Monday, May 28, 2012

ಮಗುವಿನ ವಿವಾಹದ ಮೊದಲ ವಾರ್ಷಿಕೋತ್ಸವ


ಓಹ್ ಗಣೇಶ..ಆಗಲೇ ಒಂದು ವರುಷ ಆಗಿ ಬಿಟ್ಟಿದೆ..ಎಂತಹ ಸುವರ್ಣ ಘಳಿಗೆ ಮತ್ತೆ ಬಂದಿದೆ..

ನನ್ನ ಗುರುಗಳು ಇವತ್ತು ಏನಾದರು ತರಲೆ ಬ್ಲಾಗ್ ಕಲಿಸಿರುತ್ತಾರೆ..ಅದು ಪಕ್ಕ..

ಮೇಲ್ ಬಾಕ್ಸ್ ಚೆಕ್ ಮಾಡಿದಾಗ ಯಾವುದು ಮೇಲ್ ಇರೋದಿಲ್ಲ..

ಗುರುಗಳೇ..ಯಾಕೆ ಹೀಗೆ ಮಾಡಿದಿರಿ...ಅಂತ ಕೇಳೋಕೆ ಫೋನ್ ಮಾಡೋಣ ಅಂದುಕೊಳ್ಳುವಷ್ಟರಲ್ಲಿ..

ಪಿಂಗ್...ಟಾಸ್ಕ್ ಬಾರ್ ಬ್ಲಿಂಕ್ ಆಗೋಕೆ ಶುರುವಾಗುತ್ತೆ..
"ಮಗುವೆ ಗುಡ್ ಮಾರ್ನಿಂಗ್..." "ಮಗು ಎಂದಿದೆ ಮಂಜಿನ ಬಿಂದು..."

"ಮಗು ನಲಿ ಎಂದಿದೆ ಜೀವನದ ಬಿಂದು.."

"ಸುಂದರವಾದ ಜೀವನದಲ್ಲಿ ಒಂದು ಹೊಸತನ ಪ್ರಾರಂಭವಾದ ದಿನ..."

"ವಿಧ್ಯೆ ಇದೆ...ಶ್ರೀ ಇದೆ..ಅದಕ್ಕೆ ಕಳಶವಾಗಿ ನವೀನವಾದ ಹೊಸತನ ಇದೆ.."

"ಇದೆ ಅಲ್ವೇ ಜೀವನದ ಅಮೂಲ್ಯ ಕ್ಷಣಗಳು..."

"ಮಗುವೆ ಮೊದಲ ವರುಷದ ಹರುಷ ಸದಾಕಾಲ ನಾವಿನ್ಯತೆ ಇಂದ ಅವಿರತವಾಗಿ ನಿನ್ನ ಬಾಳಲ್ಲಿ ಇರಲಿ..."
ನನ್ನ ಶುಭ ಹಾರೈಕೆಯನ್ನು ನವೀನ ಅವರಿಗೂ ತಿಳಿಸು"

ಗುರುಗಳೇ..ನೀವು ಎಷ್ಟು ವಿಚಿತ್ರಾನೋ..ನಿಮ್ಮ ಹಾರೈಕೆ ಕೂಡ ಅಷ್ಟೇ ವಿಚಿತ್ರ...? ನಿಮ್ಮ ಹಾರೈಕೆಗೆ ಶಿರ ಬಾಗಿ ವಂದಿಸುವೆನು...

"ಮಗುವೆ ನಿನಗೋಸ್ಕರ...ಕೆಲವು ಸಾಲುಗಳು!!!!!!!!!!!    
ಎಂತ ಸೊಗಸು ಮಗುವಿನ ಮನಸು..
ಎಂಥ ಸೊಗಸು ಮಗುವಿನ ಕನಸು...
ಕನಸೆಲ್ಲ ನನಸಾಗಲಿ..ನನಸಾದ ಕನಸೆಲ್ಲ ಸಿದ್ಧಿಸಲಿ...
ಸಿದ್ದವಾದ ಕನಸೆಲ್ಲ ಮತ್ತೆ ನನಸಾಗಲಿ..
ಜೀವನ ಮಂಗಳಮಯವಾಗಿರಲಿ...
ಮಂಗಳದ ಈ ಸುದಿನ ಮಧುರವಾಗಲಿ..

Friday, May 25, 2012

ಪ್ರಕಾಶ ಅಣ್ಣ - ಆಶಾ ಅತ್ತಿಗೆ ನಿಮಗೆ ವಿವಾಹ ದಿನದ ಶುಭಾಶಯಗಳು

ಶಿವ ತನ್ನೊಳಗೆ ತಾನು ನಗುತಿದ್ದಾಗ ಪಾರ್ವತಿ..

"ಏನೂಂದ್ರೆ ಒಬ್ಬರೇ ನಗುತ್ತ ಇದ್ದೀರಾ? ಏನು ಸಮಾಚಾರ...!!!"

"ಏನಿಲ್ಲ ಪಾರು..ನಾನು ನನ್ನ ಮಡದಿಯನ್ನ ತಲೆಯ ಮೇಲೆ ಕೂರಿಸಿಕೊಂಡೆ.."

"ಅದಕ್ಕೆ"

"ಪೂರ ಕೇಳು...ನಮ್ಮ ಲಕ್ಷ್ಮಿಕಾಂತ ವಕ್ಷಸ್ಥಲದಲ್ಲಿ ತನ್ನ ಮನದನ್ನೆಯನ್ನ ಇರಿಸಿಕೊಂಡ

"ಹೂಊಊ"

ನಮ್ಮ ಚತುರ್ಮುಖ ಸರಸುವನ್ನು ಸದಾ ತನ್ನ ಬಳಿಯಲ್ಲಿಯೇ ಇರಿಸಿಕೊಂಡು ಸುಮಧುರ ವೈಣಿಕ ಗಾನವನ್ನು ಸವಿಯುತಿದ್ದಾನೆ"

"ಸರಿ"

"ಭೂಲೋಕದಲ್ಲಿ ಇವರೆಲ್ಲರನ್ನು ಮೀರಿಸಿದ ಒಬ್ಬ ಬ್ರಹ್ಮ ಇದ್ದಾರೆ"

"ಹೌದೆ!! ಯಾರು ಅದು"?

"ತನ್ನ ಕುಶಲತೆಯಿಂದ ಗೃಹ, ಮನೆಗಳನ್ನೂ ಕಟ್ಟುತ್ತ..ಅಷ್ಟೇ  ಕುಶಾಗ್ರಮತಿಯಿಂದ ಪದಗಳನ್ನು ಜೋಡಿಸುತ್ತ..ಎಷ್ಟೋ ಸ್ನೇಹಿತರಿಗೆ ಒಳ್ಳೆಯ ಸ್ನೇಹಿತರಾಗಿ , "ತಂಗಿಯರಿಗೆ" ಅಣ್ಣನಾಗಿ, ತೆಳ್ಳಗಿರುವರಿಗೆ "ಡುಮ್ಮಣ್ಣನಾಗಿ" ರಂಜಿಸುತ್ತಿರುವ...ಪ್ರಕಾಶ..ತನ್ನ ಹೆಸರಲ್ಲೇ ತನ್ನ ಮನದನ್ನೆಗೆ ಜಾಗ ಕೊಟ್ಟಿರುವುದು ಎಷ್ಟು ಚೆಂದ ಅಲ್ವ..."

"ಓಹ್ ಹೌದು..ನಾನು ಅವರ ಬಗ್ಗೆ ಕೇಳಿದ್ದೆ..ಅವರ "ಹೆಸರೇ ಬೇಡ"..."ಇದೆ ಅದರ ಹೆಸರು" ಪುಸ್ತಕಗಳನ್ನು ಓದಿದ್ದೆ..ಎಷ್ಟು ಶಾಣೆ ಇದೆ ಅವರ ಬರಹ.....ಓಹ್ ಹೌದು..ಇಂದು ಅವರ ವಿವಾಹವಾದ ದಿನ...ಅಲ್ಲವೇ"

"ಹೌದು ಪಾರು..ಅದಕ್ಕೆ ನಿನಗೆ ಅವರ ಪರಿಚಯ ಮಾಡಿಸೋಣ ಅಂತ ಅಂದುಕೊಂಡರೆ..ನಿನಗೆ ಅವರ ಬಗ್ಗೆ ಎಲ್ಲವು ಗೊತ್ತು..ಒಳ್ಳೆಯದೇ ಆಯಿತು ಬಿಡು..."

"ಹೌದೂ ಅಂದ್ರೆ...ಅವರಿಗೆ ಸದಾ ಅವರ ಆಶಯ, ಕನಸು, ಮನಸು, ಗೆಲುವು ಎಲ್ಲವು ಸಿಮೆಂಟ್, ಮರಳು, ನೀರಿನ ಹಾಗೆ ಬೆರೆತು..ಯಶಸ್ವಿ ಆಶಾ ಕಟ್ಟಡದಲ್ಲಿ ಪ್ರಕಾಶಮಾನರಾಗಿ ಆಶಿಶ್  ಸೌಧದಲ್ಲಿ  ಸುಖ ಸಂತೋಷದಲ್ಲಿ ಬೆಳಗಲಿ ಎಂದು ಹಾರೈಸೋಣ..."

ಪ್ರಕಾಶಿಶ್  (ಪ್ರಕಾಶ..ಆಶಾ..ಆಶೀಶ್) ಸುಖ, ಸಂತೋಷ, ನೆಮ್ಮದಿ ನಿಮ್ಮದಾಗಲಿ..

Monday, May 14, 2012


ಆಶಾ ದೇವಿ ಹಾಗು ವಿಷ್ಣು ಜನುಮದಿನ ಶುಭಾಶಯಗಳು (.ತಡವಾಗಿ)



ಗಣೇಶ : ಎಲವೋ ಶ್ರೀಕಾಂತ ...ನಿನ್ನೆ ನಿಮ್ಮ ಕುಟುಂಬ ಇಬ್ಬರದು ಜನ್ಮ ದಿನವಾಗಿತ್ತು..ನಿನ್ನ ಕಡೆಯಿಂದ  
            ಯಾವ ಮಿನ್ಚಂಚೆ ಕೂಡ  ಬರಲಿಲ್ಲ

ಶ್ರೀ: ಹೌದು ಭಗವಂತ...ನಿನ್ನೆ ನಾನು ಕ್ಷೀರ ಸಾಗರಕ್ಕೆ ಹೋಗಿದ್ದೆ..ಹಾಗಾಗಿ ಕಳಿಸಲು ಆಗಲಿಲ್ಲ..

ಗಣೇಶ : ಏನು?!...ಕ್ಷೀರ ಸಾಗರವೇ.? ಅಲ್ಲಿ ನಾರಾಯಣ ಮತ್ತು ಲಕ್ಷ್ಮಿ ಅಮ್ಮನವರ ಕುಟುಂಬ 
            ಕ್ಷೇಮವಾಗಿರುವರೆ?

ಶ್ರೀ: ಇಲ್ಲ..ನಾನು ಹೋಗಿದ್ದು..ಭಾರತ ಭೂಪಟದಲ್ಲಿ ಗೋವಾದಲ್ಲಿರುವ ಒಂದು ಜಲಪಾತ ಅದು..

ಗಣೇಶ: ಓಹ್ ಸರಿ ಸರಿ..ಹಾಗಾದರೆ..ನಾನೇ ಅವರಿಬ್ಬರಿಗೆ ಆಶಿರ್ವಾದಮಾಡುತ್ತೇನೆ..ಸರಿ ನಾ...

ಶ್ರೀ: ನಿಮ್ಮ ಮಾತಿಗೆ ಎದುರಾಡುವರು ಈ ಭುವನದಲ್ಲಿ ಅವರಾರಿರುವರು...ಸರಿ  ಹಾಗೆಯೇ ಮಾಡಿರಿ 

ಗಣೇಶ: ಆಶಾ ಜನುಮದಿನದ ಶುಭಾಶಯಗಳು...ಹಿಂದುಸ್ಥಾನವು ಎಂದು ಮರೆಯದ ನನ್ನ ತರಹ ಮುದ್ದಾದ 
           ಒಂದು ಆರೋಗ್ಯಪೂರ್ಣ ಪುತ್ತಳಿ ಜನ್ಮಿಸಲಿ..
          ವಿಷ್ಣುವೇ ನನ್ನನ್ನು ನೂರಾರು ಬಗೆಯಲ್ಲಿ ಚಿತ್ರಿಸಿ..ನನ್ನನ್ನು ಇನ್ನು ಸುಂದರವಾಗಿ, ಅನೇಕ ಭಂಗಿಯಲ್ಲಿ 
          ಚಿತ್ರಿಸುವ ಕಲೆ ನಿನಗೆ ಸಿದ್ಧಿಸಲಿ.
          ನಿಮ್ಮಿಬ್ಬರಿಗೂ ಜನುಮದಿನ ಶುಭಾಶಯಗಳು..ತಡವಾಗಿಯಾದರೂ ನನ್ನ ಆಶೀರ್ವಾದ ನಿಮಗೆ 
          ತಲುಪಲಿ...
    
ಇಂತಿ ನಿಮ್ಮ
ಶ್ರೀ ಗಣೇಶ 
S/O ಮಂಜುನಾಥ 
ವಿಭೂತಿ ಬೀದಿ..
ರುದ್ರಾಕ್ಷಿ ಪುರ 
ನಂದಿ ದುರ್ಗಾ, ಪಾರ್ವತಿ ಹೋಬಳಿ
ಕೈಲಾಸ ೫೬೦೦೪೦