Thursday, October 24, 2024

madness in random...!

ಸಿಬಿ : ಹಾಯ್ ಅರ್ಪಿತಾ

ಅರ್ಪಿತಾ : ಹಾಯ್ ಸಿಬಿ 

ಸಿಬಿ : ಏನಿದು New journey?

ಅರ್ಪಿತಾ : ನಥಿಂಗ್ Dog eat Dog world ಅನ್ನುವ ಪುಸ್ತಕ ಓದುತ್ತಿದ್ದೆ.. ಅದರಲ್ಲಿನ Small details ಬಹಳ ಇಷ್ಟವಾಯಿತು.. ಆದರೆ ಅಷ್ಟರಲ್ಲಿ Thu ut ke gayi ........ ನಿಮಗಾಗಿ Intezaar ಮಾಡಿದೆ.. ಆದರೆ The perfect day ಬರಲು ತುಂಬಾ ದಿನಗಳಾಯ್ತು.. ನನಗೂ ಒಂದು ರೀತಿಯ ಪ್ರಶ್ನೆ Nostalgic.. am I ???? ಅಂತ ಅನಿಸಿತು.. ಸರಿ What happened now  ಅಂತ ಪ್ರಶ್ನೆ.. ಮನದಲ್ಲಿ ಒಂದು ರೀತಿಯ Grief .. ಆದರೂ ಮೊಗದಲ್ಲಿ Smile ... ಮನಸ್ಸಿನಲ್ಲಿ ಅನಿಸಿತ್ತು Happiness is waiting, Soak no more ಅಂತ.. ಖಂಡಿತ Battery recharged ಆಗುತ್ತೆ ಕಾಯೋಣ ಅನಿಸಿತು.. ಅದೇ ಯೋಚನೆಯಲ್ಲಿದ್ದಾಗ ಬಸ್ ನಿಲ್ದಾಣದಲ್ಲಿ The woman with red toe nails ಪುಸ್ತಕ ಓದುತ್ತಿದ್ದೆ ಕಣೆ ಸಿಬಿ.. ಯಾಕೋ ಈ ಕಥೆಯಲ್ಲಿ Untold ಘಟನೆಗಳಿದ್ದಾವೆ ಅನಿಸಿತು.. ಇದಕ್ಕೆ ಒಂದಷ್ಟು ಹಾಡನ್ನು ಗುನುಗುಣಿಸೋಣ ಅಂತ ಮೊಬೈಲಿನಲ್ಲಿ My 10 most favourite songs ಹಾಕಿಕೊಂಡು ಕೂತೆ ... ಹಾಡುಗಳು ಮಧುರವಾಗಿದ್ದವು.. ಜೊತೆಗೆ Second Chance ಕೊಡೋಣ.. ಕಾಯೋಣ ಅನಿಸಿತು.. 

ಇವರಿಬ್ಬರ ಮಾತುಕತೆ ಮುಂದುವರೆಯುತ್ತಿತ್ತು .. 

ಆ ಕಡೆಯಿಂದ ಇವರಿಬ್ಬರ ನೆಚ್ಚಿನ ರೋಹಿಣಿ ನೆಡೆದು ಬರುತ್ತಿದ್ದಳು ಬಂದವಳೇ 

ರೋಹಿಣಿ : "Did I ever tell you????? ಅರ್ಪಿತ"  ಅಂದಳು.. 

ಅರ್ಪಿತಾ : ಇಲ್ಲ ರೋಹಿಣಿ ಅಂದೇ.. 

ಅವಳು ತನ್ನ ಬ್ಯಾಗಿಂದ ಮೈಸೂರು ಪಾಕು Pieces ಕೊಟ್ಟಳು.. 

ಸಿಬಿ :  If Only............ ಬಾಕ್ಸ್ ಫುಲ್ ಇದ್ದರೆ ಚೆನ್ನಾಗಿತ್ತು ರೋಹಿಣಿ 

ರೋಹಿಣಿ :   ಹೌದು ಕಣೆ .. .. ಇರಲಿ ಇರಲಿ Housewife wala life ಹಾಗಾಗಿ ಮನೆಯಲ್ಲಿ ಕೆಲಸ ಮಾಡುತ್ತಾ ಹಾಗೆ ತಿಂದು ಹಾಕಿದೆ.. ಉಳಿದದ್ದು ನಿನಗೆ ತಂದೆ ... 

ಅರ್ಪಿತಾ : ಅದು ಹೋಗಲಿ ಬಿಡು ಮೈಸೂರು ಪಾಕು ಚೆನ್ನಾಗಿದೆ.. 

ರೋಹಿಣಿ:  ಅದಿರಲಿ ನಿನ್ನ ಡ್ರೆಸ್ ಯಾಕೆ So Ordinary .... ಎನಿಥಿಂಗ್ ಆಯ್ತಾ ... 

ಅರ್ಪಿತಾ :  Doomsday ಕಣೆ 

ಸಿಬಿ: .. Give me one reason...ಯಾಕೆ ಅಂತ .. 

ಅರ್ಪಿತಾ : ಇಲ್ಲ ಕಣೆ ಇದು Last chance ಆಮೇಲೆ ನೋಡೋಣ.. ಇಲ್ಲವೇ ಪೂರ್ತಿ Silence ಅಷ್ಟೇ 

ಸಿಬಿ : ಏನಾಯಿತು 

ಅರ್ಪಿತಾ : ಇದು ಎರಡು ಭಾಗದಲ್ಲಿ ಬರುವ ಕಥೆ ಕಣೆ  Over a cup of tea...... (Part 1) (Part 2) ..

ಸಿಬಿ : ಅದು ಸರಿ ಅರ್ಪಿತಾ Do you think they know???.... ........ Nah..

ಅರ್ಪಿತಾ : ಹೌದು ಕಣೆ ಸಿಬಿ At that moment... Am fine ಅನಿಸಿತು ಯಾರಿಗೆ ಹೇಳೋದು Friends ??  Forever :) ಅಂತ ಅನಿಸಿಕೊಂಡ ಕೆಲವರ ಹತ್ತಿರ ಹೇಳೋಣ ಅಂದುಕೊಂಡೆ ajeeb dastan he ye..... ಅಂತ ರೇಗಿಸ್ತಾರೆ.. ಅದಕ್ಕೆ ನಿಮ್ಮಿಬ್ಬರ ಹತ್ತಿರ ಹೇಳೋಣ ಅಂತ ಬಂದೆ  ಜೀವನದಲ್ಲಿ Twice in a lifetime (Part I) (Part II) ಆಯಿತು..  Good bye ಹೇಳೋಣ ಅನಿಸಿತು.. ಆದರೆ ಅವನು ಹೇಳ್ತಾನೆ My brother ..ಗೆ ಹೇಳಿದೆ  After this day............. Almost..... in love ... ಇದು Journey of Mr.X, Lucky Charms ಅದು ಇದು ಅಂತ ನೂರೆಂಟು ಹೇಳಿದಾಗ The world as I understood.....ಅಂತ ಅರ್ಥ ಆಯಿತು.. ಸರಿಯೋ ತಪ್ಪೋ ಗೊತ್ತಿಲ್ಲ ಆದ್ರೆ What defines you??... ಅಂತ ಯೋಚನೆ ಮಾಡುತ್ತಲೇ Valentine's day ಬಂದೆ ಬಿಡ್ತು New beginning ಅಂತ ಅನಿಸಿತು.. ಕಾಲವೂ ಬದಲಾಗಬೇಕಲ್ಲವೇ Spring ಕೂಡ ಬಂದೆ ಬಿಡ್ತು.. ಸರಿ ಧೈರ್ಯ ಮಾಡಿ ಮಾತಾಡೋಣ ಅನಿಸಿತು Coffeeಗೆ ಕರೆದು confusion ಆಗಿರೋದನ್ನು ಸರಿ ಮಾಡಿಕೊಳ್ಳೋಣ ಅನಿಸಿ .. ತನ್ನ ಮನದಲ್ಲಿದ್ದನ್ನು ಬೊಗಸೆ ತುಂಬಾ ಹೇಳಲು ಶುರು ಮಾಡಿದಾಗ ಆ ಮಾತುಗಳು  confessions of a confused soul – 1, 2,3,4,5,6,7,,8,9,10,11,12,13, ಅಂತ ವೆಬ್ ಸೀರೀಸ್ ಬಂದ ಹಾಗೆ ಬಂದಿತು ಸಿಬಿ  ... ಏನು ಮಾಡಲಿ ಕಡೆಗೆ ಇದೆಲ್ಲಾ ಅರ್ಥವಾಗಿ.. ಸ್ವಲ್ಪ ಮಟ್ಟಿಗೆ ತಿಳಿಯಾಗಿ One summer afternoon... ಮೊಬೈಲಿನಲ್ಲಿ Hold my hand ಅಂತ ಮೆಸೇಜ್ ಬಂತು... Conscience calls ಪ್ರಕಾರ "Best Friend" ಅನ್ನಿಸ್ತು ಒಪ್ಪಿಕೊಂಡೆ.. ಈ ಕುಶಿಗೆ ಏನಾದರೂ ಕೊಡೋಣ ಅನಿಸಿತು..  ಅವನು ಬುಲೇಟ್ ಬೈಕ್ ನನಗೆ ಬಲು ಇಷ್ಟ.. ಒಂದು ರೀತಿಯಲ್ಲಿ ನಾನೇ ಅವನಿಗೆ ಬಲವಂತ ಮಾಡಿ ಕೊಡಿಸಿದ್ದೆ.. ಶೋ ರೂಮಿನ ಹತ್ತಿರ A humble plea to bullet riders - From a drooling onlooker ಅಂತ ಒಂದು ಪುಸ್ತಕ ಕೊಟ್ಟು.. ದಯಮಾಡಿ ಇದನ್ನು ಅನುಸರಿಸಿ ಅಂತ ಹೇಳಿದ್ದಷ್ಟೇ ಅಲ್ಲದೆ IMHO - Blue mug epiphany ಅನ್ನುವ ಒಂದು ಪುಸ್ತಕ ಕೊತ್ತಿದ್ದರು .ಅದು ನನ್ನ ಬಳಿಯೇ ಇತ್ತು . Crossroads ನಲ್ಲಿದ್ದ ಬದುಕು ಮತ್ತೆ ಹಾದಿಗೆ ಬಂತು ಕಣೆ .. ಅವನಿಗೆ ಈ ಪುಸ್ತಕಗಳನ್ನು ಕೊಟ್ಟಾಗ ನನ್ನ Butterfly girl ಅಂತ ಹೇಳಿ...  ಬಾಕಿ ಪ್ರೇಮಿಗಳು ಕೂಡ ಹೊಟ್ಟೆ ಕಿಚ್ಚು ಪಡುವಷ್ಟು Confessions- jealousy ಆಯಿತು ಕಣೆ ಎಂದು ಹೇಳಿದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ.. . ಈಗ ನಾವಿಬ್ಬರು Walking Partners ಮತ್ತೆ ಮೆಲ್ಲನೆ Walking Partners & Couples.ಆದೆವು .. ಒಂದು ವರ್ಷ ನಮ್ಮ ಜೊತೆ Walking Partners - Ramesh Uncle ಅಂದರೆ ನನ್ನ ಮಾವ ಕೂಡ ಸೇರಿಕೊಂಡರು .. ನಮ್ಮ ಬದುಕು Random madness ಇಂದ madness in random ಆಗಿದೆ.. ಬದುಕು ಸುಂದರ ಅನಿಸಿದೆ ಸಿಬಿ.. 

ಸಿಬಿ : ವಾಹ್ ವಾಹ್ ಸುಂದರ ಬದುಕು ಕಣೆ ಅರ್ಪಿತಾ ನಿಂದು.. ಒಂದು ಹಗ್ ನಿನಗೆ 

ರೋಹಿಣಿ : ಓಯೆ ನಾನೂ ಇಲ್ಲಿದ್ದೀನಿ.. ಮೈಸೂರು ಪಾಕು ಗುಳುಂ ಮಾಡಿದಂಗೆ ಅಲ್ಲ.. ನಾನೂ ಇಲ್ಲಿದ್ದೀನಿ.. ನನಗೂ ಒಂದು ಕೊಡ್ರೋ.. 

ಅರ್ಪಿತಾ : ರೋಹಿಣಿ ನೀ ಇದ್ದಾರೆ ಸಾಕು ಕಣೆ.. ಸಿಬಿ ಜಗತ್ತನ್ನೇ ಗೆಲ್ಲುತ್ತಾಳೆ.. 

ಸಿಬಿ : ಹ ಹ .. you know what am a gigling ,mug!!!

ಅದ್ಭುತ ಗೆಳೆತನ ಎಂದರೆ ಇದೆ ಅಲ್ಲವೇ.. ಲೇಖನದಲ್ಲಿ ಮೂಡಿ ಬಂದ ಒಂದು ಪಾತ್ರ.. ಸಿಬಿ  ಅವರನ್ನು ಇಷ್ಟೊಂದು ಹಚ್ಚಿಕೊಂಡಿದ್ದು.. ಸಿಬಿ  ಕೂಡ ಆ ಪಾತ್ರವನ್ನು ಬಲು ಮುತುವರ್ಜಿಯಿಂದ ಸಿದ್ಧಪಡಿಸಿದ್ದು ...ಅದ್ಭುತ.. ಜೊತೆಗೆ ಗೆಳೆತನಕ್ಕೆ ಕಲಶ ಪ್ರಾಯದಂತೆ ರೋಹಿಣಿಯ ಹಾಜರಿ.. ಎಲ್ಲವೂ ಸಸತ್ಯಂ ಶಿವಂ ಸುಂದರಂ.. !

************************

ಗೆಳೆತನ ಅನ್ನೋದು ಎಲ್ಲರಿಗೂ ಸುಲಭವಾಗಿ ಸಿಗುವ ವಸ್ತುವಲ್ಲ ಗೆಳೆಯರಾಗಿರಬಹುದು.. ಆದರೆ ಪ್ರತಿಯೊಂದು ಕ್ಷಣದಲ್ಲೂ ನಿಲ್ಲುವ ಗೆಳೆಯರು ನಿಜವಾಗಿಯೂ ಈ ಆಧುನಿಕ ತಂತ್ರಜ್ಞಾನ ಕೂಡಿರುವ ಜಗತ್ತೇ ಒಂದು ಹಳ್ಳಿಯಾಗಿರುವ ಈ ಕಾಲದಲ್ಲಿ ತಾನುಂಟು ಮೂರು ಲೋಕವುಂಟು ಎನ್ನುವ ಗೆಳೆತನವೆ ಹೆಚ್ಚು.. ಅಂಥದ್ದರಲ್ಲಿ ಅಚಾನಕ್ ಒಂದು ಬ್ಲಾಗ್ ಓದಿ ಪ್ರತಿಕ್ರಿಯೆ ಕೊಟ್ಟ ಕ್ಷಣ ಸಿಕ್ಕಿದು ದೇವರು ಕೊಟ್ಟ ಗೆಳತನ ಅದೇ ನಿವೇದಿತಾ ಚಿರಂತನ್.. ಅಕ್ಷರಗಳ ಮಧ್ಯೆ ಇರುವ ಖಾಲಿ ಜಾಗದಲ್ಲಿ ಭಾವನೆಗಳನ್ನು ಕಂಡು ಹಿಡಿಯುವಷ್ಟು ಚಾಣಾಕ್ಷೆ ಇವರು.. ೨೦೧೨ ರಲ್ಲಿ ಶುರುವಾದ ಗೆಳೆತನಕ್ಕೆ ಭರ್ತಿ ೧೨ ವರ್ಷಗಳು.. ಜನುಮದಿನಕ್ಕೆ ಮರೆಯದೆ ಶುಭಾಶಯಗಳನ್ನು ತಲುಪಿಸುವ ನನಗೆ.. ಒಂದು ವರ್ಷ ಯಾವುದೋ ಕಾರಣಕ್ಕೆ ಹೇಳಲಾಗಲಿಲ್ಲ.. ಆದರೆ ಸಂದರ್ಭಗಳನ್ನು ಹೇಳಿ.. ಒಪ್ಪಿಸಿದ ಮೇಲೆ ಆ ಮುಗುಳ್ನಗೆ ತುಂಬಿದ ಗೆಳೆತನಕ್ಕೆ ಮತ್ತೆ ಹಸಿರಾಯಿತು.. 

ಹನ್ನೆರಡು ವರ್ಷಗಳ ಗೆಳೆತನಕ್ಕೆ ಏನು ಉಡುಗೊರೆ ಕೊಡೋದು.. ಅಕ್ಕ ಅಲ್ಲ ತಂಗಿ ಅಲ್ಲ ಗೆಳತೀ ಅಲ್ಲ ಬಂಧುವಲ್ಲ.. 

ಆದರೆ ಮಾರ್ಗದರ್ಶಿ, ಗುರು ಈ ಪದಗಳು ಒಪ್ಪುವಂತಹ ಗೆಳತೀ ಇವರು... ಒಂದು ಸಮಸ್ಯೆಯನ್ನು ಇವರ ಮುಂದಿಟ್ಟರೆ ಸಾಕು.. ಅದನ್ನು ಒಪ್ಪವಾಗಿ ಬಿಡಿಸಿ ಹೀಗಲ್ಲ ಶ್ರೀ ಹೀಗೆ ಎಂದು ಹೇಳಿ ತಿಳಿ ಹೇಳುವ ಅದ್ಭುತ ಇವರು.. ಹೀಗೆ ಮಾತಾಡುತ್ತಿದ್ದಾಗ ನೀವು ಏನು ಓದಿರುವುದು ಅಂದಾಗ ಪುಸ್ತಕ ಅಂದರು.. ನಾ ನಕ್ಕು ಅದು ಸರಿ ಆ ಪುಸ್ತಕದ ಮೇಲೆ ಕರ್ನಾಟಕ ಸರ್ಕಾರ ಅದು ಇದು ಅಂತ ಬರೆದಿರುತ್ತಲ್ಲ ಅದರ ಕೆಳಗೆ ಆ ಪುಸ್ತಕದ ವಿಷಯ ಅಂತ ಪ್ರಿಂಟ್ ಮಾಡಿರುತ್ತೆ..ಅದು ಏನು ಅಂದಾಗ .. ಕಾನೂನು ಅಂದರು.. ಅಬ್ಬಬ್ಬಾ ಆಗ ಗೊತ್ತಾಯಿತು.. ಈ ರೀತಿಯ ತರ್ಕಬದ್ಧ ಮಾತುಗಳು ಕಾನೂನು ಪದವೀಧರರರಿಗೆ ಬಿಟ್ಟು ಬೇರೆ ಎಲ್ಲಿ ಹೋಗಲು ಸಾಧ್ಯ ಅಂತ.. 

ಇಂತಹ ಅದ್ಭುತ ಗೆಳೆತನಕ್ಕೆ ಒಂದು ಶುಭಾಶಯ ಹೇಳೋಣ ಅಂತ ಅಂದುಕೊಂಡಾಗ ಮೂಡಿ ಬಂದದ್ದು ಈ ಬರಹ.. 

Saturday, September 7, 2024

ನಿರ್ದೇಶಕರು ಕಟ್ ಕಟ್..

ಮಹೇಂದ್ರಾ.. 

ಮಹೇಂದ್ರ ಬರುತ್ತಾನೆ.. ನಿನ್ನ ವಜ್ರಾಯುಧದಿಂದ ಒಮ್ಮೆ ಅಪ್ಪಳಿಸಿಬಿಡು.

ಆಗದು ಹಿರಣ್ಯ.. 

ಅಗ್ನಿ .. 

ಅಗ್ನಿ ಒಮ್ಮೆ ಈ ಬಾಲಕನನ್ನು ಅಪ್ಪಿಕೊಂಡು ಬಿಡು.. 

ಅಪ್ಪಿಕೊಂಡರೂ ಬಾಲಕನನ್ನು ಸುಡಲಿಲ್ಲ 

ಆನೆಯಿಂದ ತುಳಿಸಿದರು 

ಹಾವು ಬಿಟ್ಟರು 

ಪ್ರಪಾತಕ್ಕೆ ತಳ್ಳಿದರು 

ಊಹೂಂ 

ಏನೂ ಬದಲಾಗಲಿಲ್ಲ.. 

ಕಡೆಗೆ ಸ್ವಗತ "ನಾನಾರು.. ಕಶ್ಯಪಬ್ರಹ್ಮನ ಮಗ.. ದಿತಿ ಗರ್ಭ ಸಂಜಾತ..... "

ಮುಂದಿನ ದೃಶ್ಯ.. 

ಕಯಾದು ನನ್ನ ಮೇಲೆ ಅತಿಶಯ ಪ್ರೀತಿಯಿದೆ ಅಲ್ಲವೇ 

ಹೌದು ಸ್ವಾಮಿ 

ಹಾಗಾದರೆ ತಗೋ.. ವಿಷ 

ನಾ ಕುಡಿಯಲೇ 

ಇಲ್ಲ ನೀನೆ ನಿನ್ನ ಕೈಯಾರೆ ಪ್ರಹ್ಲಾದಕುಮಾರನಿಗೆ ವಿಷ ಪ್ರಾಶನ ಮಾಡಿಸಬೇಕು.. 

ಒಂದಷ್ಟು ಸಂಭಾಷಣೆ.. ಕಡೆಗೆ ಪ್ರಹ್ಲಾದ ವಿಷವನ್ನು ಗಟಗಟ ಕುಡಿದುಬಿಡುತ್ತಾನೆ.. 

ಸ್ವಲ್ಪ ಕ್ಷಣ ಮತ್ತೆ ಮರಳಿ ಅಮ್ಮ ಎಂದು ಕರೆಯುತ್ತಾನೆ.. 

ತಾಯಿ ಕಯಾದುಗೆ ಅಚ್ಚರಿ,ಸ್ ಸಂತಸ ಎಲ್ಲವೂ ಒಮ್ಮೆಲೇ.. 

ವಿಷ ನಿನಗೆ ಏನೂ ಮಾಡಲಿಲ್ಲವೇ ಕಂದ.. 

ಏನೂ ಮಾಡಲಿಲ್ಲ..  ಹತ್ತಾರು ಶುಭಾಶಯ ಪತ್ರಗಳನ್ನು ಬಿಡುವಿಲ್ಲದಿದ್ದರೂ ಬಿಡದೆ ಬರೆದು ಕಳಿಸಿದೆ 

ಲ್ಯಾಮಿನೇಟ್ ಮಾಡಿಸಿದೆ.. ಫ್ರೇಮ್ ಮಾಡಿಸಿದೆ 

ನಾಚಿಕೆಯಿಂದ ಅದನ್ನು ಕಬೋರ್ಡ್ ನಲ್ಲಿ ಬಚ್ಚಿಟ್ಟರು.. 

ಗೃಹಪ್ರವೇಶಕ್ಕೆ ಲ್ಯಾಮಿನೇಟ್ ಮಾಡಿದ ಪ್ರತಿ ಕೊಟ್ಟೆ.. ಊಹೂಂ ಉಪಯೋಗವಾಗಲಿಲ್ಲ 

ಒಮ್ಮೆ ಅವರ ಮನೆಗೆ ಹೋದರು.. ಗೋಡೆ ಗೋಡೆ ಹುಡುಕಿದರೂ ಕಾಣಲಿಲ್ಲ 

ಕಡೆ ಪಕ್ಷ ಮಂದಿಗಳ ಸಹಮತಕ್ಕಾದರೂ, ಆ ಪ್ರೀತಿಗಾದರೂ ಒಪ್ಪುತ್ತಾರೆ ಅಂದುಕೊಂಡೆ.. ಊಹೂಂ ಅವರು ಒಪ್ಪುತ್ತಾರೆ ಅಂತ ನಾ ಅಂದುಕೊಂಡೆ.. ಆದರೆ ನನಗಿಂತ ತಿಳಿಗೇಡಿ ಇನ್ನೊಬ್ಬರಿಲ್ಲ.. 

ಕಯಾದು ಸ್ವಾಮೀ ಏನು ಮಾಡುತ್ತಿದ್ದೀರಾ.. ಚಿ ಉದಯಶಂಕರ್ ಬರೆದ ಸಂಭಾಷಣೆ ಇದಲ್ಲ.. ಏನಾಯಿತು.. ಯಾವುದೋ ಬೇರೆ ಮಾತಾಡುತ್ತಿದ್ದೀರಲ್ಲ.. ಏನೂ ಸಮಾಚಾರ.. ಏನಾಯಿತು.. 

ಹಿರಣ್ಯಕಶಿಪು ಒಮ್ಮೆಲೇ ಗಾಬರಿಯಾಗಿ.. ಅಯ್ಯೋ ತಪ್ಪಾಯಿತಲ್ಲ.. ನನ್ನ ಮೆಚ್ಚಿನ ಅಭಿಮಾನಿ ಶ್ರೀಯ ಅನುಭವ ನನ್ನ ತಲೆಯೊಳಗೆ ಓಡುತ್ತಿತ್ತು.. ಅದೇ ಸಂಭಾಷಣೆ ಹಾಗೆ ಬಾಯಿಗೆ ಬಂತು.. 

ನಿರ್ದೇಶಕರೇ ಕಟ್ ಮಾಡಿ.. ಮತ್ತೊಮ್ಮೆ ಟೇಕ್ ಮಾಡುತ್ತೀನಿ.. 

ಮುಂದಿನ ದೃಶ್ಯ .. ಅಗ್ನಿ ಸುಡದವನನ್ನು, ಸರ್ಪ ಕಚ್ಚದವನನ್ನು, ಆನೆ ತುಳಿದಯವನನ್ನು.. ಕಯಾದು ಕಡೇಪಕ್ಷ ಜನದಣಿಯ ಪೀತಿಗಾಗಿಯಾದರೂ ತಲೆಬಾಗುತ್ತಾರೆ ಅಂದು ಕೊಂಡಿದ್ದೆ.. 

ನಿರ್ದೇಶಕರು ಕಟ್ ಕಟ್.. 

ಅಣ್ಣಾವ್ರೇ ಯಾಕೋ ನಿಮ್ಮ ಗಮನ ಈ ಕಡೆ ಇಲ್ಲ..  ಕೆಲವೊಂದು ವಿಷಯಗಳು ಎಷ್ಟು ಪ್ರಯತ್ನ ಪಟ್ಟರೂ ಆಗೋಲ್ಲ.. ಆ ಪ್ರೀತಿ ವಿಶ್ವಾಸ ಸದಾ ಇರುತ್ತದೆ.. ಆದರೆ ಮುಜುಗರ ಪಟ್ಟುಕೊಂಡು ಸ್ವೀಕರಿಸುವ ಪ್ರಶಸ್ತಿ ಹಿಂಸೆ ಮಾಡುತ್ತೆ.. ಆಗಲಿ ಬಿಡಿ.. ಇವತ್ತು ವಿಶ್ರಾಂತಿ ಮಾಡಿ ನಾಳೆ ಈ ದೃಶ್ಯ ಚಿತ್ರೀಕರಿಸೋಣ.. 

ಆಗಲಿ ನಿರ್ದೇಶಕರೇ.. ಸಾರಿ ಸಾರಿ .. ಮತ್ತೊಮ್ಮೆ ಹೀಗಾಗೋದಿಲ.. ಕ್ಷಮಿಸಿ ಬಿಡಿ. 

ಅಯ್ಯೋ ಅಣ್ಣಾವ್ರೇ ಈ ರೀತಿಯ ಅನೇಕಾನೇಕ ಪಾತ್ರಗಳನ್ನು ಲೀಲಾಜಾಲವಾಗಿ ಮಾಡಿರುವ ನಿಮ್ಮ ಮನಸ್ಥಿತಿ ನನಗೆ ಅರ್ಥವಾಗುತ್ತೆ.. ತೊಂದರೆ ಇಲ್ಲ.. ನಾಳೆ ಮಾಡೋಣ.. 

ಇಂದು ಗಣೇಶನ ಹಬ್ಬ.. ಆ ವಿಘ್ನವಿನಾಶಕ ಸಕಲ ಸಮೃದ್ಧಿಯನ್ನು ನೀಡಲಿ DFR!.... ಶುಭವಾಗಲಿ.. ಜೀವನ್ಮುಖಿಯಾಗಿರುವ ನಿಮಗೆ ಸದಾ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುವ ನಿಮಗೆ ಶುಭವಾಗಲಿ ಎಂದಷ್ಟೇ ನಾನು ಹಾರೈಸುವುದು DFR.. ಒಳ್ಳೆಯದಾಗಲಿ.. ನಿಮ್ಮ ಪ್ರಯತ್ನಗಳಿಗೆ, ನಿಮ್ಮ ಪರಿಶ್ರಮಗಳಿಗೆ.. ನಿಮ್ಮ ಸಮಾಜಮುಖಿ ಮನಸ್ಸಿಗೆ, ನಿಮ್ಮ ದಣಿವರಿಯದ ಶಕ್ತಿಗೆ ಈ ರಾಜಕುಮಾರ .. ಈ ನಿಮ್ಮ ನೆಚ್ಚಿನ ಅಣ್ಣಾವ್ರು.. ನನ್ನೆಲ್ಲ ಅಭಿಮಾನಿ ದೇವರುಗಳ ಪರವಾಗಿ ನಿಮಗೆ ಸದಾ ಶುಭ ಹಾರೈಸುತ್ತೇನೆ.. ಇದು ಶುಭಾಶೀರ್ವಾದಗಳು DFR!

DFR ಒಮ್ಮೆಲೇ ಗಾಬರಿ ಬಿದ್ದು ಬೆಳಿಗ್ಗೆ ಎದ್ದರು.. ನೋಡಿದರೆ.. ಶ್ರೀ ಮೆಸೇಜ್ ಮೊಬೈಲಿನಲ್ಲಿ ನಗುತಿತ್ತು.. !

Tuesday, May 7, 2024

ಜನುಮದಿನದ ಶುಭಾಶಯಗಳು DFR DFR!

 ​ಹಿರಣ್ಯಕಶಿಪು ಘನಘೋರ ತಪಸ್ಸು ಮಾಡುತ್ತಿದ್ದ.. ಇಡೀ ಭೂಮಂಡಲ, ಉಳಿದ ಲೋಕಗಳು ಆ ತಪದ ತಾಪ ತಡೆಯಲಾಗದೆ ಕಂಪಿಸುತ್ತಿತ್ತು.. ಆ ಕಾವು ಎಲ್ಲರನ್ನೂ ಸುಡುತಿತ್ತು.. ಈ ವರ್ಷದ ಬೆಂಗಳೂರಿನ ಹಾಗೂ ಭಾರತದ ಉಳಿದ ಕಡೆಯಂತೆ ಬಿಸಿಲಿನ ಝಳದಂತೆ ಸುಡುತಿತ್ತು.. 

ಬ್ರಹ್ಮನಿಗೆ ಬೇರೆ ದಾರಿ ಕಾಣಲಿಲ್ಲ.. ಲೋಕಗಳನ್ನು ಈ ಬಾಧೆಯಿಂದ ರಕ್ಷಿಸಲು ಸಂಕಲ್ಪ ಮಾಡಿದ.. ಜೊತೆಗೆ ಸ್ವಲ್ಪ ಹೊತ್ತು ಧ್ಯಾನದಲ್ಲಿ ಕೂತು.. ಹಿರಣ್ಯಕಶಿಪು ಏನೇನು ವರಗಳನ್ನು ಬೇಡಬಹುದು .. ಜೊತೆಗೆ ಆ ವರಗಳು ಸಿಕ್ಕಮೇಲೆ ಹಿರಣ್ಯಕಶಿಪು ಎಲ್ಲಾ ಲೋಕಗಳನ್ನು ಗೋಳಾಡಿಸುವುದು ಮತ್ತು ದೇವತೆಗಳನ್ನು ಪೀಡಿಸುವುದು ಇದನ್ನು ರಕ್ಷಿಸುವುದರ ಬಗ್ಗೆ ಅದೇ ಹೇಳ್ತೀವಲ್ಲ ವೈರಸ್ ಮತ್ತೆ ಅದಕ್ಕೆ ಪ್ರತಿ Anti ವೈರಸ್ ತರಬೇಕಲ್ಲ ಅದಕ್ಕಾಗಿ ಮಹಾಮಹಿಮ ತನ್ನ ಪಿತ ವಿಷ್ಣುವಿನ ಹತ್ತಿರ ಅದಕ್ಕೆ ಉಪಾಯಗಳನ್ನು ತಿಳಿದು ಭೂಲೋಕದ ಕಡೆಗೆ ಹೊರಟಾಗ.. ಸರಸ್ವತಿ ಓಡೋಡಿ ಬಂದು.. ಇದೇನು ಮತ್ತೆ ಹೊರಟಿರಿ.. ಇರಿ ಅಂತ ಹೇಳಿ ಆಕೆ ಒಂದು ಚೀಟಿಯನ್ನು ಕೊಡುತ್ತಾಳೆ.. ಅದನ್ನು ಪಡೆದು ವಿಷಲ್ ಹೊಡೆಯುತ್ತಾ ಭುವಿಗೆ ಬರುವ ಬ್ರಹ್ಮ.. 

"ಮಗು ಹಿರಣ್ಯಕಶಿಪು.. ನಿನಗೇನು ವರ ಬೇಕು ಕೇಳಿಕೊ" ಎಂದಾಗ 

ಹೇ ಸರಸಿಜೋದ್ಭವ ಸರಸಿಜಾಸನ 
ಸರಸತಿಯ ಪ್ರಿಯಕರನೇ ಬ್ರಹ್ಮನೇ 
ಸ್ಮರಣೆ ಮಾತ್ರದಿ ಬಂದು 
ಸಲಹುವ ಹಂಸ ವಾಹನನೇ... 

ಪರಮ ಕರುಣಾಮೂರ್ತಿ 
ಪರಮ ಕರುಣಾಮೂರ್ತಿ 
ನಿನ್ನೀ ಚರಣಕಮಲದಿ ಶಿರವನಿಡುತಲಿ 
ನಿನ್ನೀ ಚರಣಕಮಲದಿ ಶಿರವನಿಡುತಲಿ 
ವರವನೊಂದನು ಬೇಡುವೆನು
ವರವನೊಂದನು ಬೇಡುವೆನು
ಕೃಪೆ ಮಾಡಿ ಹರಸೆನ್ನಾ 
ಕೃಪೆ ಮಾಡಿ ಹರಸೆನ್ನಾ 
ಓ... ಬ್ರಹ್ಮದೇವಾ.. ಓ... ಬ್ರಹ್ಮದೇವಾ.. 

(ಅಣ್ಣಾವ್ರ ಶೈಲಿಯಲ್ಲಿ ಹಾಡಿಕೊಳ್ಳಿ)


ಬ್ರಹ್ಮ ನಸುನಗುತ್ತಾ "ಮಗು ಹಿರಣ್ಯಕಶಿಪು ನಿನಗೇನು ವರಬೇಕು ಕೇಳಿಕೋ" ಅಂತ ಮತ್ತೊಮ್ಮೆ ಹೇಳುತ್ತಾನೆ

ಹಿರಣ್ಯಕಶಿಪು ಅಣ್ಣಾವ್ರ ಶೈಲಿಯಲ್ಲಿ "ಬ್ರಹ್ಮದೇವ ನನ್ನ ಕೋರಿಕೆ ಹಾ.. " ಅನ್ನುವಾಗ ಬ್ರಹ್ಮ ನಾಲ್ಕನೇ ಕೈಯಿಂದ ಸರಸ್ವತಿ ಕೊಟ್ಟ ಚೀಟಿಯನ್ನು ಬೀಳಿಸುತ್ತಾನೆ.. ಅದರಿಂದ ಬೆಳಕೊಂದು ಹೊರಗೆ ಬಂದು ಹಿರಣ್ಯನ ಕಣ್ಣನ್ನು ಕೋರೈಸುತ್ತದೆ.. ಆ ಬೆಳಕನ್ನೇ ನೋಡುತ್ತಾ .. ತಪಸ್ಸು ಮಾಡುವಾಗ ಅರಮನೆಯಿಂದ ತಂದಿದ್ದ ಟ್ರಾಲಿ ಬ್ಯಾಗ್ ನೋಡುತ್ತಾ 

"ಬ್ರಹ್ಮದೇವ.. 
ವಾರದ ಆರಂಭವೇ ಆಗಲಿ 
ವಾರದ ಅಂತ್ಯವೇ ಆಗಲಿ 
ವಾರದ ಮಧ್ಯವೇ ಆಗಲಿ 
ವಾರದ ಒಳಗೆ ಆಗಲಿ 
ನೀನು ಸೃಷ್ಟಿಸಿರುವ ಅಣು ರೇಣು ತೃಣಕಾಷ್ಠಗಳ ಜೊತೆಯಲ್ಲಿ 
ಕಾರಿನಲ್ಲಿನಾಗಲಿ, ಬೈಕಿನಲ್ಲಾಗಲಿ
ರೈಲಿನಲ್ಲಿಯಾಗಲಿ, ವಿಮಾನದಲ್ಲಿಯಾಗಲಿ 
ಕ್ಯಾಬಿನಲ್ಲಾಗಲಿ, ಸೈಕಲ್ಲಿನಾಗಲಿ 
ಅನವರತ ನನ್ನ ಟ್ರಾಲಿ ಬ್ಯಾಗ್ ಸದಾ ಸುತ್ತುತ್ತಿರುವಂತೆ 
ಅನುಗ್ರಹಿಸು ದೇವಾ"

ಈ ಮಾತುಗಳನ್ನು ಕೇಳಿ ಸರಸ್ವತಿ ಹೆಬ್ಬೆರಳು ಮೇಲೆತ್ತಿ ಬ್ರಹ್ಮನ ಮೊಗವನ್ನು ನೋಡಿದಳು.. 

ಹಿರಣ್ಯಕಶಿಪುವಿನ ಮುಖಕ್ಕೆ ವಿರುದ್ಧವಾಗಿದ್ದ ಬ್ರಹ್ಮನ ನಾಲ್ಕನೇ ಮುಖ ಸರಸತಿಯನ್ನು ಕಂಡು ನಕ್ಕಿತು"

ಇತ್ತ ಸ್ವರ್ಗ ಮತ್ತು ಉಳಿದ ಲೋಕಗಳಲ್ಲಿ ಇದ್ದ ದೇವಾನುದೇವತೆಗಳು ಸಂತಸದಿಂದ ಉಫ್ ಒಂದು ಗಂಡಾಂತರದಿಂದ ಪಾರಾದೆವು ಎಂದು ಖುಷಿಪಟ್ಟರು.. 

ಮೇಕ್ ಮೈ ಟ್ರಿಪ್, ಯುಲೂ, ಉಬರ್, ಓಲಾ, ಕೆ ಎಸ್ ಆರ್ ಟಿ ಸಿ, ಇಂಡಿಯನ್ ರೈಲ್ವೆ, ಜೆಟ್ ಏರ್ವೇಸ್, ಇಂಡಿಯನ್ ಏರ್ಲೈನ್, ಹೀಗೆ ಹತ್ತಾರು ವಿಮಾನಯಾನದ ಕಂಪನಿಗಳು ತನ್ನ ಸಿಬ್ಬಂಧಿಗಳಿಗೆ ಮೂರು ತಿಂಗಳ ಬೋನಸ್ ಘೋಷಿಸಿತು.. 

ಕಾರಣ ಟ್ರಾಲಿ ಬ್ಯಾಗನ್ನೇ ಅಸ್ತ್ರವಾಗಿಟ್ಟುಕೊಂಡಿರುವ DFR DFR ನಾರದರಂತೆ ಲೋಕವೆಲ್ಲಾ ಸಂಚಾರ ಮಾಡಲು ಸಿದ್ಧವಾಗಿದ್ದರು.. 

DFR DFR ಅದ್ಭುತ ಪಯಣಿಗರು ನೀವು.. 
ನಿಮ್ಮ ಜನುಮದಿನಕ್ಕೆ ಇದಕ್ಕಿಂತ ಇನ್ನೇನು ಬರೆಯಲಿ.. ಪದಗಳು ಸಿಗುತ್ತಿಲ್ಲ.. 
ಅಣ್ಣಾವ್ರ ಕೋರಿಕೆಯಂತೆ ಭೂಮಂಡಲವನ್ನೆಲ್ಲಾ ಸುತ್ತುತ್ತಾ ಆಗಲೇ ಎಲ್ಲರ ಮನಗೆದ್ದಿರುವ ನೀವು ಇನ್ನಷ್ಟು ಪ್ರಸಿದ್ಧಿಯಾಗಿ.. ! ಸದಾ ಯಶೋವಂತೆ, ಕೀರ್ತಿವಂತೆಯಾಗಿ!!!


ಜನುಮದಿನದ ಶುಭಾಶಯಗಳು DFR DFR!

Sunday, October 24, 2021

CBM....Nice story!!!

ಅಂಗಡಿಯವ ತಲೆ ಮೇಲೆ ಕೈ ಹೊತ್ತು ಕೂತಿದ್ದ.. ಯಾರಿಗೂ ಅಂಗಡಿಗೆ ಬಂದಿದ್ದವ ಕೇಳಿದ ಉಪಕರಣ ಸಿಗುತ್ತಿರಲಿಲ್ಲ.. ಇಡೀ ನಗರಕ್ಕೆ ಹೆಸರುವಾಸಿಯಾಗಿದ್ದ ಇಲೆಕ್ಟ್ರಾನಿಕ್ ಉಪಕರಣದ ಅಂಗಡಿಯದು.. ಅಂಗಡಿಯೆನ್ನೋದು ತುಂಬಾ ಚಿಕ್ಕ ಮಾತು.. ಸೂಪರ್ ಶಾಪ್ ಅನ್ನೋಣವೇ.. ಹೌದು ಇದು ಸರಿಯಾದ ಶಬ್ದ.. 

ಅಂಗಡಿಯಲ್ಲಿದ್ದ ಸಾರಿ ಸೂಪರ್ ಶಾಪಿನಲ್ಲಿದ್ದ ಉಪಕರಣಗಳನ್ನೆಲ್ಲ ಒಂದೊದಾಗಿ ತೋರಿಸಿದರೂ ಬಂದಿದ್ದ ವ್ಯಕ್ತಿ ತಲೆಯಾಡಿಸುತ್ತಲೇ ತನ್ನ ನಕಾರಾತ್ಮಕ ಉತ್ತರ  ಕೊಡುತ್ತಿದ್ದ.. 

ಸರ್ ನಿಮಗೆ ಯಾವ ಉಪಕರಣ ಬೇಕು ಅದರ ಚಿತ್ರ, ಮಾಹಿತಿ, ಇಲ್ಲವೇ ಗೂಗಲ್ ಕೊಂಡಿ ಇದ್ದರೇ ಕೊಡಿ ಸರ್.. ನಮ್ಮ ನೆಟ್ವರ್ಕ್ ದೊಡ್ಡದಿದೆ.. ನಮ್ಮ ಸಹೋದರ ಸಂಸ್ಥೆಯಲ್ಲಿಯೋ, ನಮ್ಮ ಗೆಳೆಯರ ಅಂಗಡಿಯಲ್ಲೋ.. ಹೇಗಾದರೂ ಕೊಡಿಸುತ್ತೇವೆ.. ಆದರೆ ಕೊಂಚ ಸಮಯಬೇಕು ಅಂದರೆ ಒಂದಷ್ಟು ದಿನ ಬೇಕು.. 

"ಸರ್ ನಾ ಕೇಳುತ್ತಿರುವ ಉಪಕರಣ ತುಂಬಾ ಉಪಯೋಗವಾದದ್ದು ಸರ್.. ಬಲು ಶಾರ್ಪ್ ಅದು.. ಖಂಡಿತ ಇದು ಎಲ್ಲೆಡೆ ಸಿಗುವುದಲ್ಲ.. ಆದರೆ.. ನಿಮ್ಮ ಶಾಪ್ ಈ ನಗರದಲ್ಲಿಯೇ ವರ್ಲ್ಡ್ ಫೇಮಸ್.. ಹಾಗಾಗಿ ನಿಮ್ಮ ಕಡೆ ಇರಲೇಬೇಕು.. "

"ನಿಮ್ಮ ಮಾತು ಖರೆ ಅದಾ ಸ್ವಾಮೀ.. ಆದರೆ ನಾವು ನೋಡಿಲ್ಲವಲ್ಲ.. ನನಗೆ ಬುದ್ದಿ ಬಂದಾಗಿನಿಂದ ಈ ದುಖಾನ್ ನೋಡ್ಕೋತ್ತಾ ಇದ್ದೀನಿ... ಈ ರೀತಿಯ ಉಪಕರಣ ಕೇಳಿಕೊಂಡು ಯಾರೂ ಬಂದಿಲ್ಲ.. ಹಾ ಒಂದು ನಿಮಿಷ ಇರಿ.. ನನ್ನ ಅಪ್ಪ ಮತ್ತು ನನ್ನ ತಾತನನ್ನು ಒಮ್ಮೆ ಕೇಳುತ್ತೇನೆ.. ನೀವು ನಮ್ಮ ಶಾಪಿಗೆ ಯಾವಾಗಲೂ ಬರುವವರು.. ನಿಮಗೆ ಇಲ್ಲ ಎನ್ನೊಕೆ ಮನಸಿಲ್ಲ.. ಖಂಡಿತ ಇರಿ.. ಏನಾದರೂ ಮಾಡೋಣ.. .. ಅರೆ ಚೋಟು ಸಾಹೇಬ್ರಿಗೆ ಒಂದು ಜ್ಯೂಸ್ ತಂದುಕೊಂಡು.. ಸರ್.. ನೀವು ಜ್ಯೂಸ್ ಕುಡಿದು.. ಸ್ವಲ್ಪ ವಿರಮಿಸಿಕೊಳ್ಳಿ.. ಒಂದು ಹದಿನೈದು ನಿಮಿಷ ಏನಾದರೂ ದಾರಿ ಹುಡುಕೋಣ.. "

ಬಿಸಿಲಲ್ಲಿ ಬಂದು ತಲೆ ನೋಯುತ್ತಿತ್ತು.. "ಸರ್ ಆಗಲಿ.. ಜ್ಯೂಸ್ ಬೇಡಾ ಒಂದು ಸ್ಟ್ರಾಂಗ್ ಕಾಫೀ ತರಿಸಿ.. ಈ ಕುರ್ಚಿಯಲ್ಲಿ ಹಾಗೆ ವಿಶ್ರಮಿಸಿಕೊಳ್ಳುತ್ತೇನೆ"

ಬಿಸಿ ಬಿಸಿ ಕಾಫೀ.. ತಲೆ ನೋವಿನಾ ಮಾತ್ರೆ.. ಹೊಟ್ಟೆಗೆ ಹೋದ ಮೇಲೆ ಸ್ವಲ್ಪ ಆರಾಮೆನಿಸಿತು.. ಮೇಲೆ ಮೆಲ್ಲಗೆ ತಿರುಗುತ್ತಿದ್ದ ಫ್ಯಾನ್.. ಮಲೆನಾಡಿನ ಕಡೆಯಾಗಿದ್ದರಿಂದ.. ಇವರ ಶಾಪಿನ ಸುತ್ತಾ ಹಸಿರು ಸಿರಿ ಹಾಸಿತ್ತು... ಬೆಟ್ಟ ಗುಡ್ಡಗಳ ತಣ್ಣನೆ ಗಾಳಿಗೆ ಹಾಗೆ ನಿದ್ದೆ ಬಂದಿತ್ತು.. 

"ಶ್ರೀ ಶ್ರೀ.. ಏಳಿ ಇದೇನು ಇಲ್ಲಿ ನಿದ್ದೆ ಹೊಡೀತಾ ಇದ್ದೀರಾ.. ?"

ಚಿತ್ರಪರಿಚಿತ ಧ್ವನಿ.. ಕಣ್ಣು ಬಿಟ್ಟಾಗ ಎದುರಲ್ಲಿ DFR .. 

"ಅರೆ DFR ನೀವೇನು ಇಲ್ಲಿ.. ?"

"ಶ್ರೀ .. ಇವರು ಕರೆ ಮಾಡಿ ಬರೋಕೆ ಹೇಳಿದರು.. "

"ಅರೆ ಸಾಹೇಬ್ರೆ.. ಇವರನ್ಯಾಕೆ ಕರೆದಿರಿ.. "

"ಸರ್ ನೀವು ಕೇಳಿದ ಉಪಕರಣ ಇವರಿಗೆ ಗೊತ್ತು ಅಂತ ನಮ್ಮ ತಂದೆ ಹೇಳಿದರು... . ಅದಕ್ಕೆ ಇವರಿಗೆ ಬರೋಕೆ ಹೇಳಿದ್ವಿ.. ಮೇಡಂ.. ಈ ವಯ್ಯಾ.. ಬೆಳಿಗ್ಗೆ ಇಂದ ತಲೆ ತಿಂತಾ ಐತೆ.. ಅದೇನು ಬೇಕು ಕೇಳಿ.. ನಂಗೂ ಸಾಕಾಗೈತೆ.. ಈ ಕೊರೋನಾ ದೆಸೆಯಿಂದ ಇರಲಿಲ್ಲ.. ಈಗ ಚಿಗುರುತ್ತಾ ಇದೆ.. ಗಿರಾಕಿಗಳು ಬಂದು ನಿಂತವ್ರೆ.. ಅವರನ್ನು ಅಟೆಂಡ್ ಮಾಡೋಣ ಅಂದ್ರೆ ಈ ವಯ್ಯಾ ಬಿಡ್ತಾ ಇಲ್ಲ.. ಅದೇನು ಕೇಳಿ ಮೇಡಂ.. ಏ ಚೋಟು ರೂಪ ಮೇಡಂಗೆ ಒಂದು ಸ್ಟ್ರಾಂಗ್ ಕಾಫೀ.. ಮತ್ತೆ ಒಂದು ಡೈರಿ ಮಿಲ್ಕ್ ಚಾಕೊಲೇಟ್ ಬಾರ್ ತಾ.. ಮೇಡಂ ಪ್ಲೀಸ್.. ಬೇಗ ಹೇಳಿ.. " ಎನ್ನುತ್ತಾ ಬೇರೆಯವರನ್ನು ಅಟೆಂಡ್ ಮಾಡೋಕೆ ಹೋದರು.. 

"ಶ್ರೀ.. ಒಂದು ನಿಮಿಷ ಇರಿ.. " ಎಂದು ಹೇಳುತ್ತಾ.. ಯಾರಿಗೋ ಕರೆ ಮಾಡಿದರು.. ನಂತರ ಕರೆ ಮಾಡಿದವರಿಗೆ ಗೂಗಲ್ ನಕ್ಷೆ ಕೂಡ ಕಳಿಸಿದರು.. ಬರೋಕೆ ಸುಲಭ ಆಗಲಿ ಎಂದು.. 

ಬರಿಯ ಏನೂ ಕೆಲಸ ಇಲ್ಲದ್ದರಿಂದ.. ಸುಮ್ಮನೆ ಕಾಲ ಕಳೆಯೋದು ಕಷ್ಟವಾಗಿತ್ತು.. ಶಾಪಿನಲ್ಲಿದ್ದ ಉಪಕರಣಗಳನ್ನು ನೋಡುತ್ತಾ ಸಮಯವನ್ನು ಓಡಿಸಿದರು.. . 

೧೨೦೦ ಸೆಕೆಂಡುಗಳು ಆದವು.. .. ಒಂದು ಆಕ್ಟಿವಾ ಬೈಕ್ ಶಾಪಿನ ಮುಂದೆ ನಿಂತಿತು.. DFR ಮೊಗವರಳಿತು.. "ಅರೆ ನಿವ್ಸ್.. ಸೂಪರ್ ಸರಿಯಾಗಿ ಬಂದಿದ್ದೀರಾ.. ದಾರಿ ಮಿಸ್ ಆಗ್ಲಿಲ್ಲ ತಾನೇ.. ?"

"ರೂಪಕ್ಕ ನೀವು ಕಳಿಸಿದ ನಕ್ಷೆ ಸೀದಾ ಇಲ್ಲಿಗೆ ಕರೆ ತಂದಿತು.. ದಿಕ್ಕು ಸರಿಯಾಗಿ ಸಿಕ್ಕಿದೆ ಈ ನಕ್ಷೆಯಿಂದ..  ಏನು ರೂಪಕ್ಕ ಬರೋಕೆ ಹೇಳಿದ್ದು.. ?"

"ನೋಡಿ ನಿವ್ಸ್ .. ಆ ಕಡೆ ನೋಡಿ"

"ಅರೆ ಶ್ರೀ.. ನೀವು ಇಲ್ಲಿ ಏನು ಸಮಾಚಾರ.....ಏನಿದು ರೂಪಕ್ಕ"

"ನಿವ್ಸ್ ... ಸೋಲ್ ಗೆಳೆಯರಾಗಿರುವ ನಾವು ಒಂದೇ ಮನೆಯಲ್ಲಿ ಹುಟ್ಟಲಿಲ್ಲ.. ಆದರೆ ಒಂದೇ ಮನಸ್ಸು ನಮ್ಮ ಮೂವರದ್ದು.. ನಾವು ನಮ್ಮ ಕೆಲಸಗಳಲ್ಲಿ ಬ್ಯುಸಿ.. ಕೊರೋನಾ ಗಲಾಟೆ.. ಭೇಟಿ ಮಾಡೋಕೆ ಆಗಿರಲಿಲ್ಲ.. ಅದಕ್ಕೆ ಶ್ರೀ ಈ ಉಪಾಯ ಮಾಡಿಯೇ ಮೂವರನ್ನು ಸೇರಿಸಿದ್ದಾರೆ.. "

"ಓಹ್ ಶ್ರೀ.. ಇದು ನಿಮ್ಮ ಪ್ಲಾನ್ ಆ ಆ ಆ.. ಈ ರೀತಿಯ ತರಲೆ ಐಡಿಯಗಳು ನಿಮ್ಮ ತಲೆಗೆ ಮಾತ್ರ ಬರೋದು.. ಆದರೂ ಬಂದಿದ್ದು.. ನಿಮ್ಮನ್ನೆಲ್ಲಾ ಭೇಟಿ ಮಾಡಿದ್ದು ಖುಷಿಯಾಯಿತು.. "

ಶ್ರೀ ಮೊಗದಲ್ಲಿ ನಗು ಬಂದಿದ್ದು.. ಸಂತಸ ಮೂಡಿದ್ದು ಕಂಡಿದ್ದೆ.. ಅಂಗಡಿಯವ ಓಡೋಡಿ ಬಂದು.. "ಸರ್ ನಿಮಗೆ ಬೇಕಾದ ಉಪಕಾರ ಸಿಕ್ತಾ.. ಏ ಚೋಟು.. ಬೇಗ ಬಿಲ್ ಮಾಡ್ಲೆ.. ಈ ವಯ್ಯನನ್ನು ಹೊರಗೆ ಕಳಿಸಿದರೆ ಸಾಕು.. .. ಇಷ್ಟು ಹೊತ್ತಿಗೆ ಹತ್ತು ಕಸ್ಟಮರ್ಸ್ ಆರ್ಡರುಗಳನ್ನು ಪಾರ್ಸೆಲ್ ಮಾಡಬಹುದಿತ್ತು.. " ತಲೆ ಕೆರೆದುಕೊಂಡು ಮತ್ತೆ ಮಾರ್ವಾಡಿ ಟೋಪಿ ಹಾಕಿಕೊಂಡು ದೇವರ ಕಡೆ ನೋಡಿ ಕೈ ಮುಗಿದ.. 

"ಸರ್... ಕೇಳಿದ ಉಪಕರಣ ಇವರೇ.. ನಿವೇದಿತ ಚಿರಂತನ್ ... ಒಂದು ವಾಕ್ಯದಲ್ಲಿ ದೊಡ್ಡಕ್ಷರ, ಸಣ್ಣಕ್ಷರ, ಅಲ್ಪ ವಿರಾಮ, ದೀರ್ಘ ವಿರಾಮ, ಆಶ್ಚರ್ಯಕರ ಚಿನ್ಹೆ, ಪ್ರಶ್ನಾರ್ಥಕ ಚಿನ್ಹೆ.. ಒಂದು ಪದ ಮತ್ತೊಂದು ಪದಗಳ ನಡುವೆ ಕೊಂಚ ಜಾಗ ಕೊಟ್ಟಿದ್ದರೂ ಕೂಡ.. ಸಂದೇಶ ಕಳಿಸಿದವರ ಮನಸ್ಥಿತಿ ಅರಿಯುವ ಈ ರೀತಿಯ ಉಪಕರಣ ನಿಮ್ಮಲ್ಲಿದೆಯೇ.. ಇರಬಹುದು ಎನ್ನುವ ಒಂದು ಕುತೂಹಲ ನನಗೆ ಕಾಡಿತ್ತು. .ಹಾಗಾಗಿ ನಿಮಗೆ ತೊಂದರೆ ಕೊಡಬೇಕಾಯಿತು.. "

"ಸರ್.. ನೀವೊಳ್ಳೆ ಪ್ರಾಣಿ.. ಇದು ದೇವರು ಕಳಿಸಿರುವ ಉಪಕರಣ ಸರ್.. ಆ ದೇವರು ಈ ವಮ್ಮನ ತಲೆಯೊಳಗೆ ಎಲ್ಲಾ ಉಪಕರಣಗಳ ಮಾಹಿತಿಗಳನ್ನು ತುಂಬಿ ಕಳಿಸಿದ್ದಾನೆ.. ಅದಕ್ಕೆ ಈ ವಮ್ಮ ಡಬಲ್ ಡಿಗ್ರಿ ಮಾಡಿರೋದು.. .. ಆದರೂ ಈ ರೀತಿಯ ಉಪಕರಣ ಇದ್ದಿದ್ದರೆ ಈ ಜಗತ್ತು ಎಷ್ಟು ಪ್ರಶಾಂತತೆಯಿಂದ ಕೂಡಿರುತ್ತಿತ್ತು.. ಆಗಲಿ.. ಇಂತಹ ಒಬ್ಬರು ನಿಮ್ಮ ಸೋಲ್ ಗೆಳೆತನದಲ್ಲಿರೋದು ಬಹಳ ಖುಷಿ ತರುವ ವಿಚಾರ.. ದಯವಿಟ್ಟು ತಪ್ಪು ತಿಳಿಯಬೇಡಿ.. ನನಗೂ ನಿಮ್ಮ ಕೋರಿಕೆಯಿಂದ ಕೋಪ ಬಂದಿತ್ತು.. ಹಾಗಾಗಿ ಸ್ವಲ್ಪ ಕೊಂಚ ಖಾರವಾಗಿ ವಯ್ಯಾ ಅಂತೆಲ್ಲ ಹೇಳಿಬಿಟ್ಟೆ.. "

"ಇರಲಿ ಸರ್... ಪರವಾಗಿಲ್ಲ.. ಕೋಪ ಬರೋದೇ ಇಲ್ಲ ನನಗೆ.. ಆದರೆ ನಿಮ್ಮನ್ನು ಗೋಳು ಹುಯ್ಕೊಂಡಿದ್ದು ಖುಷಿ ಕೊಟ್ಟಿತು.. ಆ ರೀತಿಯ ಉಪಕರಣ ಸಿಕ್ಕಿದ್ದಿದ್ದರೆ.. ಇರಲಿ ಬಿಡಿ.. "

"ಶ್ರೀ ನಿಮ್ಮ ಮಹಾಭಾರತ ಸಾಕು.. ಅರೆ ಚೋಟು.. ಮೆಲ್ಲಗೆ ಆ ಕೇಕು ತಗಂಡು ಬಾ.. ನಿವ್ಸ್ ಬನ್ನಿ ಈ ಕಡೆ.. ಕೇಕ್ ಕಟ್ ಮಾಡಿ.. ಜನುಮದಿನ ಆಚರಿಸೋಣ.."

ಕೇಕು ನೋಡಿ ನಿವೇದಿತಾ ಅವರಿಗೆ ಖುಷಿ ಆಯಿತು.. ಕೇಕಿನ ಮೇಲೆ "ನಿವಿಯಸ್ ಆರ್ಟ್ಸ್"  ಅಂತಿತ್ತು.. 

DFR ಉವಾಚ.. "ನಿವ್ಸ್ ಜನುಮದಿನದ ಶುಭಾಶಯಗಳು"

ಅಂಗಡಿಯವ "ಮೇಡಂ ಜನುಮದಿನದ ಶುಭಾಶಯಗಳು"

ಶ್ರೀ ... ಸಿಬಿ ಜನುಮದಿನದ ಶುಭಾಶಯಗಳು.. !

Tuesday, April 13, 2021

ಸೀಮಾವಲೋಕನ .....!

ಅಣ್ಣಾವ್ರ ಕವಿರತ್ನ ಕಾಳಿದಾಸ ಚಿತ್ರವನ್ನು ನೋಡುತ್ತಿದ್ದೆ... 

"ನೋಡಿದ ಆ ಆ  ಕ್ಷಣದಲಿ ನಿಂತೇ ನೀ ಕಣ್ಣಲ್ಲಿ" ಸಾಲುಗಳು ಹಾಗೆ ಮನಸೆಳೆದಿತ್ತು.. ಮನಸ್ಸು ಹಾಗೆ ಹಿಂದಕ್ಕೆ ಜಾರಿತ್ತು.. 

ಅಂತರ್ಜಾಲ ಕೆಟ್ಟದು.. ಅದು ಇದು.. ಅಂತ ನೂರೆಂಟು ಬೇಡದ ಕಾರಣಗಳನ್ನು ನೂರಾರು ಮಂದಿ ಹೇಳಿದ್ದರು.. ನಾ ತಲೆ ಕೆಡಿಸಿಕೊಂಡಿಲ್ಲ.. ನನಗೆ ಅಂತರ್ಜಾಲ ನೂರಾರು ಸುಮಧುರ ಮನದ ಗೆಳೆಯರನನ್ನು ಕೊಟ್ಟಿದೆ.. 

ಬದುಕು ಕವಲು ದಾರಿಗೆ ಹೊರಳಿದಾಗ.. ಸಿಕ್ಕ ಅದ್ಭುತ ಗೆಳತೀ ಇವಳು.. ಹೆಸರಿಗೆ ಸೀಮಾ.. ಆದರೆ ಇವಳ ಪ್ರೀತಿಗೆ ಸೀಮೆಯೆ ಇಲ್ಲ.. ಪುಟ್ಟ ಹಾಯ್ ಇಂದ ಶುರುವಾದ ಪರಿಚಯ. ಮನದ ಒಡತಿಯಾಗಿ ಬರುವ ತನಕ ಹಾದು ಬಂತು.. 

ಆ ಪುಟ್ಟ ಹೃದಯದೊಳಗೆ ಸಾಗರದಷ್ಟು ಪ್ರೀತಿ ತುಂಬಿಕೊಂಡಿರುವ ಸೀಮಾ.. ಸದಾ ನೆಟ್ವರ್ಕ್ ಸಿಗುವ ಮೊಬೈಲ್ ತರಹ.. ನನ್ನ ಜೊತೆಯಲ್ಲಿ ನನ್ನ ನೆರಳಾಗಿ ನಿಂತಿದ್ದಾಳೆ.. 

                                                                                  ****

"ಶ್ರೀ.. ನಿಮ್ಮ ನೆಚ್ಚಿನ ಅಣ್ಣಾವ್ರ ಶೈಲಿಯಲ್ಲಿ ಯಾವುದಾದರೂ ಒಂದು ಸಿನೆಮಾವನ್ನು ಸಮೀಕರಿಸಿ ಏನಾದರೂ ಬರೆಯಿರಿ"

"ಸೀಮು.. ಅದೆಂಗೋ.. ಗೊತ್ತಾಗ್ತಾ ಇಲ್ಲ.."

"ಶ್ರೀ.. ಅದೆಲ್ಲ ಹರಿಕತೆ ಬೇಡ.. ನನ್ನ ಮೇಲೆ ಪ್ರೀತಿ ಇದ್ದರೇ.. ನಿಮ್ಮ ನೆಚ್ಚಿನ ರಾಜಕುಮಾರ್ ಸಿನಿಮಾದ ಬಗ್ಗೆ ಬರೆದು ಹೇಳಿ.. ಅಷ್ಟೇ.. " ತುಸು ಮುನಿಸಿನಿಂದ ಹೇಳಿದಳು.. 

" ಅಣ್ಣಾವ್ರೇ ಇದೊಳ್ಳೆ ಪರೀಕ್ಷೆ ಆಯ್ತಲ್ಲ.. ನೀವೇ ನನ್ನ ಕಾಪಾಡಬೇಕು.. "

ದೇಹದೊಳಗೆ ಏನೋ ಒಂದು ಶಕ್ತಿ ಹೋದ ಅನುಭವ.. ಕೈಗಳು ತಂತಾನೇ ಕೀ ಬೋರ್ಡಿನ ಮೇಲೆ ಹರಿದಾದ ತೊಡಗಿತು.. ಅದರ ಫಲವೇ ಈ ಬರಹ.. !

                                                                                  ****

ಶ್ರುತಿ ಸೇರಿದಾಗ ಸಿನಿಮಾದಲ್ಲಿ ಧರ್ಮಸ್ಥಳದಲ್ಲಿ ಹಾಡುತ್ತಿದ್ದ ಗೀತಾಳನ್ನು ನೋಡಿ ಹಾಡಿಗೆ ಮನಸೋಲುತ್ತಾರೆ.. 

ಅಂತರ್ಜಾಲದಲ್ಲಿ ಸೀಮಾಳನ್ನು ಕಂಡು.. ಅವಳ ಮುಗ್ಧ ಮನಸ್ಸಿಗೆ ಮನ ಸೋಲುತ್ತಾನೆ ಶ್ರೀ.. 

ಕಾರಣಾಂತರಗಳಿಂದ ಗೀತಾ ರಾಜಕುಮಾರ್ ಮನೆಗೆ ಬರುವ ಹಾಗೆ ಆಗುತ್ತದೆ.. 

ಸೀಮಾಳ ಜೊತೆ ಮಾತಾಡುತ್ತ ಮಾತಾಡುತ್ತಾ ತನ್ನ ಮನೆಗೆ ಒಮ್ಮೆ ಬರಲು ಹೇಳುತ್ತಾನೆ.. . 

ಜಾತಕ ಅದು ಇದು ಅಂತ ರಾಜಕುಮಾರ್ ಮನಸ್ಸಿಗೆ ಘಾಸಿಯಾಗಿರುತ್ತದೆ.. 

ವಿಧಿಯ ಆಟದಲ್ಲಿ ಶ್ರೀ ಬದುಕು ಕವಲು ಕಂಡಿರುತ್ತದೆ.. 

ಸುಂದರ ಚಂದದ ಗೀತಾ ರಾಜಕುಮಾರ್ ಮನೆ ಮನವನ್ನು ಆವರಿಸಿಕೊಂಡು.. ರಾಜ್ ಕುಮಾರ್ ಬದುಕನ್ನು ಚಂದ ಮಾಡುತ್ತಾರೆ. 

ಈ ಮುದ್ದು ಸೀಮೂ ಕೂಡ ಹಾಗೆ ಮುರಿದಿದ್ದ ಶ್ರೀ ಬದುಕನ್ನು ಮತ್ತೆ ಎತ್ತಿ ಕಟ್ಟಿ ನಿಲ್ಲಿಸಲು ಶ್ರೀ ಯ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ.. 

ಆಹಾ ಸೂಪರ್ ಸೂಪರ್ ಶ್ರೀ
 

                                                                                  ****

ಶ್ರೀ ಗೀತಾಳನ್ನು ನನ್ನನ್ನು ಸಮೀಕರಿಸಿ ಹೇಳಿ.. 

ಏನೋ ಇದು ಸೀಮು ಇಷ್ಟೊಂದು ಪರೀಕ್ಷೆ.. 

ಹೇ ಬರೀರಿ ಶ್ರೀ.. 

                                                                                  ****

ಗೀತಾಳ ಮುಖ ಪುಟ್ಟದು.. 
ಸೀಮಾಳ ಮುಖ ಪುಟ್ಟದು 

ಗೀತಾಳ ಕಣ್ಣುಗಳು ಸುಂದರ 
ಸೀಮಾಳ ಕಣ್ಣುಗಳು ಸುಂದರ 

ಗೀತಾ ಪುಟ್ಟ ನಾಸಿಕ ನೋಡಲು ಚಂದ 
ಸೀಮಾಳ ಪುಟ್ಟ ನಾಸಿಕ ಅಂದ 

ಗೀತಾಳ ಎತ್ತರದ ನಿಲುವು ಆಕರ್ಷಕ 
ಸೀಮಾಳ ಪುಟ್ಟ ಗೌರಿಯ ಅಂದ ಚಂದ 

ಶ್ರುತಿ ಸೇರಿದಾಗ ಚಿತ್ರದಲ್ಲಿ ರಾಜ್ ಕುಮಾರ್ ಪಾತ್ರದ ಮೇಲೆ ಅಪರಿಮಿತ ಪ್ರೀತಿ 
ಶ್ರೀ ಬದುಕಿಗೆ ಶ್ರುತಿ ಸೇರಿಸಿದ ಸೀಮಾಳ ಪ್ರೀತಿ ಕೂಡ ಅಪರಿಮಿತ.. 

ಗೀತ್ ... ಸೀಮು 


                                                                        ****

ತುಂಹೇ ಕೊಯಿ ಔರ್ ದೇಖೇ ತೋ ಜಲ್ ತಾ ಹೇ ದಿಲ್ 
ಬಡಿ ಮುಷ್ಕಿಲೋ ಸೆ ಸಂಬಲ್ ತಾ ಹೇ ದಿಲ್ 
ಕ್ಯಾ ಕ್ಯಾ ಜತನ್ ಕರತೇ ಹೇ ತುಂಹೆ ಕ್ಯಾ ಪತಾ 
ಹಮೇ ತುಮ್ ಸೆ ಪ್ಯಾರ್ ಕಿತ್ನಾ 
ಎ ಹಮ್ ನಹೀ ಜಾನ್ ತೇ
ಮಗರ್ ಜೀ ನಹಿ ಸಕ್ತೆ ತುಮ್ಹಾರೇ ಬಿನಾ... !

ಪುಟ್ಟ ಹೃದಯದಲ್ಲಿ ಕಡಲಾಳದಷ್ಟು ಪ್ರೀತಿ ಬಚ್ಚಿಟ್ಟುಕೊಂಡಿರುವ ಸೀಮು ಜನುಮದಿನದ ಶುಭಾಶಯಗಳು!!!!


Tuesday, January 19, 2021

ದೇವರು ನಕ್ಕೆ ನಗುತ್ತಾನೆ - ೬

"ಏನೋ ಶ್ರೀ ನನಗೆ ನಗೋಕೆ ಅವಕಾಶನೇ ಕೊಡ್ತಾ ಇಲ್ಲ.. ನಗೋದು ಮರೆತು ಬಿಟ್ಟೆಯ.. ಅಥವ ಜೀವನದ ಜಂಜಾಟ ನಗೋದನ್ನು ಮರೆಸಿ ಬಿಟ್ಟಿದೆಯಾ. "

ಕಣ್ಣು ಬಿಟ್ಟೆ.. ತೇಜೋಮಯನಾದ ಆ ಮಹಾಮಹಿಮ ಕಣ್ಣ ಮುಂದೆ ನಿಂತಿದ್ದ..  ಒಮ್ಮೆ ಕೊಳಲು ಕಂಡರೆ.. ಇನ್ನೊಮ್ಮೆ ಸೊಂಡಿಲು ಕಾಣೋದು.. ಇನ್ನೊಮ್ಮೆ ನಾಲ್ಕು ತಲೆ ಕಾಣೋದು.. ಹೀಗೆ ಬಗೆ ಬಗೆ ರೂಪದಲ್ಲಿ ಕಾಣುವ ಆ ಮಹಾಮಹಿಮ ದರ್ಶನ ಮಾಡಿ ಸಂತುಷ್ಟನಾಗಿ.... ಮೆಲ್ಲಗೆ ಕಣ್ಣು ಮುಚ್ಚಿದೆ.. ಕಣ್ಣು ತುಂಬಿ ಬಂದಿತ್ತು.. ಅರೆ ಹೌದಲ್ವಾ ಈ ದೇವರು ನಗುತ್ತಾನೆ ಅಂಕಣವನ್ನು ಮುಂದುವರೆಸಲು ಆಗಲೇ ಇಲ್ಲವಲ್ಲ.. ಸರಿ ಒಂದು ಲೇಖನ ಬರೆದೆ ಬಿಡೋಣ ಅಂತ ಇವತ್ತು ಆಫೀಸಿನಿಂದ ಬಂದ ಕೂಡಲೇ ಹಠ ತೊಟ್ಟಂತೆ ಕೂತೆ ಬಿಟ್ಟೆ.. ಪರಿಣಾಮ ಈ ಲೇಖನ.... !

                                                                        *****

ಆಫೀಸಿನಲ್ಲಿ ಸರಸರ ಕೆಲಸ ಸಾಗುತ್ತಿತ್ತು.. "ತುಲಾಮಾಸೇತು ಕಾವೇರಿ" ನನ್ನ ಮೊಬೈಲ್ ಶ್ರೀ ನನ್ನ ಎತ್ತಿಕೊಳ್ಳೋ ಅಂತ ಕೂಗತೊಡಗಿತು.. ಸರಿ ಏನಪ್ಪಾ ಸಮಾಚಾರ ಅಂತ ಕರೆ ಸ್ವೀಕರಿಸಿ "ಹಲೋ" ಅಂದೇ.. 

"ಸರ್ ಶ್ರೀಕಾಂತ್ ಮಂಜುನಾಥ್ ಆಲ್ವಾ ಮಾತಾಡ್ತಾ ಇರೋದು"

"ಹೌದು ಮೇಡಂ"

"ಸರ್.. ನಮ್ಮದು ಇನ್ಶೂರೆನ್ಸ್ ಕಂಪನಿ ಇಂದ ಕರೆ... ಈ ವರ್ಷದ ತೆರಿಗೆ ಉಳಿಸೋಕೆ ಒಂದು ಉತ್ತಮ ಉಳಿತಾಯ ಯೋಜನೆ ಇದೆ.. ಅದರ ಬಗ್ಗೆ.... "

ಆಕೆ ಇನ್ನೂ ಹೇಳುತ್ತಲೇ ಇದ್ದರು.. 

"ಮೇಡಂ.. ನಿಮ್ಮ ಕರೆಗೆ ಧನ್ಯವಾದಗಳು ಮೇಡಂ.. ಸದ್ಯಕ್ಕೆ ಯಾವ ಉಳಿತಾಯವೂ ಬೇಡ.. ಆದಾಯವೇ ಮಠ ಹತ್ತಿದೆ.. ನಿಮ್ಮ ಕರೆಗೆ ಧನ್ಯವಾದಗಳು ಮೇಡಂ" ಅಂತ ಕರೆಯನ್ನು ಕಟ್ ಮಾಡೋಕೆ ಹೋದೆ.. 

"ಸರ್.. ನಮ್ಮ ಕಂಪನಿಯ ಉಳಿತಾಯದ ಯೋಜನೆ ಬಗ್ಗೆ ಹೇಳಿಬಿಡುತ್ತೇನೆ.. ನಿಮಗೆ ಇಷ್ಟವಾದರೆ ತಗೊಳ್ಳಿ ಇಲ್ಲವಾದರೆ ಬಿಡಿ.. ಆದರೆ ಹೇಳೋದು ಮಾತ್ರ ಕೇಳಿ ಸರ್" ಅಂದರು 

ನನಗೂ ಕೆಲಸ ಮಾಡಿ ಮಾಡಿ ಸುಸ್ತಾಗಿತ್ತು.. ಸ್ವಲ್ಪ ವಿರಾಮ ಬೇಕಿತ್ತು.. 

"ಸರಿ ಮೇಡಂ ಹೇಳಿ"

"ಸರ್ ನಮ್ಮ ಇನ್ಶೂರೆನ್ಸ್ ಪ್ಲಾನ್ ಹೀಗಿದೆ" ಅಂತ ಗರಗಸ ಶುರುವಾಯಿತು .. ಆ ಕಡೆಯವರಿಗೆ ನನ್ನ ಅನ್ಯಮನಸ್ಕತೆ ಗೊತ್ತಾಯಿತು ಅನ್ನಿಸುತ್ತೆ.. 

"ಸರ್ ನಾ ಹೇಳೋದು ಗೊತ್ತಾಗ್ತಾ ಇದೆಯೇ ಸರ್.. ಈ ಪ್ಲಾನ್ ನಲ್ಲಿ ನೀವು ಒಂದು ಲಕ್ಷ ಕಟ್ಟಿದರೆ.. ಪ್ರತಿ ವರ್ಷ ಮೂವತ್ತು ಸಾವಿರ ಬರುತ್ತೆ ಸರ್.. ಹಾಗೆ ಇದನ್ನು ಕಟ್ಟುತ್ತಾ ಹೋದರೆ.. ಪ್ರತಿ ವರ್ಷವೂ ಬರ್ತಾ ಇರುತ್ತೆ ಸರ್... "

"ಓಕೆ ಮೇಡಂ"

"ನಮ್ಮ ಮಕ್ಕಳಿಗೂ ಬರುತ್ತೆ ಸರ್"

"ಹಾ ನಮ್ಮ ಮಕ್ಕಳ ಏನ್ ಮೇಡಂ ನೀವು ಹೇಳ್ತಾ ಇರೋದು"

"ಸರ್ ಅಂದ್ರೆ... ನೀವು ಇನ್ಶೂರೆನ್ಸ್ ಮಾಡಿಸಿದರೆ ನಿಮ್ಮ ಮಕ್ಕಳೂ ಕೂಡ ಇದರ ಉಪಯೋಗ ಮಾಡಿಕೊಳ್ಳಬಹುದು.. ಅವರೂ ಕೂಡ ಹಣವನ್ನು ಡ್ರಾ ಮಾಡಬಹುದು.. ಮತ್ತೆ ನಾವಿಲ್ಲದೆ ಹೋದರೂ ಮಕ್ಕಳಿಗೆ ಉಪಯೋಗವಾಗುತ್ತದೆ.. "

"ಏನ್ ಮೇಡಂ.. ಏನೇನೋ ಹೇಳ್ತಾ ಇದ್ದೀರಾ"

"ಸರ್.. ಈ ಪ್ಲಾನ್ ತುಂಬಾ ಚೆನ್ನಾಗಿದೆ ಸರ್.. ಇನ್ವೆಸ್ಟ್ ಮಾಡಿ ಸರ್.. ಯಾವಾಗ ಮಾಡ್ತೀರಾ ಸರ್"

"ಮೇಡಂ.. ನಾ ಆಗಲೇ ಹೇಳಿದ್ದೀನಿ.. ನನಗೆ ಇನ್ವೆಸ್ಟ್ ಮಾಡೋಕೆ ಆಸೆಯೂ ಇಲ್ಲ ಅವಕಾಶವೂ ಇಲ್ಲ.. ಧನ್ಯವಾದಗಳು ಮೇಡಂ ನಿಮ್ಮ ಕರೆಗೆ" ಅಂತ ಹೇಳಿ ಕಟ್ ಮಾಡೋಕೆ ಹೋದರೆ.. 

"ಸರ್.. ಈ ಪ್ಲಾನ್ ತುಂಬಾ ಚೆನ್ನಾಗಿದೆ ಇನ್ಶೂರೆನ್ಸ್ ಮಾಡಿಸಿ ಸರ್"

"ಮೇಡಂ.. ನೀವು ಇದನ್ನೇ ಸಂಜೆ ತನಕ ಹೇಳಿದರೂ.. ನಾನೂ ಸುಮ್ಮನೆ ನಿಮ್ಮ ಮಾತುಗಳನ್ನು ಕೇಳ್ತಾ ಇರ್ತೀನಿ.. ಆದರೆ ನನ್ನ ಕಡೆ ಉತ್ತರ ಆಗೋಲ್ಲ ಅಂತಾನೆ ಇರುತ್ತೆ ನಾ ಇನ್ವೆಸ್ಟ್ ಮಾಡೋಲ್ಲ.. ಇನ್ವೆಸ್ಟ್ ಮಾಡುವಷ್ಟು ದುಡ್ಡು ಇಲ್ಲ " 

ಅಷ್ಟು ಹೊತ್ತಿಗೆ ಆಕೆಗೆ ನಗು ಬರೋಕೆ ಶುರುವಾಗಿತ್ತು.. ನನ್ನ ಮಾತುಗಳನ್ನು ಕ್ಕೇಳಿ ಕೇಳಿ.. 

"ಸರ್ ಒಂದು ಪಾಲಿಸಿ ಮಾಡಿಸಿ.. ನಿಮ್ಮ ಸಂಬಳ ಎಷ್ಟು ಕೇಳಬಹುದಾ ಸರ್.. "

"ಮೇಡಂ ಹೆಣ್ಣು ಮಕ್ಕಳ ವಯಸ್ಸು ಗಂಡು ಮಕ್ಕಳ ಸಂಪಾದನೆ ಕೇಳಬಾರದು.. ನಿಮ್ಮ ಕರೆಗೆ ಧನ್ಯವಾದಗಳು ಮೇಡಂ"

ಜೋರಾಗಿ ನಗುತ್ತಾ.. "ಸರ್ ಪ್ಲೀಸ್  ಒಂದು ಪಾಲಿಸಿ ಮಾಡಿಸಿ ಸರ್"

"ಮೇಡಂ ಆಗಲಿ ಈ ಕರೆಯನ್ನು ಸ್ಪೀಕರ್ ಮೋಡಿನಲ್ಲಿ ಇಡುತ್ತೇನೆ.. ಸಂಜೆ ತನಕ ಮಾತಾಡುತ್ತಲೇ ಇರಿ. ನನಗೂ ಆಫೀಸ್ ಕೆಲಸ ಮಾಡೋಕೆ ಸ್ಫೂರ್ತಿ ಬರುತ್ತೆ..ಮುಂದುವರೆಸಿ.. ನಿಮ್ಮ ಕಂಪನಿಯ ಎಲ್ಲಾ ಪಾಲಿಸಗಳ ಬಗ್ಗೆ ಹೇಳೋಕೆ ಶುರು ಮಾಡಿ.. ಓಕೇ ನಾ ಮೇಡಂ"

ಜೋರಾಗಿ ನಕ್ಕು "ಧನ್ಯವಾದಗಳು ಸರ್.. ಪಾಲಿಸಿ ಬೇಕಿದ್ದರೆ ಈ ನಂಬರ್ ಸೇವ್ ಮಾಡಿಕೊಳ್ಳಿ ಸರ್.. ನಿಮ್ಮ ಅಮೂಲ್ಯ ಸಮಯಕ್ಕೆ ಧನ್ಯವಾದಗಳು ಸರ್ " 

"ಹ ಹ ಹ.. ಸರಿ ಮೇಡಂ"

ಕರೆ ಕಟ್ ಆಯಿತು.. 

ಆಫೀಸಿನ ಫಾಲ್ಸ್ ಸೀಲಿಂಗ್ ನೋಡಿದೆ... ಅದರ ಪುಟ್ಟ ಕಂಡಿಯಲ್ಲಿ ದೇವನ ನಗು ಸದ್ದು ಕೇಳಿಸಿತು ... 

"ಶ್ರೀ.. ಈ ಟೆಲಿ ಮಾರ್ಕೆಟಿಂಗ್ ಕರೆಗಳನ್ನು ಹಲವಾರು ಮಂದಿ ಬಯ್ದು ಬಯ್ದು ಕಿರ್ಚಾಡ್ತಾರೆ... ಆದರೆ ನೀನು ಸಮಾಧಾನವಾಗಿ ಕೇಳುತ್ತೀಯೆ ಮತ್ತೆ ಧನ್ಯವಾದಗಳನ್ನು ಹೇಳುತ್ತೀಯೆ... ಅದು ಹೆಂಗೆ.. ಮತ್ತೆ ಯಾಕೆ"

"ಬಾಸ್.. ನನಗೆ ಮೂವತ್ತು ದಿನಗಳನ್ನು ಆಫೀಸಿನ ಕೆಲಸದಲ್ಲಿ ತೊಡಗಿಸಿಕೊಂಡರೆ ಸಂಬಳ ಕೊಡುವುದು.. ಹಾಗೆ ಅವರಿಗೂ ಕೂಡ ದಿನಕ್ಕೆ ಇಷ್ಟು ಕರೆಗಳನ್ನು ಮಾಡಲೇ ಬೇಕು ಅಂತ ಟಾರ್ಗೆಟ್ ಕೊಟ್ಟಿರುತ್ತಾರೆ... ಮತ್ತೆ ಆ ಕರೆಗಳಲ್ಲಿ ಕೆಲವು ಕರೆಗಳನ್ನು ರೆಕಾರ್ಡ್ ಅವರಿಗೆ ಅರಿವಿಲ್ಲದೆ ರೆಕಾರ್ಡ್ ಕೂಡ ಮಾಡ್ತಾರೆ ಅಂತ ಕೇಳಿದ್ದೇನೆ. ಅದು ಅವರ ಕೆಲಸ.. ಅದನ್ನು ಮಾಡಿದರೆ ಅವರಿಗೆ ಸಂಬಳ ಕೊಡುವುದು.. ಅದಕ್ಕೆ ಯಾಕೆ ನಾ ಕಿರುಚಾಡಬೇಕು.. ತಾಳ್ಮೆ ಇಂದ ಉತ್ತರಿಸಿದರೆ ನನ್ನ ಏಕಾಗ್ರತೆ ಹಾಳಾಗೋಲ್ಲ.. ಮತ್ತೆ ಆ ಕಡೆಯವರಿಗೂ ನಿರಾಳ ಮತ್ತೆ ಮನಸ್ಸಿಗೆ ಹಿಂಸೆ ಆಗೋಲ್ಲ.. ಅಂತಹ ಕರೆಗಳು ಬಂದಾಗ.. ಆ ಕ್ಷಣ ನಾ ಅವರ ಸ್ಥಾನದಲ್ಲಿ ನಿಂತು ಮಾತಾಡುತ್ತೇನೆ.. ಆಗ ನನಗೂ ಖುಷಿ ಅವರಿಗೂ ಖುಷಿ"

ದೇವರು ಕಣ್ಣು ಹೊಡೆದು  ಹೆಬ್ಬೆರಳನ್ನು ಎತ್ತಿ ಸೂಪರ್ ಶ್ರೀ ಅಂದ.. ಅಂದಿದ್ದು ಮಾತ್ರ ಕೇಳಿಸಿತು.. ಬೆಳಕಲ್ಲಿ ಬೆಳಕಾಗಿ ಮಾಯವಾದ!!!

ಚಿತ್ರಕೃಪೆ : ಗೂಗಲೇಶ್ವರ 



Thursday, June 18, 2020

ಏನ್ರಿ ಪಾಪ ನಿಮ್ಮ ಕತೆ!!!

ಶ್ರೀರಂಗಪಟ್ಟಣದ ದೇವಸ್ಥಾನದ ಬಳಿ ಜಾತ್ರೆ ನೆಡೆಯುತಿತ್ತು.. 

ಚಿತ್ರ ಕೃಪೆ : ಗೂಗಲೇಶ್ವರ 
ಅನೇಕ ಅಂಗಡಿ ಮುಂಗಟ್ಟುಗಳು ವಿಧವಿಧವಾದ ತಿಂಡಿ  ತಿನಿಸುಗಳನ್ನು, ಬಟ್ಟೆಗಳನ್ನು, ಆಟಿಕೆಗಳನ್ನು ಹೀಗೆ ಅನೇಕ ತರಹಾವರಿ ವಸ್ತುಗಳನ್ನು ಇಟ್ಟು ಮಾರುತ್ತಿದ್ದವು.. 

ಸಣ್ಣ ಪುಟ್ಟ ಹೈಕಳುಗಳು ಖುಷಿ ಪಡುತ್ತಿದ್ದವು.. ಕಾಲೇಜು ಹುಡುಗ ಹುಡುಗಿಯರು ಚಂದ ಚಂದ ಉಡುಪು ತೊಟ್ಟು ಮಿಂಚುತ್ತಿದ್ದವು.. ಹಿರಿಯರು ಸಮೀಪದ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಆಶೀರ್ವಾದ ಪೂರ್ವಕ ಕುಂಕುಮ ಹಚ್ಚಿಕೊಂಡು ಭಕ್ತಿಯನ್ನು ತೋರಿಸುತ್ತಿದ್ದರು.. 

ಚಿತ್ರಕೃಪೆ: ಬಾಲು ಸರ್ 
ಸಂಜೆಯಾಗುತಿತ್ತು.. ಅಲ್ಲಿದ್ದ ಒಂದು ವೇದಿಕೆಯಲ್ಲಿ ಏನೋ ಕಲರವ.. ಮೈಕ್ ತೆಗೆದುಕೊಂಡು ಒಬ್ಬ ಪುಟ್ಟ ಪೋರ ಕಿರುಚುತ್ತಿದ್ದ.. "ಮಾನ್ಯರೇ  ಇಂದು ಏಳು ಘಂಟೆಗೆ ಸರಿಯಾಗಿ ಕುರುಕ್ಷೇತ್ರ ನಾಟಕ ಶುರುವಾಗುತ್ತೆ ಎಲ್ಲರೂ ದಯಮಾಡಿ ಬನ್ನಿ.. ಮಧ್ಯೆ ಮಧ್ಯೆ ಚುರುಮುರು ಹಂಚುತ್ತೇವೆ... ಬನ್ನಿ ಬನ್ನಿ" ಅಂತ ಕೂಗುತ್ತಲೇ ಇದ್ದ.. 

ಅಲ್ಲಿದ್ದ ಒಬ್ಬರು ಸರಿ ದೇವರ ದರ್ಶನ  ಆಗಿತ್ತು.. ಮನೆಗೆ ಹೋಗೋಕೆ ಇನ್ನೂ ಸಮಯವಿತ್ತು.. ಇನ್ನೇನು ಮಾಡೋದು.. ಒಂದಷ್ಟು ಫೋಟೋ ತೆಗೆಯುತ್ತಾ ಸಮಯ ಕಳೆಯೋಕೆ ನಿರ್ಧಾರ ಮಾಡಿದ್ದರು.. ಈ ನಾಟಕದ ವಿಚಾರ ತಿಳಿದು ಕುಶಿಯಾಯ್ತು.. ಓಕೆ ಸಮಯ ಕಳೆಯೋಕೆ ಇನ್ನೊಂದು ಸಾಧನ ಸಿಕ್ಕಿತು ಅಂತ ಆ  ಹೆಜ್ಜೆ ಹಾಕತೊಡಗಿದರು.. 

ಹೊಟ್ಟೆ ಹಸೀತಾ ಇತ್ತು.. ಅಲ್ಲಿಯೇ ಇದ್ದ ಪಾನಿ ಪೂರಿ ಗಾಡಿಯಲ್ಲಿ ಮಸಾಲೆ ಪುರಿ, ಪಾನಿ ಪುರಿ ತಿಂದು ಒಂದೆರಡು ಲೋಟ ಪಾನಿ ಕುಡಿದು.. ಆ ನಾಟಕದ ವೇದಿಕೆಯತ್ತ ಹೆಜ್ಜೆ ಹಾಕಿದರು.. ನಾಟಕ ಇನ್ನೇನು ಶುರುವಾಗಲಿತ್ತು.. 

"ನಮೋ ವೆಂಕಟೇಶ.. ನಮೋ ತಿರುಮಲೇಶ" ಹಾಡಿನಿಂದ ನಾಟಕ ಶುರುವಾಯಿತು.. ನಾಟಕದ ಸೆಟ್, ವೇದಿಕೆ, ಬಣ್ಣ ಬಣ್ಣ ದೀಪಗಳು ವೇದಿಕೆಯನ್ನು ಬೆಳಗುತ್ತಿದ್ದವು.. 

ಪರದೆ ಸರಿಯಿತು.. 

ವೇದಿಕೆಯ ಮಧ್ಯದಲ್ಲಿ ಒಂದು ಬೃಹತ್ ರಥ.. ಮರದ ಕುದುರೆಗಳನ್ನು ಚೆನ್ನಾಗಿ ಸಿಂಗರಿಸಿದ್ದರು.. ರಥದ ಮೇಲೆ ಹನುಮಂತನ ಲಾಂಛನ.. ಎಲ್ಲವೂ ಸುಂದರ.. 

ಅರ್ಜುನ ಚಿಂತಾಕ್ರಾಂತನಾಗಿ ಕೂತಿದ್ದ.. ಶ್ರೀ ಕೃಷ್ಣ ಅರ್ಜುನನ  ಚಿಂತೆಯ ಗೆರೆಯನ್ನು ನೋಡುತ್ತಾ.. 

"ಅರ್ಜುನ ಯಾಕ್ಲಾ ಏನಿದು ಚಿಂತೆ.. ಯುದ್ಧಕ್ಕೆ ಸಜ್ಜಾಗಿರುವೆ.. ದಿವ್ಯಾಸ್ತ್ರಗಳು ಸಾನೇ ಇವೆ.. ಮತ್ಯಾಕೆ ವೇಚನೆ ಮಾಡ್ತಾ ಇದ್ಯಾ.. ಬಿಲ್ಲು ಎತ್ತು ಬಾಣ ಊಡು.. ಸುರು ಹಚ್ಕೋ.. ಆ ದಿನಗಳ ಅವಮಾನ ಇನ್ನೂ ನೆನಪಿದೆ ತಾನೇ.. ನೀವೆಲ್ಲಾ ಉಟ್ಟಿದಾಗಿಂದ ಆ ಕೌರವರು ನಿಮ್ಗೆ ಕೊಟ್ಟಾ ಕ್ವಾಟ್ಲೆ ಎಲ್ಲಾ ಗೆಪ್ತಿ ಮಾಡ್ಕೋ.. ಸುರು ಮಾಡ್ಕೋ ಅರ್ಜುನ.. "

"ಕೃಷ್ಣಣ್ಣ ಯಾಕೋ ತಲೆ ಸಾನೇ ಕೆಟ್ಟೋಗಯ್ತೆ ... ಎದುರು ಇರೋರೆಲ್ಲ ನಮಗೆ ಗೊತ್ತಿರೋರು.. ಜೊತೆಯಲ್ಲಿ ಆಟವಾಡಿ ಬೆಳೆದವರು .. ವಿದ್ಯೆ ಹೇಳಿಕೊಟ್ಟ ಗುರ್ಗಳು.. ತಿದ್ದಿ ತೀಡಿದ ಆಚಾರ್ಯರು.. ಜೊತೆಗೆ ವಯಸ್ಸಾಗಿದ್ದರೂ ಈಗಲೂ ಫಳ ಫಳ ಹೊಳೆಯುತ್ತಿರುವ ಪಿತಾಮಹ ಭೀಷ್ಮರು.. ಇವರೆಲ್ಲರ ಎದುರು ಯುದ್ಧ ಮಾಡಬೇಕು ಅಂದರೆ ಸಾನೇ ಬೇಸರ ಕಣಪ್ಪ ಕೃಷ್ಣಣ್ಣ..  ನೀನೆ ನನ್ನ ಈ ಗೊಂದಲ ಪರಿಹರಿಸಬೇಕು.. "

ನಾಟಕದ ಮಾಸ್ತರು "ಲೋ ಕೃಷ್ಣಣ್ಣ .. ಈಗ ನಿನ್ನ ಡೈಲಾಕು ಸುರು.. ಭಗವದ್ಗೀತೆ ಸುರು ಹಚ್ಕೋ.. ನೀ ಸುಮ್ಕೆ ತುಟಿ ಚಾಲನೆ ಮಾಡು.. ನಾನು ಇಲ್ಲಿಂದಲೇ ಸ್ಲೋಕ ಹೇಳ್ತೀನಿ.. ಸರಿ ನಾ" ಅಂತ ಕೃಷ್ಣನಿಗೆ ಕೇಳುವ ಹಾಗೆ ಸನ್ನೆ ಮಾಡಿ ಹೇಳಿದರು.. 

ಕೃಷ್ಣ ಕಿರೀಟವನ್ನು ಸರಿ ಮಾಡಿಕೊಂಡು ಆ ಕಡೆ ಈ ಕಡೆ ನೋಡ್ತಾ ಇದ್ದ...

ಅರ್ಜುನ ಕಿರೀಟ ತೆಗೆದು ತಲೆಕೆರೆದುಕೊಂಡು..."ಲೋ‌ ಕಿಟ್ಟ.. ನನ್ನ ,,confusion ದೂರ ಮಾಡ್ತೀನಿ ಅಂದು ...ಈಗ ಆ ಕಡೆ ಈ ಕಡೆ ನೋಡ್ರಾ ಇದ್ದೀಯಲ್ಲ..ಏನಾಯ್ತು ನಿಂಗೆ"

"ಇಲ್ಲಾ ಕಣ್ಲಾ ಅರ್ಜುನ..ಆ ಕಡೆ ನೋಡು.. ನಮ್ಮ ನಾಟಕದ ಗುರುಗಳಿಗೆ ಒಬ್ಬ ಸನ್ನೆ ಮಾಡ್ತಾ ಅವ್ನೆ.. ಗುರುಗಳ ಅತ್ರ ಒಂದು ನಾಲ್ಕು ಪೇಜು ಡೈಲಾಕು ಮಿಸ್ ಆಗೈತಂತೆ... ಅದಕೆ ಅಲ್ಲಿ ಫೋಟೋ ತೆಗಿತಾ ಇದ್ದಾರಲ್ಲ .. ಆ ವಯ್ಯಾ ಬಾಲೂ ಸರ್ ಅಂತ .. ..ಆ ವಯ್ಯನಿಗೆ ಎಲ್ಲಾ ಗೊತ್ತೈತೆ..ಭಗವದ್ಗೀತೆ ಕೂಡಾ ಗೊತ್ತು ಅದ್ಕೆ ಅವರು ಒಮ್ಮೆ ಈ ಕಡೆ ಬಂದರೆ ಗುರುಗಳಿಗೆ ಮಿಸ್ ಆದ ಡೈಲಾಕು ಅವರು ಯೋಳ್ತಾರೆ .! ಅಂತೇ ಅದಕ್ಕೆ ವೇದಿಕೆ ಹತ್ರ ಬರೋತರ ನಾ ಸನ್ನೆ ಮಾಡ್ತಾ ಇದ್ದೀನಿ ಕನ್ಲಾ"

"ಲೋ‌ಕಿಟ್ಟಿ..ಭಗವದ್ಗೀತೆ ಈಗ ತಾನೇ ನೀ ಹೇಳ್ತಾ ಇರೋದು..ಅದೆಂಗೆ ಆ ವಯ್ಯನಿಗೆ ಮೊದ್ಲೆ ಗೊತ್ತಾಗುತ್ತೆ..ಅದೆಂಗೆ ಆ  ಡೈಲಾಕುಗಳು ಅವರ ಅತ್ರ ಇರ್ತಾವೆ.. !"

ಆ ವಯ್ಯನ ಪೆಸಾಲಿಟಿ ಅದು..
ಮಹಾಭಾರತದಾಗೆ ಇಲ್ದೇ ಇರೋದು ಪರಂಪಂಚದಾಗೆ  ಇಲ್ಲ..
ಅಂಗೇ ಪರಪಂಚದಾಗೆ ಇರೋದೆಲ್ಲಾ ಈ ವಯ್ಯನಿಗೆ ಗೊತ್ತಿಲ್ಲದೇ ಇಲ್ಲಾ‌..

ಅರ್ಜುನ ತಲೆ ಕೆರೆದುಕೊಂಡು   "ಯುದ್ದಾನೂ ಬೇಡ..ಏನೂ ಬೇಡ" ಅಂತ ಫೋಟಾದಾ

ಆಗ ಕೃಷ್ಣಣ್ಣ ಅರ್ಜುನನ ಹಿಂದೆ ಓಡುತ್ತಾ .. 

"ಅರ್ಜುನ ಅವರೊಂತರಹ ಕೊತ್ತಂಬರೀ ಸೊಪ್ಪು ಇದ್ದ ಹಾಗೆ...
ಅಡಿಗೆಗೆ ಹಾಕಿದರೂ ಘಮ್ ಅನ್ನುತ್ತೆ..
ಕೈಯಲ್ಲಿ ಹಿಡಿದರೂ ಘಮ್ ಅನ್ನುತ್ತೆ.
ನಮ್ಮ ನಾಟಕ ಚೆನ್ನಾಗಿ ಬರೋಕೆ ಬಾಲೂ ಸರ್ ಬೇಕು 
ಅಡಿಗೆ ಚೆನ್ನಾಗಿ ಆಗೋಕೆ ಕೊತ್ತಂಬರಿ ಸೊಪ್ಪು ಬೇಕು"
ಅವರ ಜ್ಞಾನ ಉಪಯೋಗಿಸ್ಕಂಡು ಈ ನಾಟಕ ಮುಗಿಸುವ.. 
ಬಂದ ಜನರಿಗೆ ಕುಸಿ ಆಗ್ಲಿ.. ಏನಂತೀಯಾ.. "

ಇವರಿಬ್ಬರ ಸಂಭಾಷಣೆ ಕೇಳುತ್ತಾ ಜನರೆಲ್ಲಾ ಬಿದ್ದು ಬಿದ್ದು ನಗುತ್ತಾ.. ಫೋಟೋ ತೆಗೆಯುತ್ತಿದ್ದ ಬಾಲು ಸರ್ ಅವರನ್ನು ವೇದಿಕೆಗೆ ಕರೆದು.. ಒಂದು ಹಾರ ಹಾಕಿ ಪುಟ್ಟ ಹೂ  ಗುಚ್ಛ ಕೊಟ್ಟು .. "ಸರ್ ಇವತ್ತು ನಿಮ್ಮ ಜನುಮದಿನ .. ನಿಮಗೆ ಶುಭವಾಗಲಿ.. ಜೊತೆಗೆ ಈ ನಾಟಕವನ್ನು ಒಸಿ ತೂಗಿಸಿಕೊಂಡು ಹೋಗಿ .." ಅನ್ನುತ್ತಾ ಕೈ ಮುಗಿದರು.. 

ಬರ್ತ್ಡೇ ಬಾಯ್ -- ಬಾಲೂ ಸರ್
(ಚಿತ್ರಕೃಪೆ.. ಅವರದೇ ಸಮಯದ ಗೆರೆ)
ಬಾಲೂ ಸರ್ ಅವರಿಗೆ ನಾಚಿಕೆ, ಖುಷಿ, ಸಂತಸ ಎಲ್ಲವೂ ಒಮ್ಮೆಲೇ.. "ಸರಿ ಕಣಪ್ಪ.. ಇದು ನಾ ಇಷ್ಟ ಪಡುವ ಶ್ರೀರಂಗಪಟ್ಟಣ.. ಆಗಲಿ ನಿಮ್ಮ ಜೊತೆ ನನ್ನನ್ನು ಗುರುತಿಸಿಕೊಳ್ಳೋಕೆ ಖುಷಿ ಆಗುತ್ತೆ.. ನಾಟಕಕ್ಕೆ ಶುಭ ಹಾರೈಕೆಗಳು"ಎಂದು ಕೈ ಮುಗಿದರು.. 

ನೆರೆದಿದ್ದ ಜನರೆಲ್ಲಾ ಖುಷಿಯಿಂದ ಜೋರಾಗಿ ಚಪ್ಪಾಳೆ ತಟ್ಟುತ್ತ 

"ಜನುಮದಿನದ ಶುಭಾಶಯಗಳು ಬಾಲೂ ಸರ್.. " ಎಂದು ಶುಭಾಶಯಗಳನ್ನು ಕೋರಿದರು.. 

ನಾಟಕ ಅಭೂತಪೂರ್ವ ಯಶಸ್ಸು ಕಂಡಿತು ಅಂತ ಹೇಳಲೇ ಬೇಕಿಲ್ಲ ಅಲ್ವೇ ..!