Friday, November 16, 2012

ಸಂಸಾರ ಸಾಗರದಲ್ಲಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಅಜಾದ್ ಸರ್ ಮತ್ತು ಅಬಿದ ಮೇಡಂ!


ಮೀನು ಸಡಗರದಿಂದ ಓಡಾಡುತ್ತಿತ್ತು..ಅಲ್ಲೇ ನಿಧಾನವಾಗಿ ಬರುತಿದ್ದ ಬಟಾಣಿ ಕೇಳಿತು 

"ಏನಪ್ಪಾ ಮೀನಣ್ಣ..ಏನು ಬಹಳ ಖುಷಿಯಲ್ಲಿದ್ದೀಯ?"

"ಹೌದು ಬಟಾಣಿ..ಇವತ್ತು ಸುಮಧುರ ದಿನ..ನಿನಗೆ ಕಾಯ್ತಾ ಇದ್ದೆ"

"ಏನಪ್ಪಾ ಅದು ನಾನು ನೀನು ಎಷ್ಟು ಒಳ್ಳೆಯ ಗೆಳೆಯರು...ನನಗೆ ದಯವಿಟ್ಟು ಹೇಳು?"

"ನಮ್ಮ ಜೀವನವನ್ನು ಅಭ್ಯಸಿಸಿ..ನಾವು ಬರಿ ತಿನ್ನಲಷ್ಟೇ ಅಲ್ಲ ..ಅಧ್ಯಯನಕ್ಕೂ ನೆರವಾಗುತ್ತೇವೆ.ಅಂತ ತಿಳಿದ ಅನೇಕರಲ್ಲೊಬ್ಬರು ನಮ್ಮ ಪ್ರೀತಿಯ ಡಾಕ್ಟರ್ ಅಜಾದ್...ಅವರಿಂದ ನಮಗೂ ಒಂದು ಹೆಸರು..ನಮ್ಮಿಂದ ಅವರಿಗೂ ಒಂದು ಗೌರವ.. ಅಲ್ಲವೇ.."

"ಹೌದು ಮೀನಣ್ಣ..ನನ್ನ ಸಿಪ್ಪೆಯಿಂದ  ಬೇರ್ಪಡಿಸಿ ಪಾತ್ರೆಯಲ್ಲಿ ಹಾಕಿ ಬೇಯಿಸಿ ಮುಗಿಸುತ್ತಿದ್ದ ಜನರ ಮಧ್ಯೆ ... ನನ್ನನ್ನು ಪುಸ್ತಕದ ಪುಟದ ಮೇಲೆ ನನ್ನ ಮುದ್ದಾದ ಬೈತಲೆ ತೆಗೆದುಕೊಂಡಿರುವ ಚಿತ್ರ ಹಾಕಿ..ನನ್ನನ್ನು ಜಗಜ್ಜಾಹಿರು ಮಾಡಿದ ಕವಿ ಅಜಾದ್ ಬಹು ಅಪರೂಪದ ವ್ಯಕ್ತಿ.. ಅವರು ಅಂದರೆ ನನಗೆ ಬಹಳ ಇಷ್ಟ..ಗೌರವ..."

ಬಟಾಣಿ ಚಿಕ್ಕಿ!

"ಹೌದು ಬಟಾಣಿ...ಜಲನಯನ ಅಂತ ಕರೆದು ನನ್ನನ್ನು ಪದಗಳ ಶರಧಿಯಲ್ಲಿ ಈಜಾಡಲು ಬಿಟ್ಟಿದ್ದಾರೆ..."


ಜಲ ನಯನ! 

"ಮೀನಣ್ಣ ಇಂದು ಅವರು ಸಂಸಾರ ಸಾಗರದ ಬೆಳ್ಳಿ ಹಬ್ಬದ  ಸಂಭ್ರಮದಲ್ಲಿದ್ದಾರೆ...ಅಜಾದ್ ಸರ್ ಮತ್ತು ಅವರ ಸಂಸಾರದ ಸಾರಥಿ ಅಬಿದ ಮೇಡಂ ಮತ್ತು ಅವರ ಸುಖಿ ಸಂಸಾರಕ್ಕೆ ಶುಭಕಾಮನೆಗಳು...ಸದಾ ಅವರ ಸಂಸಾರ... ಸುಖ ಸಂಸಾರದ ಸಾಗರದಲ್ಲಿ ನೆಮ್ಮದಿ ಎನ್ನುವ ಮೀನು...ಬಟಾಣಿ ಎನ್ನುವ ಸಂತಸದ ಜೊತೆ ಚಿಕ್ಕಿ ಚುಕ್ಕಿ ಬಿಡಿಸುತ್ತ ಸಂಭ್ರಮಿಸಲಿ. ಎಂದು ಹಾರೈಸೋಣ..ಬಾ ಗೆಳೆಯ..."


ಸುಂದರ ಸಂಸಾರ!

"ಹೈ...ಬಟಾಣಿ..ಎಷ್ಟು ಸುಂದರವಾದ ಪದಗಳನ್ನು ಜೋಡಿಸಿ ಶುಭಾಶಯಗಳನ್ನು ಸಿದ್ಧ ಮಾಡಿದೀಯ..ನೀನು ನನ್ನ ಗೆಳೆಯ ಎನ್ನುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ.."

ಅಜಾದ್ ಸರ್..ಅಬಿದ ಮೇಡಂ..ವೈವಾಹಿಕ ಜೀವನದ ಬೆಳ್ಳಿಯ ಹಬ್ಬದಲ್ಲಿ ನಿಮ್ಮ ಸುಖಿ ಸಂಸಾರ ಸುವರ್ಣ ಪಥದತ್ತ ಸಾಗಲಿ..ಎಂದು ಬ್ಲಾಗ್ ಲೋಕದ ಎಲ್ಲ ನಕ್ಷತ್ರಗಳ ಜೊತೆಯಲ್ಲಿ ನಿಮ್ಮ ಮಿತ್ರರಾದ ಮೀನಣ್ಣ ಹಾಗು ಬಟಾಣಿ ನಿಮಗೆ ಈ ಸಂತಸದ ಘಳಿಗೆಯಲ್ಲಿ  ಶುಭಾಶಯಗಳನ್ನು ಕೋರುತಿದ್ದೇವೆ!!!