮದಿನದ ಶುಭಾಶಯಗಳನ್ನು ಹೇಳೋದಕ್ಕೆ ತಡವಾಗಿತ್ತು.. ಆದರೆ ಒಬ್ಬರಲ್ಲಿ ಬೇಸರವಿಲ್ಲ.. ಇನ್ನೊಬ್ಬರಲ್ಲಿ ಕೋಪವಿಲ್ಲ.. ಆದರೂ ಯಾಕೆ ಏನಾಯಿತು ಅನ್ನುವ ತವಕ.. ಈ ಸಮಸ್ಯೆಗೆ ಎಷ್ಟು ಸುಲಭವಾಗಿ ಉತ್ತರ ಕೊಟ್ಟರು.. ನೋಡಿ ಸುಮ್ಮನೆ ಶುಭಾಶಯಗಳು ಅಂತ ಹೇಳಿದರೆ ಒಪ್ಪಿಕೊಳ್ಳುವ ಮನಸ್ಸಲ್ಲ ಅದು.. ಸ್ವಲ್ಪ ವಿಭಿನ್ನವಾಗಿ ಬರೆಯಬೇಕು ಅಂದರೆ ಸಮಯದ ಅಭಾವ.. ಮತ್ತೆ ಬೇಕಾಬಿಟ್ಟಿ ಬರೆಯುವ ಮನಸ್ಸು ಅಲ್ಲವಲ್ಲ.. ಹಾಗೆ ಬರೆದರೂ ಇಲ್ಲೇನೂ ಸಮಸ್ಯೆ ಇದೆ ಎನ್ನುವ ಆಲೋಚನೆಗಳು ಬರುತ್ತಿದ್ದವು.. ಆದರೆ ಅದಕ್ಕೆ ಉತ್ತರ ಸಿಗುತ್ತಿರಲಿಲ್ಲ.. ಹಾಗಾಗಿ ತಿಂಗಳ ಅಂತ್ಯದ ತನಕ ಕಾಯೋದು.. ಆಗಲೂ ಬರಲಿಲ್ಲ ಅಂದರೆ ಕರೆ ಮಾಡಬಹುದು ಅಂತ ತೀರ್ಪು ಕೊಟ್ಟರು.. ತೀರ್ಪು ಎಂದರೆ ಇದು..ಬಾರದ ಕೋಪವೂ ಮಾಯಾ .ಇಲ್ಲದ ಬೇಸರವೂ ಮಾಯಾ.. 

ವಿಕ್ರಮಾದಿತ್ಯ ಎರಡೂ ತೀರ್ಪುಗಳ ಕತೆಯನ್ನು ಕೇಳಿ ಇನ್ನಷ್ಟು ಖುಷಿಯಾಯಿತು.. ಎರಡೂ ತೀರ್ಪುಗಳಲ್ಲಿ ಭಾಗಿಯಾಗಿದ್ದ  ಮಂದಿಯನ್ನು ನೋಡಬೇಕು ಅಂತ ಬಯಸಿದಾಗ ಅಲ್ಲಿನ ಊರ ಜನರು 

ಮೊದಲನೇ ತೀರ್ಪಿನಲ್ಲಿದ್ಧ ಅಣ್ಣ ತಮ್ಮಂದಿರು ಹೆಗಲ ಮೇಲೆ ಹೆಗಲು ಕೈ ಹಾಕಿ ಕೊಂಡು ತಮ್ಮ ಹೊಲ ಗದ್ದೆಗಳ ಕಡೆ ಹೊರಟಿದ್ದರು.. 

ಎರಡನೇ ತೀರ್ಪಿನಲ್ಲಿದ್ದವರನ್ನು ಹುಡುಕಿದರು.. ಆದರೆ ಸಿಗಲಿಲ್ಲ.. ಕಾಣಲಿಲ್ಲ.. ಆಗ ಅವರೆಲ್ಲಿ ಎಂದಾಗ.. ನೋಡ್ರಪ್ಪಾ ಒಬ್ಬರು ಈ ಲೇಖನವನ್ನು ಬರೆಯುತ್ತಿದ್ದಾರೆ.. ಇನ್ನೊಬ್ಬರು ಈ ಲೇಖನವನ್ನು ಓದುತ್ತಿದ್ದಾರೆ.. 

ಓದುತ್ತಿದ್ದಾರಲ್ಲ ಅವರದೇ ಜನುಮದಿನ.. ಅವರಿಗೆ ಶುಭಾಶಯಗಳನ್ನು ಕೋರುತ್ತಾ ನಮ್ಮ ದಿನ ನಿತ್ಯದ ಕೆಲ್ಸದ ಕಡೆಗೆ ಗಮನ ಕೊಡೋಣ.. 

ವಿಕ್ರಮಾದಿತ್ಯರಿಗೆ ಪೂರ್ಣ ಖುಷಿಯಾಯಿತು. ಇಷ್ಟು ಸರಳವಾಗಿ ಆದರೆ ಗಂಭೀರವಾಗಿ ತೀರ್ಪು ಕೊಡಬೇಕಾದರೆ ಈ ಹಳ್ಳಿಯ ಮಂದಿ ಸಾಮಾನ್ಯರಲ್ಲ.. ಏನೋ ದಿವ್ಯಶಕ್ತಿ ಇದೆ .. ಏನದು ಅಂತ ಕೇಳಿದಾಗ.. 

ನೋಡಿ ಈ ಹಳ್ಳಿಯ ಮಂದಿಗೆ ಪ್ರತಿ ತಿಂಗಳಿಗೆ ಒಮ್ಮೆನಿವೇದಿತಾ ಚಿರಂತನ್  ವಿಚಾರ ವಿನಿಮಯ ಕಾರ್ಯಕ್ರಮ ಮಾಡುತ್ತಾರೆ.. ನಾವೆಲ್ಲರೂ ಒಂದೇ ಮನಸ್ಸಿನಿಂದ ಪೂರ್ಣ ಇಚ್ಚೆಯಿಂದ ಭಾಗವಹಿಸುತ್ತೇವೆ.. ಅವರು ಹೇಳಿ ಕೊಡುವ ಅವರು ತೋರಿಸುವ ಹಾದಿಯಲ್ಲಿ ನೆಡೆಯುತ್ತಿರುವುದರಿಂದ ನಮಗೆ ಈ ರೀತಿಯ ದಿವ್ಯ ಜ್ಞಾನ ಪ್ರಾಪ್ತಿಯಾಗಿದೆ.. ಇದರ ಸಮಸ್ತ ಯಶಸ್ಸು ಅವರಿಗೆ.. 




ವಿಕ್ರಮಾದಿತ್ಯರ ಸಂತಸಕ್ಕೆ ಪಾರವೇ ಇರಲಿಲ್ಲ.. 

ನಿವೇದಿತಾ ಚಿರಂತನ್ ಅವರಿಗೆ ಶುಭಾಶಯಗಳು ಹಾಗೆ ಇದೆ ಹಳ್ಳಿಯಂತೆ ನನ್ನ ದೇಶದಲ್ಲಿರುವ ಎಲ್ಲಾ ಹಳ್ಳಿಗಳಿಗೂ ಈ ರೀತಿಯ ದಿವ್ಯ ಜ್ಞಾನ ನೀಡಿ ಎಂಬ ಕಳಕಳಿಯ ಮನವಿಯೊಂದಿಗೆ ಈ ದೇಶದ ಅರಸನಾಗಿ ನಿಮಗೆ ಶುಭ ಕೋರುತ್ತಿದ್ದೇನೆ ಎಂದು ಹೇಳಿ ತಮ್ಮ ಅರಮನೆಗೆ ತಮ್ಮ ಪರಿವಾರದ ಗಣಗಳ ಜೊತೆ ಹೊರಟರು.. 

*************************** 

ಸಿಬಿ ತಡವಾಯಿತು.. ಕ್ಷಮೆ ಇರಲಿ.. ಭಗವಂತ ನೀಡಿದ ಅದ್ಭುತ ಗೆಳತಿಗೆ ಜನುಮದಿನದ ತಡವಾದ ಶುಭಾಶಯಗಳು  (ಫೋಟೋಗಳನ್ನು ಕದಿಯಲಾಗಿದೆ -----  ಕ್ಷಮೆ ಇರಲಿ)

Wednesday, May 7, 2025

Divine ... Divine...Divine DFR DFR!

 ದೃಶ್ಯ ೧

ಕೇಳು ನಿನಗೇನು ಕೇಳು.. 

ನನಗೆ DFR ತರಹ ತಾಳ್ಮೆ ಬೇಕು.. 

ಬೇರೆ ಏನೂ ಬೇಡವೇ.. ದುಡ್ಡು, ಅಂತಸ್ತು, ರಾಜ್ಯ, ಕೋಶ.. 

ಇಲ್ಲ ನನಗೆ ೩ಕೆ ತಂಡದವರು ಇದೆ ಬೇಕು ಅಂತ ಕೇಳಿದ್ದಾರೆ ನನಗೆ ಅದೇ ಬೇಕು 


ದೃಶ್ಯ ೨

ಚಾವಟಿಯಲ್ಲಿ ಬಾಸುಂಡೆ ಬರುವ ತರಹ ಹೊಡೆಯುತ್ತಿರುತ್ತಾರೆ.. 

"ಇನ್ನೂ ಬಲವಂತವಾಗಿ ಹೊಡಿ.. ಇನ್ನೂ ಜೋರಾಗಿ ಹೊಡಿ"

"ಹೊಡೆಯುವೆ" ಆದರೆ ಏತಕ್ಕೆ ಹೀಗೆ ಚಾವಟಿಯಲ್ಲಿ ಏಕೆ ಒದೆ ತಿನ್ನುತ್ತಿದ್ದೀರಾ"

"ನೋಡಿ ಅಲ್ಲಿ ಎಲ್ಲರೂ DFR DFR ತರಹ ಕೆಲಸ ಮಾಡದೆ.. ಸೋಮಾರಿತನದಿಂದ ಇದ್ದಾರೆ.. ಅದಕ್ಕೆ ಅವರ ತರಹ ಪಾದರಸದಂತೆ ಇರಬೇಕು .. ಇಲ್ಲದೇ ಹೋದರೆ ಹೀಗೆ ಎಲ್ಲರಿಗೂ ಏಟು ಅದು ಎಲ್ಲರಿಗೂ ಪಾಠವಾಗಲಿ ಅಂತ ಬಾರಿಸು ಅಂತ ಹೇಳುತ್ತಿದ್ದೇನೆ"


ದೃಶ್ಯ ೩ 

"ಎಲ್ಲಿ ಮರೆಯಾದೆ ವಿಠಲ ... ಏಕೆ ದೂರದೇ.. ವಿಠಲ ರಂಗ ವಿಠಲ ರಂಗಾಅಅಅಅಅಅಅಅಅಅ"

"ಅರೆ ಗೋರಾ.. ವಿಠಲ ಪಂಡರಾಪುರದಲ್ಲಿ ಸಿಗುತ್ತಾನೆ.. ಆದರೆ ನೀನು ಅಲ್ಲಿಗೆ ಹೋಗಿ ದರ್ಶನ ಪಡೆದು ಬಂದಿದ್ದೀಯಾ.. ಆದರೂ ಯಾಕೆ ಇನ್ನೂ ಹಣೆಯಲ್ಲಿ ಗೆರೆಗಳು ಇದ್ದಾವೆ"

"ಹೌದು ನಾಮದೇವರೇ.. ವಿಠಲನ ದರ್ಶನವೇನೋ ಆಯಿತು.. ಆದರೆ DFR DFR ಅವರ ಅಭಿಮಾನಿಗಳಿಗೆ ಸಿಗುತ್ತಿಲ್ಲ ಏನು ಮಾಡೋದು"

ಟಂ ಅಂತ ಪಾಂಡುರಂಗನೂ ಮಾಯಾ.. ನಾಮದೇವರು ಮಾಯಾ.. ಈ ಪ್ರಶ್ನೆಗೆ ಉತ್ತರ ಬರಿ DFR DFR ಅವರಿಗೆ ಮಾತ್ರ ಗೊತ್ತಿರೋದು


ದೃಶ್ಯ ೪

"ಎಲ್ಲಿರುವನೋ ನಿನ್ನ ಹರಿ.. ಈ ಕಂಬದಲ್ಲಿರುವನೇ.. ಈ ಕಂಬದಲ್ಲಿರುವನೇ?"

ಟಿ"ತಂದೆಯೇ ನಿನಗೆ ನಾ ಹರಿಯನು ಹೇಗೋ ತೋರಿಸುತ್ತೇನೆ.. ಪುರುಸೊತ್ತು ಇಲ್ಲದೆ ಸದಾ ಕಾಲಿಗೆ ಚಕ್ರ ಕಟ್ಟಿಕೊಂಡು ಟೂರು, ಸಿನಿಮಾ, ನಾಟಕ, ಕಾರ್ಯಕ್ರಮ ನಿರೂಪಣೆ, ಹಿಮಾಲಯದ ತಪ್ಪಲು, ಫೆಂಚ್ ಅರಣ್ಯ, ರಂಗ ಶಂಕರ, ಜನದನಿ, ೩ಕೆ ರಾಜ್ಯೋತ್ಸವ, NGO, ಚಂಪಕಧಾಮ ದೇವಸ್ಥಾನ ಅಂತ ಸುತ್ತುತ್ತಲೇ ಇರುವ ಅವರನ್ನು ನೀನು ತೋರಿಸು.. ನಾ ಹರಿಯನ್ನು ತೋರಿಸುತ್ತೇನೆ"

ಹಿರಣ್ಯಕಶಿಪು ಹರಿಯನ್ನು ಹುಡುಕೋದು ಬಿಟ್ಟು.. ನಾ ಸೋತೆ ಅವರನ್ನು ಹುಡುಕೋದು ಕಷ್ಟ.. ಅದಕ್ಕೆ ಬದಲು ಹರಿನಾಮ ಸ್ಮರಣೆ ಮಾಡೋದೇ ಉತ್ತಮ "ನಾರಾಯಣ ನಾರಾಯಣ" 

ದೃಶ್ಯ ೫

"ಹೊಂಚು ಮಾಡಿ ಸಂಚು ಮಾಡಿ ನಮ್ಮ ರಾಜ್ಯವನ್ನು ಕಬಳಿಸಿ ಮೆರೆಯುತ್ತಿರುವ ಶಿವಸ್ಕಂದ ವರ್ಮಾ.. ಕದಂಬರ  ವೃಕ್ಷ ತಲೆಯೆತ್ತಿ ನಿಂತಿದೆ .. "

ಶಿವಸ್ಕಂದ ವರ್ಮಾ ಮಯೂರನಿಗೆ "ಮಯೂರ ನಿನಗೆ ರಾಜ್ಯ ಬೇಕು ತಾನೇ ನಾ ಖುಷಿಯಿಂದ ಕೊಡುತ್ತೇನೆ.. ಆದರೆ DFR DFR ಎಲ್ಲರ ಮನವನ್ನು ಗೆಲ್ಲುತ್ತಾರೆ ಅಲ್ಲವೇ.. ಆ ರೀತಿಯ ಗುಣವನ್ನು ನನಗೂ ಹೇಳಿಕೊಡಿ ಅಂತ ನೀವು DFR DFR ಗೆ ಹೇಳಿ ಪ್ಲೀಸ್"


ದೃಶ್ಯ ೬

ಇದು DFR DFR ತಾಕತ್ತು.. ಎಲ್ಲೇ ಹೋದರೂ ಮತ್ತೆ ಬಂದು ನಿಲ್ಲೋದು DFR DFR ಅವರ ನೀರಿನಂತಹ ಗುಣ.. ಯಾವುದೇ ಪರಿಸ್ಥಿತಿಗೆ, ಯಾವುದೇ ವಾತಾವರಣಕ್ಕೆ, ಯಾವುದೇ ಸ್ಥಿತಿಯಲ್ಲಿಯೂ ಕೂಡ ಸದಾ ಇನ್ನೊಬ್ಬರ ಬಗ್ಗೆ ಯೋಚಿಸುವ, ಸಹಾಯ ಚಾಚುವ ಅವರ ಗುಣ ಎಲ್ಲರಿಗೂ ಮಾದರಿ.. ಅಷ್ಟಿಲ್ಲದೆ ನಾ ಎಲ್ಲರಿಗೂ ಗುಣವಾಚಕವಾಗಿ ಹೆಸರಿಡುವ ನಾನು ಅವರನ್ನು DFR DFR ಅಂತ ಕರೆಯುತ್ತೇನೆಯೇ!

ಜನುಮದಿನದ ಶುಭಾಶಯಗಳು DFR DFR!

Monday, April 28, 2025

ದೇವರು ನಕ್ಕೆ ನಗುತ್ತಾನೆ - ೭

ಮೊಬೈಲಿನಲ್ಲಿ ನಗುನಗುತಾ ನಲಿ ನಲಿ ಏನೇ ಆಗಲಿ.. ಅಣ್ಣಾವ್ರ ಹಾಡು ಬರುತ್ತಿತ್ತು.. ಮೊಬೈಲಿನಲ್ಲಿದ್ದ ಕೃಷ್ಣ ಅರ್ಜುನ ನಗಲು ಶುರು ಮಾಡಿದರು. 

ಲೋ ಹೈದ ನಗು ನಗು ಅಂತ ಹೇಳುತ್ತಾ ನಗೋದನ್ನೇ ಮರೆತಿದ್ದೀಯಾ ಅಥವ ಅದರ ಬಗ್ಗೆ ಬರೆಯೋದನ್ನು ಮರೆತಿದ್ದೀಯಾ.. ಏನ್ಲಾ ನಿನ್ನ ಕಥೆ.. ಐದು ವರ್ಷ ಇದರ ಬಗ್ಗೆ ಒಂದು ಚೂರು ಬರೆದಿಲ್ವಲ್ಲೋ..

ಹೌದು ಕೆಲವೊಮ್ಮೆ.. ನಾಳೆ ನಾಡಿದ್ದು ಆಚೆ ನಾಡಿದ್ದು ಅಂತ ಹೇಳುತ್ತಾ ವಾರಗಳು, ತಿಂಗಳು, ವರ್ಷಗಳೇ ಕಳೆದು ಹೋಗುತ್ತವೆ.. 

ಹಾಗೆ ಲೇಖನದ ದಿನಾಂಕ ನೋಡಿದೆ  ಅರೆ ನಾಲ್ಕು ವರ್ಷ ಆಗೋಗಿದೆ.. ದೇವರ ನಗುವಿನ ಸರಣಿ ಬರೆದು.. 

ಸರಿ ಬರೆದು ಬಿಡೋಣ ಅಂತ ಶುರು ಮಾಡಿದೆ.. ಈ ಐದು ವರ್ಷಗಳಲ್ಲಿ ಕಾವೇರಿ ನದಿಯಲ್ಲಿ ಎಷ್ಟೋ  ಸಹಸ್ರ ಸಹಸ್ರ ಗ್ಯಾಲನ್ ನೀರು ಸಮುದ್ರದ ಪಾಲಾಗಿದೆ.. ಎಷ್ಟೋ ಘಟನೆಗಳು ಎಷ್ಟೋ ನಗುವಿನ ದೃಶ್ಯಗಳು ಸ್ಮೃತಿ ಪಟಲದಿಂದ ಮರೆಯಾಗಿ ಹೋಗಿದೆ.. ಆದರೂ ಕೆಲವು ನೆನಪುಗಳು ಅಚ್ಚಳಿಯದೆ ನಿಂತಿರುವುದನ್ನು.. ಕೆಲವು ಘಟನೆಗಳು ಇತ್ತೀಚಿಗೆ ನೆಡೆದಿರುವುದು ಇಲ್ಲಿ ದಾಖಲಿಸಿ ಕಡೆ ಪಕ್ಷ ಪಶ್ಚಿಮ ವಾಹಿನಿ ಹಾದಿಯಲ್ಲಿರುವ ಈ ಸರಣಿಯನ್ನು ಮತ್ತೆ ಮುಖ್ಯ ಹಾದಿಗೆ ತರುವ ಪ್ರಯತ್ನ ಮಾಡುವ ಒಂದು ಪುಟ್ಟ ಶ್ರಮ.. 

                                                                       ******* 

ದೃಶ್ಯ ೧ 

ಜೀವನದ ಓಟದ ಹಾದಿಯಲ್ಲಿಅಡೆತಡೆಯಿಲ್ಲದೆ .. ಬಂದರೂ ಲೆಕ್ಕಿಸದೆ ಪಯಣ ಸಾಗಿತ್ತು.. ಉದ್ಯೋಗ ಕ್ಷೇತ್ರದಲ್ಲಿ ಒಂದು ಪುಟ್ಟ ತಿರುವು ಸಿಕ್ಕಾಗ ಮತ್ತೆ ನಿಂತ ಬದುಕು ಓಡಲು ಶುರುವಾಗಿತ್ತು.. 

ಮೊದಲ ದಿನ.. ಸಹಸ್ರಾರು ಬಾರಿ ಸಾಗಿದ್ದ ಮೈಸೂರು ರಸ್ತೆಯ ಮೇಲ್ ಸೇತುವೆ.. ಕೆ ಆರ್ ಮಾರುಕಟ್ಟೆಯ ಬಳಿಯ ನನ್ನ ನೆಚ್ಚಿನ ಗಣಪನ ದೇವಾಲಯ.. ಅಲ್ಲಿಗೆ ಹೋಗಬೇಕು ಅನ್ನುವ ಅವಕಾಶ ಇನ್ನೂ ಒದಗಿಲ್ಲ ಅನ್ನೋದಕ್ಕಿಂತ ಆ ರಸ್ತೆಯಲ್ಲಿ ಸಾಗುವಾಗ ಸೇತುವೆ ಮೇಲೆ ಇರುವುದರಿಂದ ಗಣಪನ ದೇವಾಲಯದ ಗೋಪುರ ಮಾತ್ರ ಕಾಣುತ್ತದೆ.. ಸೇತುವೆ ಕೆಳಗೆ ಸಾಗೋಣ ಎಂದರೆ ಅಸಾಧ್ಯ ವಾಹನ ದಟ್ಟಣೆ.. ಬೆಳಿಗ್ಗೆ ಹೋಗುವಾಗ ಆತುರ.. ಬರುವಾಗ ಮನೆಯನ್ನು ಸೇರುವ ಕಾತುರ.. ಹಾಗಾಗಿ ಆ ದೇವಾಲಯಕ್ಕೆ ಭೇಟಿಯ ಪುಣ್ಯ ಇನ್ನೂ ಸಿಕ್ಕಿಲ್ಲ.. ಸೋಮಾರಿತನವೂ ಕಾರಣ.. ಶನಿವಾರ ಭಾನುವಾರ ಹೋಗಿ ಬರಬಹುದು ಅದೇನು ದೊಡ್ಡ ಕೆಲಸವಲ್ಲ ಆದರೆ ಮನುಷ್ಯನನ್ನು ಸೋಮಾರಿ ಮಾಡುವ ಆಲಸ್ಯ.. ನನಗೂ ತುಸು ಹೆಚ್ಚೇ ಇರುವುದರಿಂದ.. ಹೋಗಲಾಗಿಲ್ಲ.. ಆದರೆ ಹೋಗಿ ಬರುವ ಖಂಡಿತ.. 

ಸರಿ ವಿಷಯಕ್ಕೆ ಬರುತ್ತೇನೆ.. ಆ ಸೇತುವೆ ಮೇಲೆ ಹೋಗುವಾಗ ಬರುವಾಗ ಆ ಗೋಪುರ ನೋಡಿ ಕೈ ಮುಗಿದು ಮುಂದುವರೆಯುವುದು ನನ್ನ ಅಭ್ಯಾಸ.. ಎಷ್ಟೇ ದಟ್ಟಣೆ ಇರಲಿ. ಹಿಂದಿನವ ಬಡ್ಕೊಂಡ್ರು ಸರಿ ಒಂದು ಕ್ಷಣ ಕೈಮುಗಿದು ಹೋಗುವುದು ಅಭ್ಯಾಸ.. 



ಕೆಲಸದ ಮೊದಲ ದಿನ.. ಅದೇ ದಾರಿಯಲ್ಲಿ ಪಯಣ ಸಾಗಿತ್ತು..ಅದೇ ದೇವಾಲಯ.. ಅದೇ ಸೇತುವೆ.. ಸಾಗುವಾಗ ... ಆಗಲೇ ತಡವಾಗಿತ್ತು.. ಆದ್ದರಿಂದ ತುಸು ವೇಗವಾಗಿ ಜೊತೆಗೆ ಅಷ್ಟೇ ಗಾಬರಿ ಸಹಿತ.. ದೇವಾಯ ಹಾದು ಹೋದೆ ಆದರೆ.. ಕೈ ಮುಗಿಯೋದು ಆ ಕ್ಷಣಕ್ಕೆ ಮರೆಯಾಗಿತ್ತು... 

ಟರ್ ಟರ್ ಶಬ್ದ ಕೂಡ ಕಿವಿಗೆ ಕೇಳಿಸದಷ್ಟು ಬೇಗ ಸಾಗುವ ಇರಾದೆಯಿಂದ ಸಾಗುತ್ತಿದ್ದೆ.. ನನ್ನ ಪಕ್ಕದ ಬೈಕಿನವ .. ಸರ್ ಚಕ್ರ ನೋಡಿ ಚಕ್ರ ನೋಡಿ ಅಂತ ಕೂಗುತ್ತಾ ಹೋದ.. ನಾನು ಅಯ್ಯೋ ಪಂಚರ್ ಆಗಿದೆಯಾ .. ಏನಪ್ಪಾ ಮಾಡೋದು ಹೊತ್ತಾಗುತ್ತೆ ಅಂತ ಬೈಕ್ ನಿಲ್ಲಿಸಿದೆ.. ನೋಡಿದರೆ.. ಒಂದು ಪ್ಲಾಸ್ಟಿಕ್ ಕ್ಯಾನ್ ಚಕ್ರಕ್ಕೆ ಸಿಕ್ಕಿ ಹಾಕಿಕೊಂಡು ಸದ್ದು ಮಾಡುತ್ತಿದೆ.. ಅಯ್ಯೋ ಅಂತ ಆ ಕ್ಯಾನ್ ತೆಗೆದು ರಸ್ತೆ ಬದಿಯಲ್ಲಿಟ್ಟು ಎದ್ದು ನಿಂತು.. ನೋಡಿದೆ... ತಣ್ಣನೆ ಗಾಳಿ ಮುಖದ ಮೇಲೆ ಬಿದ್ದ ಅನುಭವ.. ಕತ್ತೆತ್ತಿ ಸುತ್ತಾ ನೋಡಿದೆ.... ಯಾರೋ ಫ್ಯಾನ್ ಹಾಕಿದ್ದಾರೆ ಅನಿಸುವ ಅನುಭವ.. ಪೈಪಿನಿಂದ ಗಾಳಿ ಬೀಸಿದ ಅನುಭವ.. ಮೆಲ್ಲನೆ ತಿರುಗಿ ನೋಡಿದೆ.. ಪ್ರತಿ ದಿನ ಕೈಮುಗಿಯುತಿದ್ದ ಗಣಪನ ದೇವಾಲಯ.. ಅರೆ ಇವತ್ತು ಮರೆತೇ ಬಿಟ್ಟೆನಲ್ಲ ಅಂತ ಬೇಸರ ಪಟ್ಟುಕೊಂಡು ತಿರುಗಿ ಕೈಮುಗಿದೆ.. ಬೈಕ್ ಸ್ಟಾರ್ಟ್ ಮಾಡಿದೆ.. ಶ್ರೀ ಆಲ್ ದಿ ಬೆಸ್ಟ್ ಅಂತ ಗಣಪ ಆಶೀರ್ವಾದ ಮಾಡಿದಂತೆ ಅನುಭವ.. 

ತಲೆಯೆತ್ತಿ ನೋಡಿದೆ.. ಶ್ರೀ ನಿನ್ನ ಗಡಿಬಿಡಿಯಲ್ಲಿ ನೀ ನನ್ನ ಮರೆಯಬಹುದು ಆದರೆ ನಾ ನಿನ್ನ ಮರೆಯೋಲ್ಲ ಕಣೋ.. ಶುಭವಾಗಲಿ.. ಹೊಸ ತಿರುವು ಹೊಸ ಯಶಸ್ಸನ್ನು ತಂದು ಕೊಡಲಿ.. ಶುಭವಾಗಲಿ ಎಂದು ಹರಸಿದ ಗಣಪ.. ಅದನ್ನು ಕಂಡು ನಾ ನಕ್ಕೆ.. ದೇವರು ಕೂಡ ಖಂಡಿತ ಒಂದು ಸುಮಧುರ ನಗು ಕೊಟ್ಟ.. 

                                                             *****

ದೃಶ್ಯ ೨

ಮನೆಯ ಹತ್ತಿರದ ಒಂದು ಸ್ವಸಹಾಯ ಪದ್ದತಿಯ ಹೋಟೆಲ್.. ನಮಗೆ ಬೇಕಾಗಿದ್ದು ಹೇಳಿ ಚೀಟಿ ಪಡೆದು ಕಾಯುತ್ತಿದ್ದೆವು.. ಸ್ವಲ್ಪ ಹೊತ್ತು.. ಕೇಳಿದ ತಿಂಡಿ ಬಂತು.. ತಿನ್ನುತ್ತಿದ್ದೆವು.. ಒಬ್ಬ ಹಣ್ಣು ಹಣ್ಣು ಮುದುಕ.. ವಯಸ್ಸಾಗಿತ್ತು ಅನ್ನೋದು ಗೊತ್ತಾಗುತಿತ್ತು.. ಆದರೆ ಅದಕ್ಕಿಂತ ಆ ವಯೋವೃದ್ಧರಿಗೆ ನೆಡೆಯಲು ಕಷ್ಟವಾಗುತಿತ್ತು.. ಒಂದು ಕೋಲಿನ ಆಸರೆ ಇತ್ತು.. 

ಒಂದು ಕುರ್ಚಿಯಲ್ಲಿ ಸುಮ್ಮನೆ ಕೂತಿದ್ದರು.. ಅವರಿಗೆ ಇದು ಸ್ವಸಹಾಯ ಅಂತ ಗೊತ್ತಿರಲಿಲ್ಲ.. ಸುಮಾರು ಹೊತ್ತು ಕೂತೆ ಇದ್ದರು.. ಯಾರೋ ಒಬ್ಬರು ಅಲ್ಲಿ ಹೋಗಿ ಚೀಟಿ ಕೊಂಡು ಊಟ ಮಾಡಿ ಅಂತ ಹೇಳಿದರು.. ಆತ ಬಹಳ ಕಷ್ಟ ಪಟ್ಟು ನಿಧಾನಕ್ಕೆ ಹೋಗಿ ಚೀಟಿ ಪಡೆದರು.. ಮತ್ತೆ ಆ ಕಡೆ ಹೋಗಿ ತಿಂಡಿ ಕೊಡುವವನ ಹತ್ತಿರ ಆ ಚೀಟಿ ಕೊಟ್ಟರು.. 

ಆತ ಆ ಚೀಟಿಯನ್ನು ನೋಡಿ ಓಹ್ ನಾರ್ತ್ ಇಂಡಿಯನ್ ಊಟ ಅಂತ ಹುಬ್ಬು ಮೇಲೆತ್ತಿ "ತಾತಾ ನೀವು ಅಲ್ಲಿ ಕೂತುಕೊಳ್ಳಿ ನಾನೇ ತಂದು ಕೊಡುತ್ತೇನೆ ಅಂದರು.. ಆ ತಾತನಿಗೆ ಕೇಳಿಸಿತೋ ಅರ್ಥವಾಯಿತೋ ಗೊತ್ತಿಲ್ಲ.. ಅಲ್ಲೇ ನಿಂತಿದ್ದರು.. 

ಆತ ಮತ್ತೆ ಹೋಗಿ ತಾತಾ ಕುಳಿತುಕೊಳ್ಳಿ ತಂದು ಕೊಡುತ್ತೇನೆ ಅಂತ ತುಸು ಜೋರಾಗಿ ಹೇಳಿ ಕೈ ತೋರಿಸಿದಾಗ ತಾತನಿಗೆ ಗೊತ್ತಾಯಿತು ಅಂತ ಅನಿಸುತ್ತೆ.. ಒಂದು ಕುರ್ಚಿಯಲ್ಲಿ ತಮ್ಮ ಕೈ ಚೀಲವನ್ನು ಇಟ್ಟು ಇನ್ನೊಂದು ಕುರ್ಚಿಯಲ್ಲಿ ಕೂತರು.. ಆತ ನಾ ಕುಳಿತ ಟೇಬಲಿನ ಮುಂದೆ ಕೂತಿದ್ದರಿಂದ ನನಗೂ ಕುತೂಹಲವಿತ್ತು ಮುಂದೆ ಏನು ನೆಡೆಯುತ್ತೆ ಅಂತ.. 

ಅಷ್ಟರಲ್ಲಿ ತಾತನ ಊಟ ತಯಾರಾಗಿದೆ ಅಂತ ಆತ ಕೂಗಿದ.. ತಾತ ನಿಧಾನವಾಗಿ ಏಳೋಕೆ ನಿಲ್ಲುವ ಪ್ರಯತ್ನ ಮಾಡಿದರು.. ಹೋಟೆಲಿನವ ತಾತ ಇರಿ ನಾನು ತರುತ್ತೇನೆ ಎಂದರು.. ಆದರೆ ಆತ ಒಂದು ಸುತ್ತು ಬಳಸಿಬರಬೇಕಿತ್ತು.. 

ಏಕೋ ನನಗೆ ಏನೋ ಅನಿಸಿತು.. ತಿನ್ನುತ್ತಿದ್ದವ ನಾನು ಎದ್ದು ಹೋಗಿ ಆ ತಟ್ಟೆಯನ್ನು ತೆಗೆದುಕೊಂಡು ತಾತ ತೆಗೆದುಕೊಳ್ಳಿ ಆರಾಮಾಗಿ ಊಟ ಮಾಡಿ ಎಂದೇ.. 

ತಾತ ಕಣ್ಣಲ್ಲೇ ಕೃತಜ್ಞತೆ ಹೇಳುತ್ತಾ ಕೈಯಲ್ಲಿ ಕುಡಿಯಲು ನೀರು ಬೇಕು ಎಂದು ದಯನೀಯವಾದ ದೃಷ್ಟಿ ಬೀರಿದರು.. ನನ್ನ ಹೊಟ್ಟೆ ಚುರುಕ್ ಎಂದಿತು.. ನೀರು ತರಲು ಹೋದೆ.. ಹೋಟೆಲಿನವ ಸರ್ ನೀವು ಊಟ ಮಾಡಿ ನಾ ನೀರು ಕೊಡುತ್ತೇನೆ.. ಧನ್ಯವಾದಗಳು ಅಂತ ಹೇಳಿ.. ನೀರು ಕೊಡಲು ಅಲ್ಲೇ ಇದ್ದ ಹುಡುಗನಿಗೆ ಹೇಳಿದ.. ನೀರು ಬಂತು.. ತಾತ ನೀರು ಕುಡಿದು ನಿಧಾನವಾಗಿ ನಾರ್ತ್ ಇಂಡಿಯನ್ ಊಟ ಸವಿಯಲು ಶುರು ಮಾಡಿದರು.. 

ಇಲ್ಲಿ ನನಗೆ ಅನಿಸಿದ್ದು.. ತಾತನಿಗೆ ನಾರ್ತ್ ಇಂಡಿಯನ್ ಸೌತ್ ಇಂಡಿಯನ್ ಊಟದ ವ್ಯತ್ಯಾಸ ಗೊತ್ತಾಯಿತೋ.. ಅಥವ ಊಟ ಎಂದಾಗ ಸಾಮಾನ್ಯ ಬೆಂಗಳೂರಿನಲ್ಲಿ ಸಂಜೆ ಹೊತ್ತು ಅನ್ನ ಸಾರಿನ ಊಟ ಸಿಗೋಲ್ಲ.. ಊಟ ಬೇಕು ಅಂತ ತಾತ ಹೇಳಿದಾಗ.. ಹೋಟೆಲಿನವರು ಸುಮ್ಮನೆ ಒಂದು ಚೀಟಿ ಹರಿದುಕೊಟ್ಟರೋ ಏನೋ ಅಂತ.. 

ಒಟ್ಟಿನಲ್ಲಿತಾತ ಏನೂ ಕಿರಿ ಕಿರಿ ಮಾಡಿಕೊಳ್ಳದೆ ತಣ್ಣನೆ ಊಟ ಮಾಡುತ್ತಿರುವ ದೃಶ್ಯ ನೋಡಿ ನನಗೆ ಕರುಳು ಚುರುಕ್ ಎಂದಿತು.. ತಮ್ಮ ಭವ್ಯವಾದ ಹಿಂದಿನ ತಾರುಣ್ಯದಲ್ಲಿ ಎಷ್ಟು ಭರ್ಜರಿ ಜೀವನ ಮಾಡಿರಬಹುದು.. ಅಥವ ಹೊಡೆದಾಟದಲ್ಲಿಯೇ ಜೀವನದ ಅಂಚಿಗೆ ಬಂದು ನಿಂತಿದ್ದರೋ ಅರಿಯದು.. ಆದರೆ ತಾತ ನೀರು ಬೇಕು ಅಂತ ಕೇಳಿದ ದೃಶ್ಯ ಮನದಲ್ಲಿ ಅಚ್ಚಳಿಯದೆ ನಿಂತು ಬಿಟ್ಟಿದೆ.. 

ಹೋಟೆಲಿನಿಂದ ಹೊರಗೆ ಬರುವಾಗ ಗಲ್ಲಾಪೆಟ್ಟಿಗೆಯ ಮೇಲೆ ಸ್ಥಿತಪ್ರಜ್ಞನಾಗಿದ್ದ ಗಣಪತಿ ಗುಡ್ ಜಾಬ್ ಶ್ರೀ ಅಂತ ಹೇಳಿ ನಕ್ಕಿದ್ದು ಕೇಳಿಸಿತು.. !